ನಿವಾಸಿ ಭಾರತೀಯರಿಂದ ದತ್ತು ಪಡೆಯುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)

ನಿವಾಸಿ ಭಾರತೀಯರಾಗಿ ನೀವು ಭಾರತದೊಳಗೇ ದತ್ತು ಪಡೆಯಲು ಅರ್ಜಿ ಸಲ್ಲಿಸುವುದು ಸಾಮಾನ್ಯ. ನಿಮ್ಮ ದತ್ತು ಸ್ವೀಕೃತಿ ಅರ್ಜಿ ಕೆಳಗಿನ ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ:

ಹಂತ ೧: ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದ ಮೇಲೆ ನೀವು ನಿಮ್ಮ ಹೆಸರನ್ನು ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಇಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಉದ್ಯೋಗ ಮಾಹಿತಿ, ಇತ್ಯಾದಿಗಳನ್ನು ಕೊಡಬೇಕು.

ಹಂತ ೨: ನೋಂದಣಿಯ ನಂತರ ಕೆಲವು ಮುಖ್ಯ ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ. ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಯಲಿ ಇಲ್ಲಿ ಕ್ಲಿಕ್ಕಿಸಿ. ನಿಮ್ಮ ಅರ್ಜಿಯ ನಂತರ, ನಿಮಗೆ ಸ್ವೀಕೃತಿಪತ್ರ ಸಿಗುತ್ತದೆ.

ಹಂತ ೩: ನಿಮ್ಮ ಅರ್ಜಿಯನ್ನು ಸಮಂಜಸ ಮಾಹಿತಿ ಮತ್ತು ದಾಖಲೆಗಳಿಂದ ಸಲ್ಲಿಸಿದ ಮೇಲೆ, ಸ್ವೀಕೃತಿಪತ್ರದ ಮೇಲಿನ ನೋಂದಣಿ ಸಂಖ್ಯೆಯ ಸಹಾಯದಿಂದ ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಹಂತ ೪: ನೀವು ಮಗುವನ್ನು ದತ್ತು ಪಡೆಯಲು ಅರ್ಹರಿದ್ದೀರೋ ಇಲ್ಲವೋ ಎಂದು ಕಂಡು ಹಿಡಿಯಲು, ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರ ಅಥವಾ ವಿಶೇಷ ದತ್ತು ಸ್ವೀಕಾರ ಸಂಸ್ಥೆ ನಿಮ್ಮ ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತದೆ.

ಹಂತ ೫: ನಿಮ್ಮ ಅರ್ಜಿ ಸ್ವೀಕಾರಗೊಳ್ಳಬಹುದು, ಅಥವಾ ತಿರಸ್ಕಾರಗೊಳ್ಳಬಹುದು. ಒಂದು ವೇಳೆ ತಿರಸ್ಕಾರಗೊಂಡಲ್ಲಿ, ಕಾರಣಗಳನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದಲ್ಲಿ ಕೊಡಲಾಗುವುದು, ಮತ್ತು ಇವುಗಳ ವಿರುದ್ಧ ನೀವು ಮಕ್ಕಳ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದಾಗಿದೆ.

ಹಂತ ೬: ನಿಮ್ಮ ಅರ್ಜಿ ಸ್ವೀಕಾರಗೊಂಡಲ್ಲಿ, ನಿಮ್ಮ ವರಿಷ್ಟತೆಯ ಅನುಗುಣವಾಗಿ, ದತ್ತು ಸ್ವೀಕಾರ ಸಂಸ್ಥೆಯು, “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೂಲಕ ನಿಮಗೆ ೩ ಮಕ್ಕಳ ನಡುವೆ ಆಯ್ಕೆ ಮಾಡಲು ಅನುಮತಿ ನೀಡುತ್ತದೆ. ನೀವು ಇವರಲ್ಲಿ ಒಂದು ಮಗುವನ್ನು ೪೮ ಗಂಟೆಗಳಲ್ಲಿ ದತ್ತು ತೆಗೆದುಕೊಳ್ಳಲು ಮೀಸಲಿಡಬಹುದು. ಇದರ ನಂತರ ನಿಮ್ಮ ಮತ್ತು ಮಗುವಿನ ಹೊಂದಾಣಿಕೆಯ ಸೂಕ್ತತೆಯನ್ನು ಕಂಡುಹಿಡಿಯಲು ಮೀಟಿಂಗ್ ನಡೆಸಲಾಗುತ್ತದೆ. ಈ ಪ್ರಕ್ರಿಯೆ ೨೦ ದಿನಗಳ ವರೆಗೆ ನಡೆಯುತ್ತದೆ. ಒಂದು ವೇಳೆ ನೀವು ಮಗುವನ್ನು ಒಪ್ಪಿಕೊಳ್ಳದಿದ್ದರೆ, ನಿಮ್ಮ ಹೆಸರನ್ನು ವರಿಷ್ಠತಾ ಪಟ್ಟಿಯ ಕೊನೆಯಲ್ಲಿ ಸೇರಿಸಲಾಗುತ್ತದೆ.

