ಪಕ್ಷಗಳ ಸಮನ್ವಯಕ್ಕಾಗಿ ವೈವಾಹಿಕ ಹಕ್ಕುಗಳ ಮರುಸ್ಥಾಪನೆಯ ಆದೇಶವನ್ನು ನ್ಯಾಯಾಲಯವು ನೀಡಬಹುದು. ಈ ತೀರ್ಪು ಒಬ್ಬ ಸಂಗಾತಿಗೆ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಲು ಕೇಳಿಕೊಂಡ ಸಂಗಾತಿಯೊಂದಿಗೆ ವಾಸಿಸಲು ಆದೇಶಿಸುತ್ತದೆ, ವಿಶೇಷವಾಗಿ ತೊರೆದುಹೋದ ಸಂದರ್ಭಗಳಲ್ಲಿ. ಆದಾಗ್ಯೂ, ಅವರು ಮದುವೆಯನ್ನು ಪೂರೈಸಲು ಒತ್ತಾಯಿಸಲಾಗುವುದಿಲ್ಲ.

ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನ ಪ್ರಕರಣ ನಡೆಯುವಾಗ ರಾಜಿಯಾಗುವುದು

ಕೊನೆಯ ಅಪ್ಡೇಟ್ Sep 14, 2022

ಎಲ್ಲ ಕೌಟುಂಬಿಕ ಪ್ರಕರಣಗಳಲ್ಲಿ ನ್ಯಾಯಾಲಯವು ದಂಪತಿಗಳ ನಡುವೆ ರಾಜಿ ಮಾಡಿಸಲು ಯತ್ನಿಸುತ್ತದೆ.

ರಾಜಿಯಾಗುವ ಪರಿಣಾಮಗಳು:

ರಾಜಿಯಾದ ನಂತರ ಈ ಎರಡು ಪರಿಣಾಮಗಳು ಸಂಭವಿಸುವವು:

  1.  ನೀವು ಮತ್ತು ನಿಮ್ಮ ಸಂಗಾತಿ ಒಂದಾಗಿ ನಿಮ್ಮ ವೈವಾಹಿಕ ಸಂಬಂಧವನ್ನು ಮುಂದುವರೆಸಬಹುದು, ಅಥವಾ
  2. ನೀವು ಮತ್ತು ನಿಮ್ಮ ಸಂಗಾತಿ ಶಾಂತಿಯುತವಾಗಿ ನಿಮ್ಮ ವಿವಾಹವನ್ನು ಅಂತ್ಯಗೊಳಿಸಿ ವಿಚ್ಛೇದನ ಪಡೆಯಬಹುದು.

ಭಾರತದಲ್ಲಿ ರಾಜಿಯಾಗುವ ಮೂರು ವಿಧಾನಗಳಿವೆ:

ಮಧ್ಯಸ್ಥಿಕೆ:

ಸಂಘರ್ಷಗಳ ಕಾರಣಗಳನ್ನು ಗುರುತಿಸಿ, ಅವುಗಳನ್ನು ಪರಿಹರಿಸಲು ತಂತ್ರಗಳನ್ನು ರೂಪಿಸುವುದಕ್ಕೆ ಮಧ್ಯಸ್ಥಿಕೆ ಮಾಡುವುದು ಎನ್ನುತ್ತಾರೆ.ಈ ಪ್ರಕ್ರಿಯೆಯನ್ನು ಮಧ್ಯಸ್ಥಿಕೆದಾರರು ಮಾಡುತ್ತಾರೆ. ಈ ಮಧ್ಯಸ್ಥಿಕೆದಾರರನ್ನು ವಿಚ್ಛೇದನಾ ಪ್ರಕರಣದ ಸಮಯದಲ್ಲಿ ನ್ಯಾಯಾಲಯವು ನೇಮಿಸುತ್ತದೆ, ಅಥವಾ ಕೋರ್ಟಿನ ಬಳಿ ಇರುವ ಮಧ್ಯಸ್ಥಿಕೆ ಕೇಂದ್ರದಿಂದ ಕರೆಸಿರುತ್ತಾರೆ.

ಸಂಧಾನ:

ಸಂಧಾನದ ಪ್ರಕ್ರಿಯೆಯಲ್ಲಿ ಸಂಧಾನಕಾರರನ್ನು ನೇಮಿಸಲಾಗುತ್ತದೆ. ಚರ್ಚೆಗಳ ಸಂದರ್ಭದಲ್ಲಿ ಅವರು ಸೂಚಿಸಿದ ಪರಿಹಾರಗಳನ್ನು ಎರಡೂ ಪಕ್ಷಗಳು ಒಪ್ಪುವಂತೆ ಒಡಂಬಡಿಸುವುದೇ ಈ ಸಂಧಾನಕಾರರ ಪಾತ್ರ.

ಕುಟುಂಬ ನ್ಯಾಯಾಲಯಗಳಲ್ಲಿ ಸಲಹೆಗಾರರು:

ವಿಚ್ಛೇದನ ಅಥವಾ ಇನ್ನಿತರ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಸಲಹೆ, ಸಹಾಯ, ಅಥವಾ ಪ್ರೋತ್ಸಾಹನೆ ನೀಡುವುದು ಸಲಹೆಗಾರರ ಕರ್ತವ್ಯ. ಕುಟುಂಬ ನ್ಯಾಯಾಲಯದಿಂದ ನೇಮಿಸಲಾದ ಸಲಹೆಗಾರರು ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರ ಹುಡುಕಲು ಯತ್ನಿಸುತ್ತಾರೆ:

  1. ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಪರಸ್ಪರ ಹೊಂದಾಣಿಕೆ ಯಾಕೆ ಆಗುತ್ತಿಲ್ಲ, ಅಥವಾ ಹೊಂದಾಣಿಕೆ ಆಗುತ್ತದೋ ಇಲ್ಲವೋ.
  2.  ವೈದ್ಯರ ಮೂಲಕ ಮಾನಸಿಕ ಅಥವಾ ಮನೋವೈಜ್ನ್ಯಾನಿಕ ನೆರವಿನಿಂದ ಈ ಅಸಾಮರಸ್ಯವನ್ನು ಪರಿಹರಿಸಬಹುದೋ ಇಲ್ಲವೋ.
  3. ನೀವು ಮತ್ತು ನಿಮ್ಮ ಸಂಗಾತಿ ಬೇರೆಯವರ ಪ್ರಭಾವದಿಂದ ವಿಚ್ಛೇದನಕ್ಕೆ ಮನವಿ ಸಲ್ಲಿಸುತ್ತಿದ್ದೀರೋ ಹೇಗೆ
  4. ನೀವು ಮತ್ತು ನಿಮ್ಮ ಸಂಗಾತಿ ಸ್ವತಂತ್ರವಾಗಿ ಮತ್ತು ಸ್ವೇಚ್ಛೆಯಿಂದ ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರೋ ಇಲ್ಲವೋ

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.