ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುವ ಮಾರ್ಗದರ್ಶಿ

ಈ  ಮಾರ್ಗದರ್ಶಿಯು ನಿಮಗೆ ಹೇಗೆ ಸಹಾಯ ಮಾಡಬಹುದು?

ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುವ ನ್ಯಾಯ ಮಾರ್ಗದರ್ಶಿಯು ಭಾರತದಲ್ಲಿನ ಕಾನೂನು ಸೇವೆಗಳ ಪ್ರಾಧಿಕಾರಗಳಿಂದ ಕಾನೂನು ಸೇವೆಗಳನ್ನು ಉಚಿತವಾಗಿ ಹೇಗೆ ಪಡೆಯುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಾಗರಿಕರಿಗೆ ಸಹಾಯ ಮಾಡುತ್ತದೆ. ಕಾನೂನು ನೆರವು ಕೋರಲು ಅರ್ಹತೆಯ ಮಾನದಂಡಗಳ ಜೊತೆಗೆ ಕಾನೂನು ಸಹಾಯಕ್ಕಾಗಿ ಆನ್ಲೈನ್ ​​ಮತ್ತು ಆಫ್ಲೈನ್ ಅರ್ಜಿಯ ಮಾಹಿತಿಯನ್ನು ಇದು ಒಳಗೊಂಡಿದೆ. ಆರ್ಥಿಕ ಅಥವಾ ಇತರ ಮಿತಿಗಳ ಕಾರಣದಿಂದ ಯಾವುದೇ ನಾಗರಿಕರಿಗೆ ನ್ಯಾಯವನ್ನು ಪಡೆಯುವ ಅವಕಾಶಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕಾನೂನು ಸಹಾಯಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನಾಗರಿಕರು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

ಈ  ಮಾರ್ಗದರ್ಶಿಯಲ್ಲಿ ಚರ್ಚಿಸಲಾದ ಕಾನೂನುಗಳು ಯಾವುವು?

ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುವ ನ್ಯಾಯ ಮಾರ್ಗದರ್ಶಿಯು   ಭಾರತದ ಸಂವಿಧಾನ , 1950, ಅಪರಾಧ ಪ್ರಕ್ರಿಯಾ ಸಂಹಿತೆ, 1973, ಸಿವಿಲ್ ಪ್ರಕ್ರಿಯಾ ಸಂಹಿತೆ, 1908, ಮತ್ತು ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ ಮತ್ತು 1987 ರಲ್ಲಿ ವಿವರಿಸಿರುವ ಕಾನೂನು ನೆರವು ಕುರಿತ ಕಾನೂನನ್ನು ಚರ್ಚಿಸುತ್ತದೆ.

ಅರ್ಜಿ ಸಲ್ಲಿಸುವ ಮೊದಲು ನೆನಪಿಡಬೇಕಾದ ವಿಷಯಗಳು

ಉಚಿತ ಕಾನೂನು ನೆರವು ಇವುಗಳನ್ನು ಒಳಗೊಂಡಿದೆ:

  1. ನ್ಯಾಯಾಲಯ ಅಥವಾ ಇತರ ಕಾನೂನು ಪ್ರಕ್ರಿಯೆಗಳಲ್ಲಿ ನಿಮ್ಮನ್ನು ಪ್ರತಿನಿಧಿಸಲು ವಕೀಲರು.
  2. ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕ್ರಿಯೆ ಶುಲ್ಕಗಳು, ಸಾಕ್ಷಿಗಳ ವೆಚ್ಚಗಳು ಮತ್ತು ಯಾವುದೇ ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಅಥವಾ ಇತರ ಎಲ್ಲಾ ಶುಲ್ಕಗಳು.
  3. ಕಾನೂನು ಪ್ರಕ್ರಿಯೆಗಳ ಮನವಿಗಳನ್ನು,ಮೇಲ್ಮನವಿ ಪತ್ರ,  ದಾಖಲೆಗಳ ಮುದ್ರಣ ಮತ್ತು ಅನುವಾದ ಸೇರಿದಂತೆ ಕಾಗದ ಪತ್ರ, ಪುಸ್ತಕಗಳನ್ನು ಸಿದ್ಧಪಡಿಸುವುದು.
  4. ಕಾನೂನು ದಾಖಲೆಗಳ ಕರಡು ರಚನೆ ಇತ್ಯಾದಿ.
  5. ಕಾನೂನು ಪ್ರಕ್ರಿಯೆಗಳಲ್ಲಿ ತೀರ್ಪುಗಳು, ಆದೇಶಗಳು, ಸಾಕ್ಷ್ಯದ ಟಿಪ್ಪಣಿಗಳು ಮತ್ತು ಇತರ ದಾಖಲೆಗಳ ಪ್ರಮಾಣೀಕೃತ ಪ್ರತಿಗಳನ್ನು ಪೂರೈಸುವುದು.
  6. ಭಾರತದ ಕಾನೂನುಗಳು ಮತ್ತು ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ನೆರವು ಮತ್ತು ಸಲಹೆಗಳನ್ನು ನೀಡುವುದು.

ಕಾನೂನು ನೆರವು ಎಂದರೇನು?

ಉಚಿತ ಕಾನೂನು ನೆರವು ಎಂದರೆ ಯಾವುದೇ  ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಯಾವುದೇ ಪ್ರಕರಣ ಅಥವಾ ಕಾನೂನು ಪ್ರಕ್ರಿಯೆಗಾಗಿ ವಕೀಲರ ಸೇವೆಯನ್ನು ಪಡೆಯಲು ಸಾಧ್ಯವಾಗದ ಬಡ ಮತ್ತು ಬಡತನ ರೇಖೆಯ ಅಂಚಿನಲ್ಲಿರುವ ಗುಂಪುಗಳಿಗೆ ನಾಗರಿಕ ಮತ್ತು ಅಪರಾಧ ವಿಷಯಗಳಲ್ಲಿ ಉಚಿತ ಕಾನೂನು ಸೇವೆಗಳನ್ನು ಒದಗಿಸುವುದು.ಈ ಸೇವೆಗಳ ನೇತೃತ್ವವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ವಹಿಸುತ್ತದೆ ಮತ್ತು ಈ ಸೇವೆಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ, 1987 ಅನ್ವಯಿಸುತ್ತದೆ.

ಕಾನೂನು ಸಹಾಯಕ್ಕಾಗಿ ಯಾರು ಅರ್ಜಿ ಸಲ್ಲಿಸಬಹುದು?

  1. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯ.
  2. ಮಾನವ ಕಳ್ಳಸಾಗಾಣಿಕೆಗೆ ಬಲಿಯಾದ ವ್ಯಕ್ತಿ ಅಥವಾ ಬೇಗಾರ್ 7.
  3. ಮಹಿಳೆ ಅಥವಾ ಮಗು.
  4. ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿ ಅಥವಾ ಅಂಗವೈಕಲ್ಯ ಹೊಂದಿರುವ ವ್ಯಕ್ತಿ.
  5. ಸಾಮೂಹಿಕ ವಿಪತ್ತು, ಜನಾಂಗೀಯ ಹಿಂಸಾಚಾರ, ಜಾತಿ ದೌರ್ಜನ್ಯ, ಪ್ರವಾಹ, ಅನಾವೃಷ್ಟಿ, ಭೂಕಂಪ ಅಥವಾ ಕೈಗಾರಿಕಾ ದುರಂತಕ್ಕೆ ಬಲಿಯಾದ ವ್ಯಕ್ತಿ.
  6. ಕೈಗಾರಿಕಾ ಕೆಲಸಗಾರ 
  7. ಬಂಧಿತರು, ರಕ್ಷಣಾ ಮಂದಿರಗಳು , ಬಾಲ ಮಂದಿರಗಳು ಅಥವಾ ಮನೋವೈದ್ಯಕೀಯ ಆಸ್ಪತ್ರೆ ಅಥವಾ ಮನೋವೈದ್ಯಕೀಯ ನರ್ಸಿಂಗ್ ಹೋಮ್‌ನ ಪಾಲನೆಯಲ್ಲಿರುವವರು. 

ಕಾನೂನು ನೆರವು ಪಡೆಯುವ ಜನರ ಆದಾಯದ ಮಿತಿಗಳು ಯಾವುವು?

ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿ ಅವರು ವಾಸಿಸುವ ರಾಜ್ಯದಲ್ಲಿ ನಿಗದಿಪಡಿಸಲಾದ ನಿರ್ದಿಷ್ಟ ಆದಾಯದ ಮಿತಿಗಿಂತ ಕಡಿಮೆ ಆದಾಯ ಗಳಿಸಿದರೆ ಮಾತ್ರ ಕಾನೂನು ನೆರವು ಪಡೆಯಲು ಅರ್ಹರಾಗಿರುತ್ತಾರೆ. ರಾಜ್ಯಗಳ ಆದಾಯದ ಮಿತಿಗಳನ್ನು ಕೆಳಗೆ ನೀಡಲಾಗಿದೆ:

States/Union Territories Income Ceiling Limit (Per Annum)
1.      Andhra Pradesh Rs. 3,00,000/-
2.      Arunachal Pradesh Rs. 1,00,000/-
3.      Assam Rs. 3, 00, 000/-
4.      Bihar Rs. 1,50,000/-
5.      Chhattisgarh Rs. 1,50,000/-
6.      Goa Rs.3,00,000/-
7.      Gujarat Rs.1,00,000/-
8.      Haryana Rs. 3,00,000/-
9.      Himachal Pradesh Rs. 3,00,000/-
10.    Jammu & Kashmir Rs. 3,00,000/-
11.    Jharkhand Rs. 3,00,000/-
12.    Karnataka Rs. 3,00,000/-
13.    Kerala Rs. 300,000/-
14.    Madhya Pradesh Rs. 2,00,000/-
15.    Maharashtra Rs. 3,00,000/-
16.    Manipur Rs. 3,00,000/-
17.    Meghalaya Rs. 3,00,000/-
18.    Mizoram Rs. 25,000/-
19.    Nagaland Rs. 1,00,000/-
20.    Odisha Rs.3,00,000/-
21.    Punjab Rs. 3,00,000/-
22.    Rajasthan Rs. 3,00,000/-
23.    Sikkim Rs. 3,00,000/-
24.    Telangana Rs.3,00,000/-
25.    Tamil Nadu Rs. 3,00,000/-
26.    Tripura Rs. 1,50,000/-
27. Uttar Pradesh Rs. 3,00,000/-
28. Uttarakhand Rs. 3,00,000/-
29. West Bengal Rs. 1,00,000/-
30. Andaman & Nicobar Islands Rs.3,00,000/-
31. Chandigarh UT Rs. 3,00,000/-
32. Dadra  & Nagar Haveli UT Rs. 15,000/-
33. Daman & Diu Rs. 1,00,000/-
34. Delhi Rs.3,00,000/-
35. Ladakh Rs. 1,00,000/-
36. Lakshadweep Rs. 3,00,000/-
 37.   Puducherry Rs. 1,00,000/-

ನೀವು ಎಲ್ಲಿ ಕಾನೂನು ನೆರವು ಪಡೆಯಬಹುದು?

ಕಾನೂನು ಸಹಾಯಕ್ಕಾಗಿ ನೀವು ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು:

  1. ಆ ತಾಲೂಕಿನ ನ್ಯಾಯಾಲಯದ ಆವರಣದಲ್ಲಿ ಇರುವ ತಾಲೂಕು ಕಾನೂನು ಸೇವಾ ಸಮಿತಿ.
  2. ಜಿಲ್ಲಾ ಕೇಂದ್ರ ಕಛೇರಿಯಲ್ಲಿರುವ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA).
  3. ಸಂಬಂಧಿತ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (SLSA) (ಪ್ರಕರಣಗಳಿಗಾಗಿ, ರಾಜ್ಯ ಮಟ್ಟದಲ್ಲಿ ನಿರ್ವಹಿಸುವ ಸಮಿತಿಗಳು).
  4. ಸಂಬಂಧಪಟ್ಟ ಉಚ್ಚ ನ್ಯಾಯಾಲಯದ ಆವರಣದಲ್ಲಿರುವ ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿ.
  5. ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಂದೆ ಬರುವ ಪ್ರಕರಣಗಳಿಗೆ ಸರ್ವೋಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿ.ಪ್ರತಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA),  ಕಾನೂನು ಸೇವೆಗಳ ಸಮಿತಿ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ( SLSA) ಒಂದು ಮುಂಭಾಗದ ಕಛೇರಿಯನ್ನು ಹೊಂದಿದೆ ಅಲ್ಲಿ ಅರ್ಜಿಯನ್ನು ಸ್ಥಳಾಂತರಿಸಬಹುದು. ಮುಂಭಾಗದ ಕಛೇರಿಯು ಕಾನೂನು ಸೇವೆಗಳ ಪ್ರಾಧಿಕಾರದ ಒಂದು ಕೋಣೆಯಾಗಿದ್ದು, ಅಲ್ಲಿ ಕಾನೂನು ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಯಾವುವು?

ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು, ನಿಮಗೆ ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ:

  • ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಇತ್ಯಾದಿಗಳಂತಹ ಗುರುತಿನ ದಾಖಲೆಗಳು.
  • ಕಾನೂನು ಸಹಾಯಕ್ಕಾಗಿ ನಿಮ್ಮ ಅರ್ಹತೆಯನ್ನು ಸಾಬೀತುಪಡಿಸುವ ಶಪಥಪತ್ರ. ಉದಾಹರಣೆಗೆ, ಅವರ ಆದಾಯವು ನಿರ್ದಿಷ್ಟಪಡಿಸಿದ ಮಟ್ಟಕ್ಕಿಂತ ಕಡಿಮೆ ಇರುವ ಕಾರಣ ಅವರು ಅರ್ಹರು ಎಂದು ಅವರು ಹೇಳಿಕೊಳ್ಳುತ್ತಿದ್ದರೆ, ಅವರು ತಮ್ಮ ಆದಾಯದ ಅಫಿಡವಿಟ್/ಶಪಥಪತ್ರವನ್ನು ದಾಖಲೆಯಾಗಿ ನೀಡಬೇಕು.
ಮೇಲಿನ ದಾಖಲೆಗಳ ಜೊತೆಗೆ, ನಿಮ್ಮ ರಾಜ್ಯದಲ್ಲಿ ಕೆಲವು ಹೆಚ್ಚುವರಿ ದಾಖಲೆಗಳು ಬೇಕಾಗಬಹುದು. ಅಗತ್ಯವಿರುವ ದಾಖಲೆಗಳ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ಹತ್ತಿರದ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ.

ಅರ್ಜಿಯನ್ನು ಹೇಗೆ ಸಲ್ಲಿಸುವುದು

ಸ್ವತಃ ಮತ್ತು ಆನ್‌ಲೈನ್ನಲ್ಲಿ :

ನೀವು ಎರಡು ರೀತಿಯಲ್ಲಿ ಕಾನೂನು ಸಹಾಯಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು: ಸ್ವತಃ ಮತ್ತು ಆನ್‌ಲೈನ್ನಲ್ಲಿ.

ನೀವು ಸ್ವತಃ ಕಾನೂನು ನೆರವು ಅರ್ಜಿಯನ್ನು ಹೇಗೆ ಸಲ್ಲಿಸಬಹುದು?

ಸ್ವತಃ ಅರ್ಜಿಯನ್ನು ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

• ನಿಮ್ಮ ಜಿಲ್ಲೆಯ ಹತ್ತಿರದ ಕಾನೂನು ಸೇವಾ ಪ್ರಾಧಿಕಾರದ ಮುಂಭಾಗದ ಕಛೇರಿಗೆ ಹೋಗಿ.

• ನಿಮ್ಮ ರಾಜ್ಯದ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಲು ನೀವು ಬಯಸಿದರೆ ಕಛೇರಿ ಸಮಯದಲ್ಲಿ ಅವರ ಮುಂಭಾಗದ ಕಚೇರಿಗೆ ಹೋಗಿ.

• ಕಾನೂನು ಸೇವಾ ಪ್ರಾಧಿಕಾರದಲ್ಲಿ ಲಭ್ಯವಿರುವ ಸಿದ್ಧ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

• ನೀವು ಸರಳವಾದ ಕಾಗದದ ಮೇಲೆ ಲಿಖಿತವಾಗಿ ಅರ್ಜಿಯನ್ನು ಸಹ ಬರೆಯಬಹುದು, ಆ ಅರ್ಜಿಯು ಒಳಗೊಳ್ಳಬೇಕಾದ ಅಗತ್ಯ ವಿವರಗಳೆಂದರೆ, ಅವರ ಹೆಸರು, ಲಿಂಗ, ವಸತಿ ವಿಳಾಸ, ಉದ್ಯೋಗ ಸ್ಥಿತಿ, ರಾಷ್ಟ್ರೀಯತೆ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಆಗಿದ್ದರೆ (ಪ್ರಮಾಣಪತ್ರದ ರೂಪದಲ್ಲಿ ಬೆಂಬಲದ ಪುರಾವೆಯೊಂದಿಗೆ), ತಿಂಗಳಿಗೆ ಆದಾಯ (ಶಪಥಪತ್ರದೊಂದಿಗೆ), ಕಾನೂನು ನೆರವು ಅಗತ್ಯವಿರುವ ಪ್ರಕರಣ ಮತ್ತು ಕಾನೂನು ನೆರವು ಪಡೆಯಲು ಕಾರಣ.

• ನೀವು ಭರ್ತಿ ಮಾಡಿದ ಅರ್ಜಿಯನ್ನು ಖುದ್ದು ಕಚೇರಿಯಲ್ಲಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.