ಹಂತ ೭: ಮಗುವನ್ನು ಆರಿಸಿಕೊಂಡ ೧೦ ದಿನಗಳೊಳಗೆ ದತ್ತು ಸ್ವೀಕೃತೀ-ಪೂರ್ವ ಅನಾಥಾಲಯಕ್ಕೆ ಮಗುವನ್ನು ಕರೆದೊಯ್ಯಬೇಕು – ಈಗ ನೀವು ಮಗುವಿನ ಸಾಕು ತಂದೆ/ತಾಯಿ ಆಗಿರುತ್ತೀರಿ. ದತ್ತು ಸ್ವೀಕೃತಿ ಮಂಜೂರಾತಿ ಆದೇಶ ನ್ಯಾಯಾಲಯದಿಂದ ಬರುವತನಕ ಈ ಪ್ರಕ್ರಿಯೆ ನಡೆಯುತ್ತದೆ. ಮಗುವನ್ನು ನಿಮ್ಮ ಜೊತೆ ಕರೆದೊಯ್ಯುವ ಮುನ್ನ ಈ ಧೃಢೀಕರಣ ಪಾತ್ರಕ್ಕೆ ಸಹಿ ಹಾಕಬೇಕು.

ಹಂತ ೮: ವಿಶೇಷ ದತ್ತು ಸ್ವೀಕಾರ ಸಂಸ್ಥೆ ಅಥವಾ ಇನ್ನಿತರ ಸಮಂಜಸ ಸಂಸ್ಥೆ ದತ್ತು ಸ್ವೀಕೃತಿ ಆದೇಶಕ್ಕೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುತ್ತದೆ. ನಿಮ್ಮ ಊರಲ್ಲಿ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಇಲ್ಲದಿದ್ದಲ್ಲಿ ಇನ್ನಿತರ ಸಮಾಜಸ ಸಂಸ್ಥೆ ಈ ಕೆಲಸವನ್ನು ಮಾಡುತ್ತದೆ. ಇದಕ್ಕೆ ಸಂಬಂಧಪಟ್ಟ ನ್ಯಾಯಾಲಯದ ಪ್ರಕ್ರಿಯೆ ಖಾಸಗಿಯಾಗಿ ನಡೆದು ನಿಮ್ಮ ಅರ್ಜಿ ಸಲ್ಲಿಸಿದ ದಿಂಡದಿಂದ ೨ ತಿಂಗಳುಗಳ ಒಳಗೆ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ತದನಂತರ, ೩ ಕೆಲಸದ ದಿನಗಳೊಳಗೆ ವಿಶೇಷ ದತ್ತು ಸ್ವೀಕಾರ ಸಂಸ್ಥೆಯು ನಿಮ್ಮ ಹೆಸರಿನ ಜೊತೆ, ಮಗುವಿನ ಹುಟ್ಟು ಪ್ರಮಾಣಪತ್ರವನ್ನು ಪಡೆಯುತ್ತದೆ.

ಹಂತ ೯: ಮನೆ ಭೇಟಿ ನೀಡಿ ಅಧ್ಯಯನ ನಡೆಸಿದ ವಿಶೇಷ ದತ್ತು ಸ್ವೀಕಾರ ಸಂಸ್ಥೆಯು, ಮಗುವನ್ನು ದತ್ತು ಕೊಟ್ಟ ನಂತರವೂ ಅರ್ಧ ವಾರ್ಷಿಕವಾಗಿ ೨ ವರ್ಷಗಳ ವರೆಗೆ ದತ್ತು ಸ್ವೀಕೃತಿಯ ಪ್ರಕ್ರಿಯೆ ಮತ್ತು ಪರಿಣಾಮಗಳನ್ನು ದಾಖಲಿಸುತ್ತದೆ. ಏನಾದರೂ ಸಮಸ್ಯೆಗಳು ಎದುರಾದಲ್ಲಿ ಸಮಾಲೋಚನೆ ನೀಡಲಾಗುತ್ತದೆ. ದತ್ತು ಸ್ವೀಕೃತಿಯ ನಂತರ ತೊಂದರೆಗಳು ಉಂಟಾದಲ್ಲೂ ದತ್ತು ಸ್ವೀಕೃತಿಯನ್ನು ರದ್ದು ಗೊಳಿಸಿ, ಮಗುವನ್ನು ಪುನಃ ಇನ್ನೋರ್ವ ಭಾವೀ ದತ್ತು ತಂದೆ-ತಾಯಂದಿರಿಗೆ ದತ್ತು ಕೊಡಲು ಯೋಗ್ಯವೆಂದು ಘೋಷಿಸಲಾಗುತ್ತದೆ.

ಭಾರತೀಯ ನಾಗರಿಕರಿಂದ ವಿದೇಶಿ ಮಗುವಿನ ದತ್ತು ಸ್ವೀಕಾರ (ಧಾರ್ಮಿಕೇತರ ಕಾನೂನು):

ನೀವು ಭಾರತೀಯ ನಾಗರಿಕರಾಗಿ ವಿದೇಶಿ ಮಗುವನ್ನು ದತ್ತು ಪಡೆಯಬೇಕಾದಲ್ಲಿ, ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ ೧: ಮಗುವಿನ ದತ್ತು ಪಡೆಯಲು, ಸಂಬಂಧಪಟ್ಟ ದೇಶದ ಕಾನೂನಾತ್ಮಕ ಔಪಚಾರಿಕತೆಗಳು ಆ ದೇಶದಲ್ಲಿ ನಡೆಯುತ್ತವೆ.

ಹಂತ ೨: ಆ ದೇಶದ ಕಾನೂನಿಗೆ ಸಂಬಂಧಿಸಿದಂತೆ, ಸೂಕ್ತ ಅಧಿಕಾರಿಗಳು ಬೇಕಾದ ದಾಖಲೆಗಳು (ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿ) ಮತ್ತು ಕೆಳಗಿನ ವರದಿಗಳು ಸಿಕ್ಕಾಗ ಮಾತ್ರ ದತ್ತು ಕೊಡುವ ಅನುಮತಿ ನೀಡುತ್ತಾರೆ:

  • ಮನೆ ಅಧ್ಯಯನ ವರದಿ
  • ಮಗು ಅಧ್ಯಯನ ವರದಿ
  • ಮಗುವಿನ ವೈದ್ಯಕೀಯ ತಪಾಸಣೆ ವರದಿ

ಹಂತ ೩: ಭಾರತೀಯ ನಾಗರಿಕರಿಂದ ದತ್ತು ಪಡೆದ, ವಿದೇಶಿ ಪಾಸ್ಪೋರ್ಟ್ ಹೊಂದಿದ ವಿದೇಶಿ ಮಗುವಿಗೆ, ಭಾರತಕ್ಕೆ ಬರಲು ವೀಸಾ ಬೇಕಾಗುತ್ತದೆ. ಈ ವೀಸಾವನ್ನು ಪಡೆಯಲು ಸಂಬಂಧಪಟ್ಟ ದೇಶದಲ್ಲಿನ ಭಾರತೀಯ ಎಂಬೆಸಿಯನ್ನು ಸಂಪರ್ಕಿಸಿ.

ಹಂತ ೪: ದತ್ತು ಪಡೆದ ಮಗುವಿನ ಇಮಿಗ್ರೇಷನ್/ವಲಸೆ ತೆರವು, ಸಂಬಂಧಿತ ದೇಶದಲ್ಲಿನ ಭಾರತೀಯ ರಾಜತಾಂತ್ರಿಕ ಮಿಷನ್ ಮೂಲಕ, ಕೇಂದ್ರೀಯ ಸರ್ಕಾರದ ವಿದೇಶಿಗರ ವಿಭಾಗ, ಗೃಹ ಸಚಿವಾಲಯದಿಂದ ಬರುತ್ತದೆ.

ಗಂಡನಿಗೆ ನಿಮಿರು ದೌರ್ಬಲ್ಯವಿದ್ದರೆ ಮುಸ್ಲಿಂ ವಿಚ್ಛೇದನ

ನಿಮ್ಮ ಗಂಡನಿಗೆ ನಿಮಿರು ದೌರ್ಬಲ್ಯವಿದ್ದಲ್ಲಿ, ಅಥವಾ ಅವರಿಗೆ ಈ ಸಮಸ್ಯೆಯಿದೆ ಎಂದು ನಿಮಗೆ ಮದುವೆಯಾದಾಗಿನಿಂದಲೂ ಕೂಡ ಗೊತ್ತಿದ್ದಲ್ಲಿ, ಮುಸ್ಲಿಂ ಕಾನೂನಿನಡಿ ನೀವು ವಿಚ್ಛೇದನ ಪಡೆಯಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಗಂಡ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬಹುದು:

  • ಅವರ ನಿಮಿರು ದೌರ್ಬಲ್ಯವನ್ನು ಕೋರ್ಟಿನ ಮುಂದೆ ಒಪ್ಪಿಕೊಳ್ಳುವುದು
  • ನಿಮಿರು ದೌರ್ಬಲ್ಯದ ಆರೋಪವನ್ನು ನಿರಾಕರಿಸಿ, ಅವರಿಗೆ ಯಾವುದೇ ತರಹದ ದೈಹಿಕ ಶಕ್ತಿಹೀನತೆ ಇಲ್ಲ ಎಂದು ವಾದಿಸುವುದು
  • ವೈದ್ಯಕೀಯವಾಗಿ ಅವರ ಸಮಸ್ಯೆಯನ್ನು ಗುಣಪಡಿಸಲು ಒಂದು ವರ್ಷದ ಸಮಯವನ್ನು ಕೋರ್ಟಿಗೆ ಅರ್ಜಿ ಸಲ್ಲಿಸಿ ಪಡೆಯಬಹುದು. ಒಂದು ವರ್ಷದ ನಂತರ ಅವರ ನಿಮಿರು ದೌರ್ಬಲ್ಯ ವಾಸಿಯಾಗಿದ್ದಲ್ಲಿ, ನಿಮಗೆ ವಿಚ್ಛೇದನ ಸಿಗುವುದಿಲ್ಲ.