• ಒಬ್ಬ ಪ್ಯಾರಾಲೀಗಲ್ (ಕಾನೂನು ಸಹಾಯಕ )ಸ್ವಯಂಸೇವಕ ಅಥವಾ ಪ್ರಾಧಿಕಾರದ ಅಧಿಕಾರಿಯು ನಿಮಗೆ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳು, ಸ್ಪಷ್ಟೀಕರಣ ಅಥವಾ ಅಗತ್ಯವಿರುವ ಇತರ ದಾಖಲೆಗಳ ಕುರಿತು ಮಾರ್ಗದರ್ಶನ ನೀಡುತ್ತಾರೆ.

ನೀವು ಆನ್‌ಲೈನ್ ಕಾನೂನು ನೆರವು ಅರ್ಜಿಯನ್ನು ಹೇಗೆ ಸಲ್ಲಿಸುತ್ತೀರಿ?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

1. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಸೇವೆಗಳ ನಿರ್ವಹಣಾ ವ್ಯವಸ್ಥೆಗೆ ಹೋಗಿ, ಅಗತ್ಯವಿದ್ದರೆ ಕನ್ನಡ /ಇಂಗ್ಲಿಷ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ವೆಬ್ಸೈಟ್ನ ಭಾಷೆಯನ್ನು ಬದಲಾಯಿಸಿ. 15.

2. ಕಾನೂನು ಸೇವೆಗಳಿಗಾಗಿ ‘ಕಾನೂನು ನೆರವು ಅರ್ಜಿ ’/ ‘ಅಪ್ಲೈ ಲೀಗಲ್ ಏಡ್ (Apply Legal Aid)’ ಮೇಲೆ ಕ್ಲಿಕ್ ಮಾಡಿ.

3. ಅರ್ಜಿಯ ಮೇಲಿನ ಎಡಭಾಗದಲ್ಲಿರುವ ಕನ್ನಡ /ಇಂಗ್ಲಿಷ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್‌ನ ಭಾಷೆಯನ್ನು ಬದಲಾಯಿಸಿ. .

4. ನೀವು ಅರ್ಜಿ ಸಲ್ಲಿಸಲು ಯೋಜಿಸಿರುವ ಕಾನೂನು ಸೇವಾ ಪ್ರಾಧಿಕಾರವನ್ನು ಆಯ್ಕೆಮಾಡಿ.

5. ನೀವು ಅರ್ಜಿಯನ್ನು ಸಲ್ಲಿಸಲು ಬಯಸುವ ರಾಜ್ಯ, ಜಿಲ್ಲೆ ಅಥವಾ ತಾಲ್ಲೂಕನ್ನು ಆಯ್ಕೆಮಾಡಿ.

6. ಕಾನೂನು ಸಮಸ್ಯೆಯ ಸ್ವರೂಪವನ್ನು ಭರ್ತಿ ಮಾಡಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ, ನಿವೃತ್ತಿ ಬಾಕಿಗಳು ಆದಾಯ/ಭೂಮಿ/ತೆರಿಗೆ, ಸಾಮಾಜಿಕ ಅನಿಷ್ಟಗಳು ಇತ್ಯಾದಿಗಳನ್ನು ಒಳಗೊಂಡಂತೆ ಡ್ರಾಪ್‌ ಡೌನ್‌ನಲ್ಲಿ ನೀಡಲಾದ ಆಯ್ಕೆಗಳನ್ನು ಆರಿಸಿ.

7. ನೀವು ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಸಮಸ್ಯೆಯ ಸಾರಾಂಶವನ್ನು ಭರ್ತಿ ಮಾಡಿ.

8. ಹೆಸರು, ಲಿಂಗ, ಪ್ರಕರಣ, ಜಾತಿ ಪ್ರಮಾಣಪತ್ರ, ವಾರ್ಷಿಕ ಆದಾಯ ಮುಂತಾದ ವೈಯಕ್ತಿಕ ವಿವರಗಳನ್ನು ಸೇರಿಸಿ.

9. ಮೊಕದ್ದಮೆ ಪ್ರಕಾರ, ನ್ಯಾಯಾಲಯದ ಪ್ರಕಾರ, ಮೊಕದ್ದಮೆ ಸಂಖ್ಯೆ. ಇತ್ಯಾದಿಯಾಗಿ ಯಾವುದೇ ಹಿಂದಿನ ಪ್ರಕರಣಗಳಿಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಿ

10. ನೀವು ಹೆಚ್ಚುವರಿ ಮಾಹಿತಿಯನ್ನು ಅಥವಾ ಪ್ರಕರಣಹೊಂದಿದ್ದರೆ ದಾಖಲೆಗಳನ್ನು ಲಗತ್ತಿಸಿ ಮತ್ತು ಕ್ಲಿಕ್ ಮಾಡಿ ಸಲ್ಲಿಸಿ

11. ನಂತರದ ದಿನಗಳಲ್ಲಿ ಅಪ್ಲಿಕೇಶನ್ ಅನ್ನು ಟ್ರಾಕ್ ಮಾಡಲು ನೀವು ಬಳಸಬಹುದಾದ ಡೈರಿ ಸಂಖ್ಯೆಯನ್ನು ಪಡೆದುಕೊಳ್ಳಿ.

ಅರ್ಜಿಯನ್ನು ಇಮೇಲ್ ಮೂಲಕ ಸಲ್ಲಿಸಬಹುದೆ?

ಹೌದು. ನೀವು nalsa-dla@nic.in ನಲ್ಲಿ ರಾಷ್ಟ್ತ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ(NALSA)  ಇಮೇಲ್ ಮೂಲಕ ಅರ್ಜಿಯನ್ನು ಕಳುಹಿಸಬಹುದು. ಇಮೇಲ್‌ನಲ್ಲಿ ಅಗತ್ಯ ವಿವರಗಳನ್ನು ನಮೂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ – ಹೆಸರು, ಲಿಂಗ, ವಸತಿ ವಿಳಾಸ, ಉದ್ಯೋಗದ ಸ್ಥಿತಿ, ರಾಷ್ಟ್ರೀಯತೆ, SC/ST (ಪ್ರಮಾಣಪತ್ರದ ರೂಪದಲ್ಲಿ ದಾಖಲೆಯೊಂದಿಗೆ), ತಿಂಗಳ ಆದಾಯ (ಶಪಥಪತ್ರದೊಂದಿಗೆ), ಕಾನೂನು ಸಹಾಯದ ಅಗತ್ಯವಿದೆ, ಕಾನೂನು ನೆರವು ಪಡೆಯಲು ಕಾರಣ, ಇತ್ಯಾದಿ.

ಕಾನೂನು ನೆರವು ಅರ್ಜಿಯನ್ನು ಹೇಗೆ ಪ್ರಕ್ರಿಯೆಗೊಳಿಸಲಾಗುತ್ತದೆ?

ಒಮ್ಮೆ ನೀವು ಅರ್ಜಿಯನ್ನು ಸಲ್ಲಿಸಿದರೆ, ಕಾನೂನು ಸೇವಾ ಪ್ರಾಧಿಕಾರವು:

  • ಮುಂದಿನ ಹಂತಗಳನ್ನು ನಿರ್ಧರಿಸಲು ಅರ್ಜಿಯನ್ನು ಪರೀಕ್ಷಿಸಿ
  • ಅರ್ಜಿಯನ್ನು ಸ್ವೀಕರಿಸಿದ 7 ದಿನಗಳಲ್ಲಿ, ಅರ್ಜಿಯನ್ನು ಸ್ವೀಕರಿಸಲಾಗುವುದು ಅಥವಾ ತಿರಸ್ಕರಿಸಲಾಗುವುದು
  • ನಿಮ್ಮ ವಸತಿ ವಿಳಾಸ ಅಥವಾ ಇಮೇಲ್ ವಿಳಾಸದ ಮೂಲಕ ತಿಳಿಸಲಾಗುವುದು ಅಥವಾ ನೀವು ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ್ದರೆ, ಅರ್ಜಿಯ ಸ್ಥಿತಿಯನ್ನು ನವೀಕರಿಸುವರು, ಆಗ ನೀವು ಡೈರಿ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
  • ಅರ್ಜಿಯನ್ನು ಸ್ವೀಕರಿಸಿದರೆ, ನಿಯೋಜಿಸಲಾದ ವಕೀಲರ ಬಗ್ಗೆ ನಿಮಗೆ ಮಾಹಿತಿ ನೀಡುತ್ತದೆ.
  • ವಕೀಲರಿಗೆ ಮತ್ತು ಅರ್ಜಿದಾರರಿಗೆ ನೇಮಕಾತಿ ಪತ್ರವನ್ನು (ವಕಲತ್ನಾಮ) ನೀಡಿ.

ಕಾನೂನು ನೆರವು ನಿರಾಕರಣೆ ಮತ್ತು ಹಿಂತೆಗೆದುಕೊಳ್ಳುವಿಕೆ:

ಕಾನೂನು ಸಹಾಯವನ್ನು ನಿರಾಕರಿಸಬಹುದೇ ಅಥವಾ ನಂತರ ಹಿಂಪಡೆಯಬಹುದೇ?