ಬಾಲ್ಯ ವಿವಾಹ ತಡೆಗಟ್ಟಲು ನ್ಯಾಯಾಲಯದ ಅಧಿಕಾರ

ಬಾಲ್ಯ ವಿವಾಹ ನೆರವೇರಲಿದೆ, ಅಥವಾ ನೆರವೇರಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನಂಬಲರ್ಹ ಮಾಹಿತಿ ನ್ಯಾಯಾಲಯಕ್ಕೆ ಸಿಕ್ಕರೆ, ಕೂಡಲೇ ಸಂಬಂಧಪಟ್ಟ ವ್ಯಕ್ತಿಗಳ ವಿರುಧ್ಧ ಅದು ನಿಷೇಧಾಜ್ಞೆಯನ್ನು ಹೊರಡಿಸಬಲ್ಲದು.

ಆರೋಪಿಗಳು ಈ ನಿಷೇಧಾಜ್ಞೆಯನ್ನು ರದ್ದುಪಡಿಸಲು ಅಥವಾ ಬದಲಾಯಿಸಲು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಬಹುದು. ನ್ಯಾಯಾಲಯವು ಖುದ್ದಾಗಿಯೂ ಕೂಡ ಆಜ್ಞೆಯನ್ನು ಹಿಂತೆಗೆದುಕೊಳ್ಳಬಹುದು ಅಥವಾ ಬದಲಾಯಿಸಬಹುದು.

ಇಂತಹ ನಿಷೇಧಾಜ್ಞೆ ಹೊರಡಿಸಿದ ಬಳಿಕ ಯಾವುದೇ ಬಾಲ್ಯ ವಿವಾಹ ನೆರವೇರಿದಲ್ಲಿ ಅದು ಕಾನೂನಿನ ಕಣ್ಣಿನಲ್ಲಿ ಅಮಾನ್ಯವಾಗಿರುತ್ತದೆ.

ನ್ಯಾಯಾಲಯ ಹಸ್ತಕ್ಷೇಪ ಮಾಡಬಲ್ಲ ಸನ್ನಿವೇಶಗಳು:

ನ್ಯಾಯಾಲಯವು ಬಾಲ್ಯ ವಿವಾಹಗಳಲ್ಲಿ ಈ ಕೆಳಗಿನ ಸಂದರ್ಭಗಳಲ್ಲಿ ಹಸ್ತಕ್ಷೇಪ ಮಾಡಬಹುದು:

  • ಸ್ವಯಂ ಪ್ರೇರಿತವಾಗಿ
  • ಬಾಲ್ಯ ವಿವಾಹ ನಿಷೇಧಾಧಿಕಾರಗಳು ಅಥವಾ ಇನ್ನೋರ್ವ ಸರ್ಕಾರೇತರ ಸಂಸ್ಥೆಯ ದೂರಿನ ಆಧಾರದ ಮೇಲೆ
  • ಅಕ್ಷಯ ತೃತಿಯಾಗಳಂತಹ ಮದುವೆಗೆ ಮಂಗಳಕರ ದಿನಗಳಂದು, ನ್ಯಾಯಾಲಯವೇ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಬಹುದು. ಈ ಸಂದರ್ಭಗಳಲ್ಲಿ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು, ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಎಲ್ಲ ಅಧಿಕಾರಗಳೂ ಸಹ ನ್ಯಾಯಾಲಯಕ್ಕೆ ಇರುತ್ತವೆ.
  • ನಡೆಯಲಿರುವ ಬಾಲ್ಯ ವಿವಾಹದ ಬಗ್ಗೆ ಯಾವುದೇ ವ್ಯಕ್ತಿಯ ಬಳಿ ವೈಯಕ್ತಿಕ ಮಾಹಿತಿ ಇದ್ದಾಗ

ನ್ಯಾಯಾಲಯವು ಹೊರಡಿಸುವ ಸೂಚನೆ:

ನಿಷೇಧಾಜ್ಞೆಯನ್ನು ಜಾರಿಗೆ ತರುವ ಮುನ್ನ, ನ್ಯಾಯಾಲಯವು ಆರೋಪಿಗಳ ವಿರುಧ್ಧ ಸೂಚನೆಯನ್ನು ಹೊರಡಿಸಬೇಕಾಗುತ್ತದೆ. ಇದು ಅವರಿಗೆ ಪ್ರತಿರಕ್ಷೆ ಮಾಡಿಕೊಳ್ಳಲು ಅವಕಾಶ ನೀಡುವುದಕ್ಕಾಗಿ. ಆದರೆ, ತುರ್ತು ಸಂದರ್ಭಗಳಲ್ಲಿ, ಆರೋಪಿಗಳಿಗೆ ಇಂತಹ ಸೂಚನೆ ನೀಡದೆ ನ್ಯಾಯಾಲಯಗಳು ಬಾಲ್ಯ ವಿವಾಹದ ವಿರುಧ್ಧ ಮಧ್ಯಂತರ ಆದೇಶವನ್ನು ಹೊರಡಿಸಬಹುದು.

ಶಿಕ್ಷೆ:

ನಿಮ್ಮ ವಿರುಧ್ಧ ನ್ಯಾಯಾಲಯವು ತಾತ್ಕಾಲಿಕ ಆದೇಶವನ್ನು ಹೊರಡಿಸಿದ್ದಲ್ಲಿ, ಮತ್ತು ನೀವು ಅದನ್ನು ಅನುಸರಿಸದಿದ್ದಲ್ಲಿ, ನಿಮಗೆ ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಹಾಗು/ಅಥವಾ ಗರಿಷ್ಟ ೧ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಗುವುದು.

ಮತಾಂತರ

ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಿಸಿದಾಗ ಹಿಂದೂ ಧರ್ಮದಿಂದ ಮತಾಂತರ:

ಮತಾಂತರ:

ನಿಮ್ಮ ಸಂಗಾತಿ ಹಿಂದೂ ಧರ್ಮವನ್ನು ತ್ಯಜಿಸಿ ಬೇರೆ ಧರ್ಮಕ್ಕೆ ಮತಾಂತರಿಸಿದ್ದಾಗ ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಕರಣ ಹೂಡುವುದು: ಗಮನಿಸಬೇಕಾದ ವಿಷಯವೇನೆಂದರೆ, ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಿಸಿದ್ದಾರೆ ಎಂದ ಮಾತ್ರಕ್ಕೆ ನಿಮ್ಮ ಮದುವೆ ಅಂತ್ಯಗೊಳ್ಳದು. ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದರೂ ಸಹ ವಿಚ್ಛೇದನದ ಪ್ರಕರಣವು ಹಿಂದೂ ವಿವಾಹ ಕಾನೂನಿನಡಿ ಜರುಗುತ್ತದೆ. ಏಕೆಂದರೆ, ನಿಮ್ಮಿಬ್ಬರ ಮದುವೆ ಹಿಂದೂ ಕಾನೂನಿನಡಿ ನೆರವೇರಿತ್ತು.

ವಿಚ್ಛೇದನದ ಅರ್ಜಿ ಸಲ್ಲಿಸುವು ಮುನ್ನ ಪುನರ್ವಿವಾಹ:

ನ್ಯಾಯಾಲಯವು ವಿಚ್ಛೇದನದ ಅಂತಿಮ ತೀರ್ಪು ನೀಡುವ ತನಕ ನಿಮ್ಮ ಮದುವೆ ಅಸ್ತಿತ್ವದಲ್ಲಿರುತ್ತದೆ. ನಿಮ್ಮ ಸಂಗಾತಿ ಇದರ ಮುನ್ನ ಪುನರ್ವಿವಾಹವಾಗುವಂತಿಲ್ಲ. ಒಂದು ವೇಳೆ ಅವರು ಪುನರ್ವಿವಾಹವಾದರೂ ಅದು ಕಾನೂನಿನಡಿ ಅಮಾನ್ಯವಾಗಿರುತ್ತದೆ.

ಶಿಕ್ಷೆ:

ಒಂದು ವೇಳೆ ವಿಚ್ಛೇದನದ ಮುನ್ನ ನಿಮ್ಮ ಸಂಗಾತಿ ಪುನರ್ವಿವಾಹವಾದರೆ ನೀವು ಅವರನ್ನು ದ್ವಿಪತ್ನಿತ್ವ/ದ್ವಿಪತಿತ್ವದ ಅಪರಾಧದಡಿ ಗರಿಷ್ಟ ೭ ವರ್ಷಗಳ ಸೆರೆಮನೆ ವಾಸ ಮತ್ತು ದಂಡದಿಂದ ಶಿಕ್ಷಿಸಬೇಕೆಂದು ಕೋರ್ಟಿನಲ್ಲಿ ಮನವಿ ಸಲ್ಲಿಸಬಹುದು.

ಕಾನೂನಿನಡಿ ಏನಾದರೂ ದೂರು ಮಾಡುವುದಿದ್ದರೆ ಯಾರಿಗೆ ಮಾಡಬೇಕು?

ವಿವಾಹ ಕುಲಸಚಿವರಿಂದ ಅಥವಾ ಅವರ ಉಪಸ್ಥಿತಿಯಲ್ಲಿ ಮದುವೆ ನೆರವೇರಬೇಕು ಎಂದು ಯಾರಾದರೂ ವಿವಾಹ ಸೂಚನೆಯ ಅರ್ಜಿ ಸಲ್ಲಿಸಿದ್ದಲ್ಲಿ, ಹಾಗು ಹೀಗಿರುವಾಗ ಕುಲಸಚಿವರು ವಿವಾಹ ಪ್ರಮಾಣಪತ್ರವನ್ನು ನೀಡದಿದ್ದಲ್ಲಿ ನ್ಯಾಯಾಲಯಕ್ಕೆ ಮೊರೆ ಹೋಗಬಹುದು. ಮುಂಬೈ, ಕೊಲ್ಕತ್ತಾ, ಮತ್ತು ಚೆನ್ನೈನಲ್ಲಿ ವಾಸಿಸುವರು ನೇರವಾಗಿ ತಮ್ಮ ತಮ್ಮ ಉಚ್ಚ ನ್ಯಾಯಾಲಯಕ್ಕೆ ಹೋಗಬಹುದಾದರೆ, ಇನ್ನಿತರರು ತಮ್ಮ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.