ಕಾನೂನು ಸಹಾಯವನ್ನು ಎರಡು ಹಂತಗಳಲ್ಲಿ ನಿರಾಕರಿಸಬಹುದು – ಅರ್ಜಿ ಸಲ್ಲಿಸುವ ಮೊದಲು ಆರಂಭಿಕ ಹಂತದಲ್ಲಿ ಅಂದರೆ ಅರ್ಜಿಯನ್ನು ಸ್ವೀಕರಿಸುವ ಮುನ್ನ ಮತ್ತು ಅರ್ಜಿಯನ್ನು ಸ್ವೀಕರಿಸಿದ ನಂತರ  ಕಾನೂನು ನೆರವು ಒದಗಿಸಿದ ನಂತರದ ಹಂತದಲ್ಲಿ.

ಈ ಕಾರಣಕ್ಕಾಗಿ ಅರ್ಜಿದಾರರಾಗಿದ್ದರೆ ಕಾನೂನು ಸಹಾಯವನ್ನು ನಿರಾಕರಿಸಬಹುದು ಅಥವಾ ಹಿಂಪಡೆಯಬಹುದು:

• ಕಾನೂನು ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಅನರ್ಹವಾಗಿದ್ದರೆ.

• ಆದಯವು ರಾಜ್ಯಗಳು ನೀಡಿದ ಆದಾಯ ಮಿತಿಗಿಂತ ಹೆಚ್ಚಾಗಿದ್ದರೆ .

• ತಪ್ಪು ನಿರೂಪಣೆ ಅಥವಾ ವಂಚನೆಯಿಂದ ಕಾನೂನು ಸೇವೆಗಳನ್ನು ಪಡೆಯುತ್ತಿದ್ದರೆ.

• ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಅಥವಾ ಕಾನೂನು ಸೇವೆಗಳ ವಕೀಲರೊಂದಿಗೆ ಸಹಕರಿಸದಿದ್ದರೆ.

• ಕಾನೂನು ಸೇವೆಗಳ ಪ್ರಾಧಿಕಾರದಿಂದ ವಕೀಲರನ್ನು  ನಿಯೋಜಿಸಲಾಗಿದ್ದರೂ  ಪ್ರಕರಣಕ್ಕೆ ಖಾಸಗಿಯಾಗಿ ಮತ್ತೊಬ್ಬ ವಕೀಲರನ್ನು ತೊಡಗಿಸಿಕೊಂಡರೆ.

• ಅರ್ಜಿದಾರರ ಸಾವು ಸಂಭವಿಸಿದರೆ. ಹಕ್ಕುಗಳು ಅಥವಾ ಹೊಣೆಗಾರಿಕೆಯು ಉಳಿದಿರುವ ಸಿವಿಲ್ ಪ್ರಕರಣಗಳನ್ನು ಹೊರತುಪಡಿಸಿ.

• ಕಾನೂನು ಅಥವಾ ಕಾನೂನು ಸೇವೆಗಳ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ.

ನೀವು ಮೇಲ್ಮನವಿಯನ್ನು ಹೇಗೆ ಸಲ್ಲಿಸುತ್ತೀರಿ?

ಕಾನೂನು ಸೇವೆಗಳ ಅರ್ಜಿಯನ್ನು ಸದಸ್ಯ-ಕಾರ್ಯದರ್ಶಿ ಅಥವಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಪರಿಶೀಲಿಸುತ್ತಾರೆ.

ಕೈಗೊಂಡ ನಿರ್ಧಾರದಿಂದ ನೀವು ಬಾಧಿತರಾಗಿದ್ದರೆ, ಕಾರ್ಯಾಧ್ಯಕ್ಷರು ಅಥವಾ ಕಾನೂನು ಸೇವಾ ಪ್ರಾಧಿಕಾರದ  ಅಧ್ಯಕ್ಷರಿಗೆ ಮೇಲ್ಮನವಿ ಸಲ್ಲಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಮತ್ತು ಮೇಲ್ಮನವಿಯಿಂದ ಬರುವ ನಿರ್ಧಾರವು ಅಂತಿಮವಾಗಿರುತ್ತದೆ.

ವಕೀಲರು ಅಥವಾ ಕಾನೂನು ಸೇವೆಗಳ ಪ್ರಾಧಿಕಾರದ ವಿರುದ್ಧದೂರು ನೀಡುವುದು:

ನೀವು ಎಲ್ಲಿ ದೂರು ದಾಖಲಿಸಬಹದು?

ಅವರು ಅರ್ಜಿ ಸಲ್ಲಿಸಿದ ಪ್ರಾಧಿಕಾರಕ್ಕಿಂತ ಮೇಲಿನ ಪ್ರಾಧಿಕಾರಕ್ಕೆ ನೀವು ದೂರು ಸಲ್ಲಿಸಬಹುದು, ಈ ಕೆಳಗಿನ ಕ್ರಮದಲ್ಲಿ:

National Legal Services Authority

                          ↑

State Legal Services Authority

                          ↑

District Legal Services Authority

                          ↑

Taluk Legal Services Authority

ನಿಯೋಜಿಸಲಾದ ವಕೀಲರ ನಡವಳಿಕೆಯ ಬಗ್ಗೆ ನೀವು ಹೇಗೆ ದೂರು ಸಲ್ಲಿಸಬಹದು?

ನಿಯೋಜಿಸಲಾದ ವಕೀಲರ ನಡವಳಿಕೆಯಿಂದ ನೀವು ಅತೃಪ್ತರಾಗಿದ್ದರೆ, ನೀವು ನಿಯೋಜಿಸಿದ ಪ್ರಾಧಿಕಾರಕ್ಕೆ ಔಪಚಾರಿಕ ದೂರನ್ನು ಸಲ್ಲಿಸಬಹದು.

1. ಸರಳವಾದ ಕಾಗದದ ಅರ್ಜಿಯನ್ನು ಬರೆಯುವುದು, ಅದನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸುವುದು

2. ಸೂಕ್ತ ಪ್ರಾಧಿಕಾರ ಅಥವಾ NALSA ಗೆ ಇಮೇಲ್ ಬರೆಯುವುದು (nalsa-dla@nic.in ನಲ್ಲಿ)

3. NALSA ವೆಬ್‌ಸೈಟ್ ಅಥವಾ ಅಧಿಕಾರದ ಸಂಬಂಧಿತ ವೆಬ್‌ಸೈಟ್‌ನಲ್ಲಿ “ಕುಂದುಕೊರತೆ ಪರಿಹಾರ” ಆಯ್ಕೆಯನ್ನು ಪ್ರವೇಶಿಸುವುದು. ವಕೀಲರೊಂದಿಗೆ ನೀವು ಎದುರಿಸುತ್ತಿರುವ ಸಮಸ್ಯೆಯನ್ನು ದೂರಿನಲ್ಲಿ ವಿವರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸಂಪನ್ಮೂಲಗಳು:

ಪರಿಶೀಲನಾ ಪಟ್ಟಿ:

1.ಅರ್ಜಿದಾರರು ಉಚಿತ ಕಾನೂನು ಸಹಾಯಕ್ಕೆ ಅರ್ಹರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಿ.

2. ಅರ್ಜಿದಾರರು ಕಾನೂನು ನೆರವು ಪಡೆಯಲು ಅಗತ್ಯವಿರುವ ಎಲ್ಲಾ ಸಂಬಂಧಿತ ದಾಖಲೆಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ.

3. ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾದ ಮೋಡ್ ಅನ್ನು ನಿರ್ಧರಿಸಿ.

4. ಆಫ್‌ಲೈನ್ ಮೋಡ್ ಅನ್ನು ಆರಿಸಿದರೆ ಹತ್ತಿರದ ಕಾನೂನು ಸೇವೆಗಳ ಪ್ರಾಧಿಕಾರವನ್ನು ಭೇಟಿ ಮಾಡಿ .

5. ಕಾನೂನು ನೆರವು ಅರ್ಜಿ ನಮೂನೆ ಪಡೆಯಲು,ಕಾನೂನು ಸಲಹೆ ಪಡೆಯಲು, ಪ್ರಕರಣದ ಸ್ಥಿತಿಯನ್ನು ತಿಳಿಯಲು ಮತ್ತು ಯಾವುದೇ ಮುಂದಿನ ಕಾನೂನು ನೆರವು ಪಡೆಯಲು ಸಂಬಂಧಪಟ್ಟ ಕಾನೂನು ಸೇವೆಗಳ ಪ್ರಾಧಿಕಾರದ ಮುಂಭಾಗದ ಕಛೇರಿಯನ್ನು ಸಂಪರ್ಕಿಸಿ.

ಮಾಹಿತಿಯ ಮೂಲಗಳು:

1.ಉಚಿತ ಕಾನೂನು ನೆರವು / ಅರ್ಜಿಯ ವಿಧಾನ, ರಾಷ್ಟ್ರೀಯ ಕಾನೂನು ಸೇವೆಗಳನ್ನು ಕ್ಲೈಮ್ ಮಾಡುವುದು

ಪ್ರಾಧಿಕಾರ, https://nalsa.gov.in/services/legal-aid/claiming-free-legal-aid ನಲ್ಲಿ ಲಭ್ಯವಿದೆ

ಅಪ್ಲಿಕೇಶನ್-ವಿಧಾನ

2. ಪ್ರಾರಂಭಿಕ ಮಾರ್ಗದರ್ಶಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, https://nalsa ನಲ್ಲಿ ಲಭ್ಯವಿದೆ.

gov.in/lsams/pdf/NALSA-Getting_Started_Guide_0.1.pdf

3. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ವೆಬ್‌ಸೈಟ್‌ಗಳು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ,

https://nalsa.gov.in/home ನಲ್ಲಿ ಲಭ್ಯವಿದೆ

4. ಮುಂಭಾಗದ ಕಚೇರಿ ಮಾರ್ಗಸೂಚಿಗಳು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, https://nalsa ನಲ್ಲಿ ಲಭ್ಯವಿದೆ.

gov.in/acts-rules/guidelines/front-office-guidelines

5. ಕಾನೂನು ನೆರವು, ನ್ಯಾಯ, https://nyaaya.org/topic/legal-aid/ ನಲ್ಲಿ ಲಭ್ಯವಿದೆ

6. FAQ ಗಳು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, https://nalsa.gov.in/faqs ನಲ್ಲಿ ಲಭ್ಯವಿದೆ

7. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳು)

ನಿಯಮಗಳು, 2010 https://nalsa.gov.in/acts-rules/regulations/national ನಲ್ಲಿ ಲಭ್ಯವಿದೆ

ಕಾನೂನು-ಸೇವೆಗಳು-ಅಧಿಕಾರ-ಮುಕ್ತ-ಮತ್ತು-ಸಮರ್ಥ-ಕಾನೂನು-ಸೇವೆಗಳು-ನಿಯಮಗಳು-2010

ಪದಕೋಶ:

ಫ್ರಂಟ್ ಆಫೀಸ್(ಮುಂಭಾಗದ ಕಛೇರಿ): ಫ್ರಂಟ್ ಆಫೀಸ್ ಎಂದರೆ ಕಾನೂನು ಸೇವೆಗಳ ಸಂಸ್ಥೆಯಲ್ಲಿ ಕಾನೂನು ಸೇವೆಗಳು ಲಭ್ಯವಿರುವ ಕೊಠಡಿ. ಮುಂಭಾಗದ ಕಛೇರಿಯಲ್ಲಿ ನಿಯೋಜಿತ ರೀಟೈನರ್ ವಕೀಲರು, ಪ್ಯಾರಾ ಲೀಗಲ್ ಸ್ವಯಂಸೇವಕರು (PLVs) ಮತ್ತು ಪ್ಯಾನಲ್ ವಕೀಲರು. ಒಬ್ಬ ವ್ಯಕ್ತಿಯು ಮುಂಭಾಗದ ಕಛೇರಿಯಿಂದ ಕಾನೂನು ಸಲಹೆಯನ್ನು ಪಡೆಯಬಹುದು. ಫ್ರಂಟ್ ಆಫೀಸ್ ಅರ್ಜಿಯನ್ನು ರಚಿಸುವುದು, ಮೇಲ್ಮನವಿ ರಚಿಸುವುದು, ಪ್ರತ್ಯುತ್ತರಗಳು ಇತ್ಯಾದಿ ಕರಡುಗಳನ್ನು ರಚಿಸುತ್ತದೆ,ಇದು ಕಾನೂನು ನೆರವು ಅರ್ಜಿಗಳ ದಾಖಲೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA) ವೆಬ್‌ಸೈಟ್‌ನಲ್ಲಿ ಕಾನೂನು ನೆರವು ಅರ್ಜಿಗಳನ್ನು ಅಪ್‌ಲೋಡ್ ಮಾಡುತ್ತದೆ, ಇದು ಅರ್ಜಿದಾರರಿಗೆ ಅವರ ವಿಷಯಕ್ಕಾಗಿ ಗುರುತಿಸಲಾದ ಪ್ಯಾನಲ್ ವಕೀಲರ ವಿವರಗಳ ಬಗ್ಗೆ ಅಪ್‌ಡೇಟ್ ಮಾಡುತ್ತದೆ ಮತ್ತು ಅವರ ಪ್ರಕರಣಗಳ ಸ್ಥಿತಿಯ ಕುರಿತು ಮಾಹಿತಿಯನ್ನು ನಿಯಮಿತವಾಗಿ ನವೀಕರಿಸುತ್ತದೆ.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ: ಸಮಾಜದ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲು ಮತ್ತು ವಿವಾದಗಳ ಸೌಹಾರ್ದಯುತ ಇತ್ಯರ್ಥಕ್ಕಾಗಿ ಲೋಕ ಅದಾಲತ್‌ಗಳನ್ನು ಆಯೋಜಿಸಲು ಕಾನೂನು ಸೇವಾ ಪ್ರಾಧಿಕಾರಗಳ ಕಾಯಿದೆ, 1987 ರ ಅಡಿಯಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವನ್ನು (NALSA) ರಚಿಸಲಾಗಿದೆ.
ರಾಜ್ಯ ಕಾನೂನು ಸೇವಾ ಪ್ರಾಧಿಕಾರ: ಪ್ರತಿ ರಾಜ್ಯದಲ್ಲಿ ನ ನೀತಿಗಳು ಮತ್ತು ನಿರ್ದೇಶನಗಳನ್ನು ಜಾರಿಗೆ ತರಲು ಮತ್ತು ಜನರಿಗೆ ಉಚಿತ ಕಾನೂನು ಸೇವೆಗಳನ್ನು ನೀಡಲು ಮತ್ತು ರಾಜ್ಯದಲ್ಲಿ ಲೋಕ ಅದಾಲತ್‌ಗಳನ್ನು ನಡೆಸಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರವನ್ನು ರಚಿಸಲಾಗಿದೆ.
ಬೇಗಾರ್: ಇದು ಬಲವಂತದ ದುಡಿಮೆಯ ಒಂದು ಪ್ರಕಾರ, ಯಾವುದೇ ಸಂಭಾವನೆ ಇಲ್ಲದ ಅನೈಚ್ಛಿಕ ಕೆಲಸ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿಯು ಯಾವುದೇ ಸಂಭಾವನೆ ಇಲ್ಲದೆ, ತನ್ನ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡಲು ಒತ್ತಾಯಿಸಲ್ಪಡುವುದು  ಎಂದು ಹೇಳಬಹುದು.
ಕೆಲಸಗಾರ: ಯಾವುದೇ ಕೈಗೆಲಸ, ಕೌಶಲ್ಯರಹಿತ, ನುರಿತ, ತಾಂತ್ರಿಕ, ಕಾರ್ಯಾಚರಣೆ, ಕ್ಲೆರಿಕಲ್ ಅಥವಾ ಮೇಲ್ವಿಚಾರಣಾ ಕೆಲಸವನ್ನು ಮಾಡಲು ಯಾವುದೇ ಉದ್ಯಮದಲ್ಲಿ ಉದ್ಯೋಗದಲ್ಲಿರುವ ಯಾವುದೇ ವ್ಯಕ್ತಿ.

 

ಪರವಾನಗಿ ಇಲ್ಲದೆ ವಾಹನವನ್ನು ಚಲಾಯಿಸುವುದು

ವಾಹನವನ್ನು ಚಲಾಯಿಸುವಾಗ ವಾಹನ ಪರವಾನಗಿಯ ಪ್ರತಿಯೊಂದನ್ನು ನಿಮ್ಮ ಬಳಿ ಸದಾ ಇಟ್ಟುಕೊಳ್ಳುವುದು ಮತ್ತು ಪೋಲೀಸ್ ಅಧಿಕಾರಿಯು ಕೇಳಿದಾಗ ಆ ದಾಖಲೆಯನ್ನು ಅವರಿಗೆ ತೋರಿಸುವುದು ಕಾನೂನು ಪ್ರಕಾರ ಕಡ್ಡಾಯವಾಗಿರುತ್ತದೆ. ಇಂದಿನ ದಿನಗಳಲ್ಲಿ ನಿಮ್ಮ ವಾಹನ ಚಾಲನಾ ಪರವಾನಗಿಯ ಎಲೆಕ್ಟ್ರಾನಿಕ್ ಪ್ರತಿಯನ್ನು ಡಿಜಿಲಾಕರ್ ನಲ್ಲಿ ಅಥವಾ ಎಂ-ಪರಿವಹನ್ ಆಪ್ ನಲ್ಲಿ ಕೂಡ ಇಟ್ಟುಕೊಳ್ಳಬಹುದಾಗಿದೆ. ನೀವು ಚಾಲ್ತಿಯಲ್ಲಿರುವ ಚಾಲನಾ ಪರವಾನಗಿಯನ್ನು ಹೊಂದಿದ್ದು, ಆದರೆ ಅಧಿಕಾರಿಯೊಬ್ಬರು ಕೇಳಿದಾಗ ಅದು ನಿಮ್ಮ ಬಳಿ ಇರದಿದ್ದಲ್ಲಿ, ನೀವು ರೂ. 500/- ರಿಂದ ರೂ. 1,000/- ದ ವರೆಗಿನ ಜುಲ್ಮಾನೆಯನ್ನು ತೆರಬೇಕಾಗಬಹುದು. ಬದಲಿಯಾಗಿ, ಪರವಾನಗಿಯನ್ನು ತೋರಿಸುವಂತೆ ನಿಮ್ಮನ್ನು ಕೇಳಿದ ಅಧಿಕಾರಿಯ/ಪ್ರಾಧಿಕಾರದ ಮುಂದೆ ನೀವು ಆ ದಾಖಲೆಯನ್ನು ನಿರ್ದಿಷ್ಟಪಡಿಸಿದ ಅವಧಿಯೊಳಗೆ ಹಾಜರುಪಡಿಸಬಹುದು. ಈ ಅವಧಿಯು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರುತ್ತದೆ.