ಅಲ್ಪವಯಸ್ಕರ ಮದುವೆಯ ವಿರುದ್ಧ ದೂರುಗಳು:
ಓರ್ವ ಕಕ್ಷಿದಾರರು ಅಲ್ಪವಯಸ್ಕರಿದ್ದಲ್ಲಿ (ಕ್ರಿಶ್ಚಿಯನ್ ಮದುವೆಗಳಿಗನ್ವವಯಾಗಿ ೨೧ರ ಕೆಳಗಿದ್ದಲ್ಲಿ), ಸೂಚನೆ ಸಿಕ್ಕ ಮೇಲೆ ಕನಿಷ್ಠ ೧೪ ದಿನಗಳವರೆಗೆ ವಿವಾಹ ಕುಲಸಚಿವರು, ಸೂಚನೆ ಸಿಕ್ಕ ಪ್ರಮಾಣಪತ್ರ ನೀಡಲು ಕಾಯಬೇಕು. ಆದಾಗ್ಯೂ, ಒಂದು ವೇಳೆ ಕಕ್ಷಿದಾರರಿಗೆ ೧೪ ದಿನಗಳ ವರೆಗೆ ಕಾಯಲು ಆಗದಿದ್ದಲ್ಲಿ ಸಂಬಂಧಿಸಿದ ಉಚ್ಚ ನ್ಯಾಯಾಲಯದಲ್ಲಿ ಸೂಚನೆ ಸಿಕ್ಕ ಪ್ರಮಾಣಪತ್ರವನ್ನು ೧೪ ದಿನಗಳವೊಳಗೆ ಪಡೆಯುವಂತೆ ಮನವಿ ಸಲ್ಲಿಸಬಹುದು. ಆದಾಗ್ಯೂ, ಈ ಆಯ್ಕೆಯು ಕೇವಲ ಕಲ್ಕತ್ತಾ, ಮುಂಬೈ, ಮತ್ತು ಚೆನ್ನೈನ ನಿವಾಸಿಗಳಿಗೆ ಲಭ್ಯವಿದೆ.

ಕಾನೂನಿನಡಿ ಏನಾದರೂ ದೂರು ಮಾಡುವುದಿದ್ದರೆ ಯಾರಿಗೆ ಮಾಡಬೇಕು?

ವಿವಾಹ ಕುಲಸಚಿವರಿಂದ ಅಥವಾ ಅವರ ಉಪಸ್ಥಿತಿಯಲ್ಲಿ ಮದುವೆ ನೆರವೇರಬೇಕು ಎಂದು ಯಾರಾದರೂ ವಿವಾಹ ಸೂಚನೆಯ ಅರ್ಜಿ ಸಲ್ಲಿಸಿದ್ದಲ್ಲಿ, ಹಾಗು ಹೀಗಿರುವಾಗ ಕುಲಸಚಿವರು ವಿವಾಹ ಪ್ರಮಾಣಪತ್ರವನ್ನು ನೀಡದಿದ್ದಲ್ಲಿ ನ್ಯಾಯಾಲಯಕ್ಕೆ ಮೊರೆ ಹೋಗಬಹುದು. ಮುಂಬೈ, ಕೊಲ್ಕತ್ತಾ, ಮತ್ತು ಚೆನ್ನೈನಲ್ಲಿ ವಾಸಿಸುವರು ನೇರವಾಗಿ ತಮ್ಮ ತಮ್ಮ ಉಚ್ಚ ನ್ಯಾಯಾಲಯಕ್ಕೆ ಹೋಗಬಹುದಾದರೆ, ಇನ್ನಿತರರು ತಮ್ಮ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.

ಅಲ್ಪವಯಸ್ಕರ ಮದುವೆಯ ವಿರುದ್ಧ ದೂರುಗಳು:

ಓರ್ವ ಕಕ್ಷಿದಾರರು ಅಲ್ಪವಯಸ್ಕರಿದ್ದಲ್ಲಿ (ಕ್ರಿಶ್ಚಿಯನ್ ಮದುವೆಗಳಿಗನ್ವವಯಾಗಿ ೨೧ರ ಕೆಳಗಿದ್ದಲ್ಲಿ), ಸೂಚನೆ ಸಿಕ್ಕ ಮೇಲೆ ಕನಿಷ್ಠ ೧೪ ದಿನಗಳವರೆಗೆ ವಿವಾಹ ಕುಲಸಚಿವರು, ಸೂಚನೆ ಸಿಕ್ಕ ಪ್ರಮಾಣಪತ್ರ ನೀಡಲು ಕಾಯಬೇಕು. ಆದಾಗ್ಯೂ, ಒಂದು ವೇಳೆ ಕಕ್ಷಿದಾರರಿಗೆ ೧೪ ದಿನಗಳ ವರೆಗೆ ಕಾಯಲು ಆಗದಿದ್ದಲ್ಲಿ ಸಂಬಂಧಿಸಿದ ಉಚ್ಚ ನ್ಯಾಯಾಲಯದಲ್ಲಿ ಸೂಚನೆ ಸಿಕ್ಕ ಪ್ರಮಾಣಪತ್ರವನ್ನು ೧೪ ದಿನಗಳವೊಳಗೆ ಪಡೆಯುವಂತೆ ಮನವಿ ಸಲ್ಲಿಸಬಹುದು. ಆದಾಗ್ಯೂ, ಈ ಆಯ್ಕೆಯು ಕೇವಲ ಕಲ್ಕತ್ತಾ, ಮುಂಬೈ, ಮತ್ತು ಚೆನ್ನೈನ ನಿವಾಸಿಗಳಿಗೆ ಲಭ್ಯವಿದೆ.