ನೀವು ಪರವಾನಗಿಯನ್ನು ಯಾವುದೇ ಸರ್ಕಾರಿ ಪ್ರಾಧಿಕಾರಕ್ಕೆ ಅಥವಾ ಅಧಿಕಾರಿಗೆ ಸಲ್ಲಿಸಿದ್ದಲ್ಲಿ ಅಥವಾ ನಿಮ್ಮ ಪರವಾನಗಿಯನ್ನು ಯಾವುದೇ ಸರ್ಕಾರಿ ಪ್ರಾಧಿಕಾರ ಅಥವಾ ಅಧಿಕಾರಿಯು ವಶಪಡಿಸಿಕೊಂಡಿದ್ದಲ್ಲಿ, ನೀವು ಈ ಸಂಬಂಧದಲ್ಲಿ ಯಾವುದೇ ರೀತಿಯ ರಸೀದಿ ಅಥವಾ ಸ್ವೀಕೃತಿಯನ್ನು ಹಾಜರುಮಾಡತಕ್ಕದ್ದು. ಮತ್ತು ನಿಮ್ಮ ಪರವಾನಗಿಯನ್ನು ನಿರ್ದಿಷ್ಟ ಅವಧಿಯೊಳಗೆ ಹಾಜರುಮಾಡತಕ್ಕದ್ದು. ಈಗಾಗಲೇ ತಿಳಿಸಿದಂತೆ ಈ ನಿರ್ದಿಷ್ಟ ಅವಧಿಯು ಪ್ರತಿ ರಾಜ್ಯಕ್ಕೂ ಬೇರೆಯಾಗಿರುತ್ತದೆ.

ನೀವು ವಾಹನವನ್ನು ಚಲಾವಣೆ ಮಾಡುವಾಗ ಚಾಲನಾ ಪರವಾನಗಿ ಹೊಂದಿಲ್ಲದಿದ್ದಲ್ಲಿ ಅಥವಾ ವಾಹನವನ್ನು ಚಲಾಯಿಸಲು ನೀವು ಅಪ್ರಾಪ್ತ ವಯಸ್ಕರಾಗಿದ್ದ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿಯು ನಿಮ್ಮ ವಾಹನವನ್ನು ತಡೆಹಿಡಿಯಬಹುದು ಮತ್ತು ವಶಪಡಿಸಿಕೊಳ್ಳಬಹುದು. ಮೇಲಾಗಿ ನಿಮಗೆ ರೂ. 5,000/- ಜುಲ್ಮಾನೆ ಅಥವಾ ಮೂರು ತಿಂಗಳವರೆಗೆ ಕಾರಾವಾಸ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದಾಗಿದೆ.

ಈ ಅಪರಾಧಕ್ಕಾಗಿ ವಿಧಿಸುವ ದಂಡ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು. ಎರಡು ರಾಜ್ಯಗಳಲ್ಲಿ ವಿಧಿಸುವ ಬೇರೆ ಬೇರೆ ಮೊತ್ತದ ದಂಡವನ್ನು ಈ ಕೆಳಗೆ ನೀಡಲಾಗಿದೆ.

ರಾಜ್ಯ ವಾಹನದ ಮಾದರಿ ಜುಲ್ಮಾನೆಯ ಮೊತ್ತ(ರೂ)
ದೆಹಲಿ ಅನ್ವಯವಾಗುವುದಿಲ್ಲ 5,000
ದ್ವಿಚಕ್ರ/ತ್ರಿಚಕ್ರ ವಾಹನಗಳು 1,000
ಕರ್ನಾಟಕ ಲಘು ಮೋಟಾರು ವಾಹನ 2,000
ಇತರೆ ವಾಹನಗಳು 5,000

ಯಾರು ಎಫ್ಐಆರ್ ದಾಖಲಿಸಬಹುದು?

  • ನೀವು ಅಪರಾಧ ಕೃತ್ಯದಿಂದ ಪೀಡಿತರಾಗಿದ್ದಲ್ಲಿ
  • ಅಪರಾಧ ಕೃತ್ಯದಿಂದ ಪೀಡಿತನಾದ ವ್ಯಕ್ತಿಯ ಸಂಬಂಧಿಕ, ಮಿತ್ರ ಅಥವಾ ಪರಿಚಯಸ್ಥರು.
  • ಅಪರಾಧವೊಂದು ಜರುಗಿದೆ ಅಥವಾ ಜರುಗಲಿದೆ ಎಂದು ನಿಮಗೆ ಮಾಹಿತಿ ಇದ್ದಲ್ಲಿ ನೀವು ಎಫ್ಐಆರ್ ದಾಖಲಿಸಬಹುದು.

ಎಫ್ಐಆರ್ ದಾಖಲಿಸಲು ನಿಮಗೆ ಅಪರಾಧ ಕುರಿತು ಸಂಪೂರ್ಣ ಮಾಹಿತಿ ಇರಬೇಕಾದ ಅಗತ್ಯವಿಲ್ಲ. ಆದರೆ ನಿಮಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ನೀವು ಪೋಲೀಸರ ಗಮನಕ್ಕೆ ತರುವುದು ಅತ್ಯಗತ್ಯ.

ಎಫ್ಐಆರ್ ಎಂದರೆ ಯಾವುದೇ ವ್ಯಕ್ತಿಯ ವಿರುದ್ಧ ದಾಖಲಿಸಿದ ಕ್ರಿಮಿನಲ್ ಪ್ರಕರಣ ಎಂದು ಅರ್ಥವಲ್ಲ. ದೋಷಾರೋಪಣ ಪಟ್ಟಿಯನ್ನು ಪೋಲೀಸರು ನ್ಯಾಯಾಲಯದಲ್ಲಿ ಸಲ್ಲಿಸಿ ಮತ್ತು ಸರ್ಕಾರವು ಪ್ರಾಸಿಕ್ಯೂಟರ್ ರವನ್ನು ನೇಮಕಾತಿ ಮಾಡಿದ ನಂತರ ಕ್ರಿಮಿನಲ್ ಪ್ರಕರಣ ಆರಂಭವಾಗುತ್ತದೆ.

ನೋಂದಣಿ ಮಾಡಿಲ್ಲದ ವಾಹನವನ್ನು ಚಲಾಯಿಸುವುದು

ಯಾವುದೇ ವಾಹನವನ್ನು ಚಾಲನೆ ಮಾಡುವ ಮೊದಲು ಅದನ್ನು ನೋಂದಣಿ ಮಾಡಿಸತಕ್ಕದ್ದು. ವಾಹನವನ್ನು ನೋಂದಾಯಿಸಿದಾಗ ನಿಮಗೆ ನೋಂದಣಿ ಪ್ರಮಾಣ ಪತ್ರ (ಆರ್ ಸಿ) ನೀಡಲಾಗುತ್ತದೆ. ಈ ದಾಖಲೆಯ ಮೂಲ ಪ್ರತಿಯನ್ನು ಅಥವಾ ಎಲೆಕ್ಟ್ರಾನಿಕ್ ಪ್ರತಿಯನ್ನು ನೀವು ಸದಾ ನಿಮ್ಮೊಂದಿಗೆ ಹೊಂದಿರತಕ್ಕದ್ದು ಮತ್ತು ನಿಮ್ಮ ವಾಹನದ ಮೇಲೆ ಕಡ್ಡಾಯವಾಗಿ ನೋಂದಣಿ ಸಂಖ್ಯೆಯನ್ನು ಪ್ರದರ್ಶಿಸತಕ್ಕದ್ದು.

ನೋಂದಣಿಯಾಗಿರದ ವಾಹನವನ್ನು ನೀವು ಚಾಲನೆ ಮಾಡಿದಲ್ಲಿ ಅಥವಾ ಚಾಲನೆ ಮಾಡಲು ಅವಕಾಶ ನೀಡಿದಲ್ಲಿ, ಮೊದಲ ಬಾರಿಯ ಅಂತಹ ಅಪರಾಧಕ್ಕಾಗಿ ನೀವು ರೂ.2,000/- ದಿಂದ ರೂ.5,000/-ರ ವರೆಗೆ ಜುಲ್ಮಾನೆ ತೆರಬೇಕಾಗುತ್ತದೆ ಮತ್ತು ಅಂತಹ ಪುನರಾವರ್ತಿತ ಅಪರಾಧಕ್ಕಾಗಿ ರೂ. 5,000/- ದಿಂದ ರೂ. 10,000/- ದ ವರೆಗೆ ದಂಡ ಅಥವಾ ಒಂದು ವರ್ಷ ಅವಧಿಯವರೆಗಿನ ಕಾರಾವಾಸವನ್ನು ಅಥವಾ ಎರಡೂ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ.

ನೋಂದಣಿ ಪ್ರಮಾಣಪತ್ರ ಇಲ್ಲದೆಯೇ ವಾಹನ ಚಲಾಯಿಸಿದಾಗ ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಮಗೆ
ಜುಲ್ಮಾನೆ ವಿಧಿಸುವಂತಿಲ್ಲ:

 ಗಾಯಗೊಂಡ ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳನ್ನು ವಾಹನದಲ್ಲಿ ಕರೆದೊಯ್ಯುತ್ತಿರುವಾಗ.
 ಪರಿಹಾರ ಕಾರ್ಯಕ್ಕಾಗಿ ಆಹಾರ ಅಥವಾ ಸಾಮಗ್ರಿಗಳನ್ನು ಅಥವಾ ಔಷಧಿಗಳನ್ನು ಸಾಗಾಣಿಕೆ ಮಾಡಲು ವಾಹನವನ್ನು ಉಪಯೋಗಿಸುತ್ತಿದ್ದಲ್ಲಿ.

ಆದರೆ, ಮೇಲ್ಕಂಡ ಉದ್ದೇಶಗಳಿಗಾಗಿ ವಾಹನವನ್ನು ಬಳಸಲಾಗುತ್ತಿದೆ ಎಂದು ನೀವು ಏಳು ದಿನಗಳ ಅವಧಿಯೊಳಗಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಮಾಹಿತಿ ನೀಡತಕ್ಕದ್ದು. ಇಲ್ಲವಾದಲ್ಲಿ ನೀವ ಜುಲ್ಮಾನೆ ತೆರಬೇಕಾಗುತ್ತದೆ.

ಎರಡು ರಾಜ್ಯಗಳಲ್ಲಿ ಜುಲ್ಮಾನೆಯ ಮೊತ್ತ ಈ ಕೆಳಕಂಡಂತಿದೆ:

ರಾಜ್ಯ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ (ರೂ.)
ದೆಹಲಿ ಮೊದಲ ಬಾರಿಯ ಅಪರಾಧ 2,000-5,000
ಪುನರಾವರ್ತಿತ ಅಪರಾಧ 5,000-10,000
ಕರ್ನಾಟಕ ದ್ವಿಚಕ್ರ / ತ್ರಿಚಕ್ರ ವಾಹನ 2,000
ಲಘು ಮೋಟಾರು ವಾಹನ 3,000
ಮಧ್ಯಮ/ಭಾರೀ ವಾಹನ ಮತ್ತು ಇತರೆ 5,000

ಎಫ್ಐಆರ್ ದಾಖಲು ಮಾಡುವ ವಿಧಾನ

ಯಾವುದಾದರೂ ಅಪರಾಧ ಜರುಗಿದ ಸಂದರ್ಭದಲ್ಲಿ:
 ಸನಿಹದ ಪೋಲೀಸ್ ಠಾಣೆಗೆ ತೆರಳಿರಿ. ಅಪರಾಧವು ಈ ಠಾಣೆಯ ಸರಹದ್ದಿನಲ್ಲಿಯೇ ಜರುಗಿರಬೇಕೆಂಬ ನಿಯಮವಿಲ್ಲ. ಹತ್ತಿರದ ಪೋಲೀಸ್ ಠಾಣೆ ಕುರಿತು ತಿಳಿದುಕೊಳ್ಳಲು “ಇಂಡಿಯನ್ ಪೋಲೀಸ್ ಎಟ್ ಯುವರ್ ಕಾಲ್” ಎಂಬ ಆಪ್ ಡೌನ್ ಲೋಡ್ಮಾ ಡಿಕೊಳ್ಳಿ.

ಆಂಡ್ರಾಯ್ಡ್ ಬಳಕೆದಾರರಿಗೆ:
https://play.google.com/store/apps/details?id=in.nic.bih.thanalocator&hl=en

ಆಪಲ್ ಬಳಕೆದಾರರಿಗೆ:
https://itunes.apple.com/in/app/indian-police-at-your-call/id1177887402?mt=8

ಎಫ್ ಐಆರ್ ದಾಖಲಿಸಲು ನೀವು ಪೋಲೀಸ್ ಠಾಣೆಗೆ ತೆರಳಿದಾಗ:
 ಕರ್ತವ್ಯದ ಮೇಲಿರುವ ಅಧಿಕಾರಿಯನ್ನು ಭೇಟಿ ಮಾಡುವಂತೆ ನಿಮಗೆ ತಿಳಿಸಲಾಗುವುದು. ಸದರಿ ಅಧಿಕಾರಿಗೆ ನೀವು ನಿಮ್ಮ ದೂರನ್ನು ಮೌಖಿಕವಾಗಿ ಹೇಳಬಹುದು ಅಥವಾ ಬರವಣಿಗೆಯಲ್ಲಿ ನೀಡಬಹುದು. ನೀವು ಮೌಖಿಕವಾಗಿ ಹೇಳಿದಲ್ಲಿ, ಪೋಲೀಸ್ ಅಧಿಕಾರಿಗಳು ಅದನ್ನು ಬರವಣಿಗೆಯಲ್ಲಿ ದಾಖಲು ಮಾಡತಕ್ಕದ್ದು.

 ನಂತರ ಕರ್ತವ್ಯದ ಮೇಲಿರುವ ಅಧಿಕಾರಿಯು ಜನರಲ್ ಡೈರಿ ಅಥವಾ ಡೈಲಿ ಡೈರಿಯಲ್ಲಿ ಎಂಟ್ರಿ ಮಾಡುತ್ತಾರೆ.

 ನೀವು ಲಿಖಿತ ರೂಪದಲ್ಲಿ ದೂರನ್ನು ಸಿದ್ಧಪಡಿಸಿದ್ದಲ್ಲಿ, ಅದರ ಎರಡು ಪ್ರತಿಗಳನ್ನು ಪೋಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಮತ್ತು ಕರ್ತವ್ಯದ ಮೇಲಿರುವ ಅಧಿಕಾರಿಗೆ ಸಲ್ಲಿಸಿ. ಎರಡು ಪ್ರತಿಗಳಿಗೂ ಸೀಲ್ ಹಾಕಲಾಗುವುದು ಮತ್ತು ಒಂದು ಪ್ರತಿಯನ್ನು ನಿಮಗೆ ಹಿಂದಿರುಗಿಸಲಾಗುವುದು. ಸದರಿ ಸೀಲಿನಲ್ಲಿ ಡೈಲಿ ಡೈರಿ ನಂಬರ್ ಅಥವಾ ಡಿಡಿ ನಂಬರ್ಉ ಲ್ಲೇಖಿಸಲಾಗಿರುತ್ತದೆ. ನಿಮ್ಮ ದೂರನ್ನು ಪೋಲೀಸರು ಸ್ವೀಕರಿಸಿರುವುದಕ್ಕೆ ಈ ನಂಬರ್ ಒಂದು ದಾಖಲೆ ಎಂದು ಪರಿಗಣಿತವಾಗುತ್ತದೆ.

 ಪೋಲೀಸರು ನಿಮ್ಮ ದೂರನ್ನು ಓದಿದ ನಂತರ ಅದರಲ್ಲಿರುವ ಎಲ್ಲ ಮಾಹಿತಿಗಳು ಸರಿಯಾಗಿದ್ದಲ್ಲಿ, ನೀವು ಎಫ್ಐಆರ್ ಮೇಲೆ ಸಹಿ ಮಾಡಬಹುದು. ಎಫ್ಐಆರ್ ನ ಪ್ರತಿಯೊಂದನ್ನು ಉಚಿತವಾಗಿ ಪಡೆಯುವುದು ನಿಮ್ಮ ಹಕ್ಕು. ಪೋಲೀಸ್ ಸ್ಟೇಷನ್ ಹೆಸರು, ಎಫ್ಐಆರ್ ಸಂಖ್ಯೆ ಮತ್ತು ದಿನಾಂಕವನ್ನು ನೆನಪಿನಲ್ಲಿಟ್ಟುಕೊಳ್ಳಿ. ಒಂದು ವೇಳೆ ನೀವು ಎಫ್ಐಆರ್ ಪ್ರತಿಯನ್ನು ಕಳೆದುಕೊಂಡಲ್ಲಿ ಈ ಮಾಹಿತಿ ಆಧಾರದ ಮೇಲೆ ಆನ್ ಲೈನಿನಲ್ಲಿ ಉಚಿತವಾಗಿ ಎಫ್ಐಆರ್ ಪ್ರತಿಯನ್ನು ನೀವು ಪಡೆಯಬಹುದು.

ಒಮ್ಮೆ ಎಫ್ಐಆರ್ ದಾಖಲು ಮಾಡಿದ ನಂತರ ಅದರಲ್ಲಿರುವ ಮಾಹಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ನೀವು ಪೋಲೀಸರಿಗೆ ಹೆಚ್ಚಿನ ಮಾಹಿತಿ ನೀಡಬಹುದು.

ಕೆಲವು ರಾಜ್ಯ ಮತ್ತು ನಗರಗಳಲ್ಲಿ ನಿರ್ದಿಷ್ಟ ವರ್ಗದ ಎಫ್ಐಆರ್ ಮತ್ತು ದೂರುಗಳನ್ನು ಆನ್ ಲೈನಿನ ಮೂಲಕ ದಾಖಲು ಮಾಡಬಹುದು. ಉದಾಹರಣೆಗೆ, ಕಾಣೆಯಾದ ವ್ಯಕ್ತಿ ಅಥವಾ ಮಕ್ಕಳು ಕುರಿತ ದೂರು, ಯಾವುದೇ ಗುರುತು ಹಿಡಿಯಲಾಗದ ವ್ಯಕ್ತಿ ಅಥವಾ ಮಕ್ಕಳು ಅಥವಾ ಮೃತದೇಹ, ಹಿರಿಯ ನಾಗರಿಕರ ನೋಂದಣಿ, ಕಳುವಾದ ಅಥವಾ ಯಾರೂ ಕ್ಲೇಮು ಮಾಡದ ವಾಹನಗಳು ಮತ್ತು ಮೊಬೈಲ್ ಕಳವಿಗೆ ಸಂಬಂಧಿಸಿದ ದೂರುಗಳನ್ನು ದೆಹಲಿಯಲ್ಲಿ ಅನ್ ಲೈನ್ ಮೂಲಕವೇ ಸಲ್ಲಿಸಬಹುದಾಗಿದೆ.

ವಿಮಾ ಪ್ರಮಾಣಪತ್ರವಿಲ್ಲದೆ ವಾಹನವನ್ನು ಚಲಾಯಿಸುವುದು

ಯಾವುದೇ ಸಮಯದಲ್ಲಿ ಸಾಮಾನ್ಯವಾಗಿ ಅಥವಾ ಅಪಘಾತದ ಸಂದರ್ಭದಲ್ಲಿ ಸಂಚಾರ/ಇತರೆ ಪೋಲೀಸ್ ಅಧಿಕಾರಿಯು ವಾಹನದ ವಿಮಾ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ನಿಮ್ಮನ್ನು ಕೇಳಿದಾಗ ನೀವು ಕಡ್ಡಾಯವಾಗಿ ಆ ಪ್ರಮಾಣಪತ್ರವನ್ನು ಹಾಜರುಮಾಡತಕ್ಕದ್ದು. ಭೌತಿಕ ರೂಪದಲ್ಲಿನ ಪ್ರತಿಯ ಬದಲಾಗಿ ಈಗ ನೀವು ನಿಮ್ಮ ವಿಮಾ ದಾಖಲೆಗಳನ್ನು ಡಿಜಿ ಲಾಕರ್ ಅಥವಾ ಎಂ- ಎಂ-ಪರಿವಹನ್ ನಲ್ಲಿ ಎಲೆಕ್ಟ್ರಾನಿಕ್ ಪ್ರತಿಗಳನ್ನೂ ಇಟ್ಟುಕೊಳ್ಳಬಹುದು.ನಿಮ್ಮ ಬಳಿ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ವಿಮಾ ದಾಖಲೆ ಇಲ್ಲವಾದಲ್ಲಿ, ನೀವು ಅದನ್ನು ಸಂಬಂಧಿಸಿದ ಪೋಲೀಸ್ ಠಾಣೆಯಲ್ಲಿ ಅಪಘಾತವಾದ 7 ದಿನಗಳ ಒಳಗೆ ಅಥವಾ ನಿಮಗೆ ತಿಳಿಸಿದ ಸಮಯದೊಳಗೆ ಹಾಜರು ಪಡಿಸತಕ್ಕದ್ದು.

ವಾಹನ ಚಾಲನೆ ಮಾಡುವ ಸಮಯದಲ್ಲಿ ನಿಮ್ಮ ಬಳಿ ವಿಮೆ ದಾಖಲೆಗಳು ಇಲ್ಲದಿದ್ದಲ್ಲಿ ಮೊದಲ ಅಪರಾಧಕ್ಕೆ ನೀವು ಕನಿಷ್ಟ ರೂ.500/-ನ್ನು ಜುಲ್ಮಾನೆಯಾಗಿಯೂ ನಂತರದ ಪುನರಾವರ್ತಿತ ಅಪರಾಧಗಳಿಗೆ ಕನಿಷ್ಟ ರೂ. 1,500/- ನ್ನು ಜುಲ್ಮಾನೆಯಾಗಿ ತೆರಬೇಕಾಗುವುದು. ಈ ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು.

ಎರಡು ರಾಜ್ಯಗಳಿಗೆ ಸಂಬಂಧಿಸಿದಂತೆ ಜುಲ್ಮಾನೆಯ ಮೊತ್ತವನ್ನು ಕೆಳಗೆ ನೀಡಲಾಗಿದೆ:

ರಾಜ್ಯ ಅಪರಾಧದ ಪುನರಾವರ್ತನೆ ಜುಲ್ಮಾನೆಯ ಮೊತ್ತ(ರೂ.ಗಳಲ್ಲಿ)
ದೆಹಲಿ ಮೊದಲನೇ ಅಪರಾಧ 500
ಪುನರಾವರ್ತಿತ ಅಪರಾಧ 1,500
ಕರ್ನಾಟಕ ಮೊದಲನೇ ಅಪರಾಧ 500
ಪುನರಾವರ್ತಿತ ಅಪರಾಧ 1,500

ಎಫ್ಐಆರ್ ಸಲ್ಲಿಸಬಹುದಾದ ಸ್ಥಳಗಳು

ಯಾವುದೇ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬಹುದಾಗಿರುತ್ತದೆ. ಈ ಪೋಲೀಸ್ ಠಾಣೆಯ ಸರಹದ್ದಿನಲ್ಲಿಯೇ ಅಪರಾಧ ಕೃತ್ಯವು ಜರುಗಿರಬೇಕೆಂಬ ಕಡ್ಡಾಯ ನಿಯಮವೇನಿಲ್ಲ. ದೂರುದಾರ ನೀಡಿದ ಮಾಹಿತಿಯನ್ನು ಪೋಲೀಸರು ಕಡ್ಡಾಯವಾಗಿ ದಾಖಲಿಸಿ ನಂತರ ಪ್ರಕರಣವನ್ನು ಸಂಬಂಧಿಸಿದ ಸರಹದ್ದಿನ ಪೋಲೀಸ್ ಠಾಣೆಗೆ ವರ್ಗಾಯಿಸತಕ್ಕದ್ದು. ಉದಾಹರಣೆಗೆ, ಉತ್ತರ ದೆಹಲಿಯಲ್ಲಿ ಜರುಗಿದ ಅಪರಾಧ ಕುರಿತು ದಕ್ಷಿಣ ದೆಹಲಿಯಲ್ಲಿರುವ ಪೋಲೀಸ್ ಠಾಣೆಯಲ್ಲಿ ದೂರು
ದಾಖಲಿಸಬಹುದಾಗಿದೆ.

“ಶೂನ್ಯ ಎಫ್ಐಆರ್” ಎಂದು ಕರೆಯುವ ಈ ಪರಿಕಲ್ಪನೆಯನ್ನು 2013ರಲ್ಲಿ ಜಾರಿ ಮಾಡಲಾಯಿತು.ಈ ವ್ಯವಸ್ಥೆ ಜಾರಿಗೆ ಬರುವ ಮೊದಲು, ಪೋಲೀಸ್ ಠಾಣೆಗಳು ತಮ್ಮ ಸರಹದ್ದಿನಲ್ಲಿ ಜರುಗಿದ ಅಪರಾಧಗಳಿಗೆ ಸಂಬಂಧಿಸದಂತೆ ಮಾತ್ರ ಎಫ್ಐಆರ್ ದಾಖಲು ಮಾಡಿಕೊಳ್ಳುತ್ತಿದ್ದವು.ಹೀಗಾಗಿ ಪ್ರಥಮ ವರ್ತಮಾನ ವರದಿ ದಾಖಲು ಮಾಡುವಲ್ಲಿ ಭಾರೀ ವಿಳಂಬವಾಗುತ್ತಿತ್ತು.