ನೆಂಟರಿಂದ ದತ್ತು ಪಡೆಯುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)

ನೀವು ಮಗುವಿನ ನೆಂಟರಾಗಿ, ಮಗುವನ್ನು ದತ್ತು ಪಡೆಯಬೇಕೆಂದಲ್ಲಿ, ಭಾರತದಲ್ಲಿಯೇ ಅಥವಾ ಅಂತರ್-ದೇಶಿಯ ದತ್ತು ಕೂಡ ಪಡೆಯಬಹುದಾಗಿದೆ.

ಭಾರತದಲ್ಲಿಯೇ ದತ್ತು ಪಡೆಯುವುದು:

ಮಗುವಿನ ನೆಂಟರು ಭಾರತದಲ್ಲಿಯೇ ದತ್ತು ಪಡೆಯಬೇಕಾದಲ್ಲಿ ಕೆಳಗಿನ ಪ್ರಕ್ರಿಯೆ ಅನುಸರಿಸಬೇಕು:

ಹಂತ ೧: ನೀವು ಮಗುವನ್ನು ದತ್ತು ಪಡೆಯಬಹುದೋ ಇಲ್ಲವೋ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು. ನೀವು ಕೆಳಗಿನಂತೆ ಮಗುವಿನ ಜೊತೆ ನೆಂಟಸ್ಥಿಕೆ ಹೊಂದಿರಬೇಕು:

  • ನೀವು ಮಗುವಿನ ತಂದೆಯ ಸಹೋದರ/ಸಹೋದರಿಯಾಗಿರಬೇಕು
  • ನೀವು ಮಗುವಿನ ತಾಯಿಯ ಸಹೋದರ/ಸಹೋದರಿಯಾಗಿರಬೇಕು
  • ನೀವು ಮಗುವಿನ ತಂದೆಯ ತಂದೆ/ತಾಯಿಯಾಗಿರಬೇಕು
  • ನೀವು ಮಗುವಿನ ತಾಯಿಯ ತಂದೆ/ತಾಯಿಯಾಗಿರಬೇಕು

ಹಾಗು, ನೀವು ನಿವಾಸಿ ಭಾರತೀಯರು, ಅನಿವಾಸಿ ಭಾರತೀಯರು, ಅಥವಾ ಕನಿಷ್ಟ ೧ ವರ್ಷದ ಕಾಲ ಭಾರತದಲ್ಲಿ ವಾಸವಾಗಿದ್ದ ಸಾಗರೋತ್ತರ ಭಾರತೀಯ ನಾಗರೀಕರಾಗಿರಬೇಕು.

ಹಂತ ೨: ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದ ಮೇಲೆ ನೀವು ನಿಮ್ಮ ಹೆಸರನ್ನು ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಇಲ್ಲಿ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು:

  • ನಿವಾಸದ ಪುರ್ವಾವೆ
  • ಮಗು ೫ ವರ್ಷದ ಮೇಲಿದ್ದಲ್ಲಿ ಅದರ ಒಪ್ಪಿಗೆ
  • ಜೈವಿಕ ತಂದೆ-ತಾಯಿಯರ ಒಪ್ಪಿಗೆ, ಅಥವಾ ಮಗುವಿನ ಪಾಲಕರು/ಪೋಷಕರಿಗೆ ಮಗುವನ್ನು ದತ್ತು ಸ್ವೀಕೃತಿಗಾಗಿ ಬಿಟ್ಟುಕೊಡಬಹುದೆಂದು ಮಕ್ಕಳ ಕಲ್ಯಾಣ ಸಮಿತಿಯಿಂದ ಸಿಕ್ಕ ಅನುಮತಿ
  • ನ್ಯಾಯಾಲಯದಿಂದ ಸಿಕ್ಕ ದತ್ತು ಸ್ವೀಕೃತಿ ಆದೇಶ
  • ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧವನ್ನು ಧೃಢೀಕರಿಸುವ ಶಪಥಪತ್ರ, ಮತ್ತು ನಿಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸೂಚಿಸುವ ಶಪಥಪತ್ರ

ಹಂತ ೩: ಇದಾದಮೇಲೆ, ಸಂಬಂಧಪಟ್ಟ ನ್ಯಾಯಾಲಯಕ್ಕೆ ನೀವು ದತ್ತು ಸ್ವೀಕೃತಿ ಅರ್ಜಿಯನ್ನು ಸಲ್ಲಿಸಬೇಕು. ನ್ಯಾಯಾಲಯದ ಆದೇಶ ಸಿಕ್ಕ ಮೇಲೆ ಅದನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೇಲೆ ಅಪ್ಲೋಡ್ ಮಾಡಬೇಕು. ಅಂತರ್-ರಾಷ್ಟ್ರೀಯ ದತ್ತು ಸ್ವೀಕೃತಿ:

ಮಗುವಿನ ನೆಂಟರು ಅಂತರ್-ರಾಷ್ಟ್ರೀಯ ದತ್ತು ಸ್ವೀಕಾರ ಮಾಡಲು ಕೆಳಗಿನ ಪ್ರಕ್ರಿಯೆ ಪಾಲಿಸಬೇಕು:

ಹಂತ ೧: ನೀವು ಮಗುವನ್ನು ದತ್ತು ಪಡೆಯಬಹುದೋ ಇಲ್ಲವೋ ಎಂಬುದನ್ನು ನಿಗದಿಪಡಿಸಿಕೊಳ್ಳಬೇಕು. ನೀವು ಸಾಗರೋತ್ತರ ಭಾರತೀಯ ನಾಗರಿಕರು ಅಥವಾ ಅನಿವಾಸಿ ಭಾರತೀಯರು ಇದ್ದಲ್ಲಿ ನಿಮ್ಮ ನೆಂಟರ ಮಗುವನ್ನು ದತ್ತು ಪಡೆಯಬಹುದಾಗಿದೆ.

ಹಂತ ೨: ನೀವು ವಾಸವಾಗಿದ್ದ ದೇಶದಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಭೇಟಿ ನೀಡಬೇಕು. ಉದಾಹರಣೆಗೆ, ಅಧಿಕೃತ ವಿದೇಶಿ ದತ್ತು ಸ್ವೀಕೃತಿ ಸಂಸ್ಥೆ, ಅಥವಾ ಇನ್ನಿತರ ಕೇಂದ್ರೀಯ ಅಧಿಕಾರ. ನಿಮ್ಮ ನಿವಾಸದ ದೇಶದಲ್ಲಿ ಒಂದುವೇಳೆ ಈ ಎರಡೂ ಸಂಸ್ಥೆಗಳು ಇಲ್ಲದಿದ್ದರೆ, ಸಂಬಂಧಪಟ್ಟ ಸರ್ಕಾರಿ ವಿಭಾಗಕ್ಕೆ, ಅಥವಾ ಭಾರತೀಯ ರಾಜತಾಂತ್ರಿಕ ಮಿಷನ್ ಗೆ ನೀವು ಹೋಗಬಹುದು. ಅವರು ನಡೆಸಬೇಕಾದ ಮನೆ ಅಧ್ಯಯನ ಮತ್ತು ನೋಂದಣಿ ಪ್ರಕ್ರಿಯೆಯ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ಹಂತ ೩: ಬೇಕಾದ ದಾಖಲೆಗಳನ್ನೆಲ್ಲ ನೀವು ಸಲ್ಲಿಸಬೇಕು. ನೀವು ಸಂಪರ್ಕಿಸಿದ ಸಂಸ್ಥೆಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಕೇಳಿ.

ಹಂತ ೪: ನಿಮ್ಮ ಎಲ್ಲ ದಾಖಲೆಗಳನ್ನು ಸಲ್ಲಿಸಿದಾಗ ನಿಮ್ಮ ಅರ್ಜಿಯನ್ನು, ಕೌಟುಂಬಿಕ ಹಿನ್ನೆಲೆಯ ವರದಿಯನ್ನು ತಯಾರಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕಳಿಸಲಾಗುತ್ತದೆ. ಇದಕ್ಕೆ ಶುಲ್ಕವಿರಬಹುದು. ಈ ವರದಿಯನ್ನು ನೀವು ನೆಲೆಸಿದ್ದ ದೇಶದ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸಲಾಗುತ್ತದೆ.

ಹಂತ ೫: ಮಗು ನೆಲೆಸಿದ್ದ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ನಿಮ್ಮ ದತ್ತು ಸ್ವೀಕೃತಿಯ ಅರ್ಜಿ ಮತ್ತು ಮಗುವಿನ ಜೈವಿಕ ತಂದೆ-ತಾಯಿಯರೇ ಒಪ್ಪಿಗೆ ಪತ್ರವನ್ನು, ಕೆಳಗಿನ ದಾಖಲೆಗಳೊಂದಿಗೆ ಸಲ್ಲಿಸಬೇಕು:

  • ಮಗು ೫ ವರ್ಷದ ಮೇಲಿರುವಾಗ ಅದರ ಒಪ್ಪಿಗೆ
  • ನೀವು ವಾಸಿಸುವ ದೇಶದ ಅನುಮತಿ
  • ಮಗುವಿನೊಂದಿಗೆ ನಿಮ್ಮ ನೆಂಟಸ್ಥಿಕೆ (ವಂಶ ವೃಕ್ಷ)
  • ನೀವು, ಮಗು, ಮತ್ತು ಮಗುವಿನ ಜೈವಿಕ ತಂದೆ-ತಾಯಿಯರು ಇರುವ ಇತ್ತೀಚಿನ ಭಾವಚಿತ್ರ
  • ಜೈವಿಕ ತಂದೆ-ತಾಯಿಯರ ಒಪ್ಪಿಗೆ, ಅಥವಾ ಮಗುವಿನ ಪಾಲಕರು/ಪೋಷಕರಿಗೆ ಮಗುವನ್ನು ದತ್ತು ಸ್ವೀಕೃತಿಗಾಗಿ ಬಿಟ್ಟುಕೊಡಬಹುದೆಂದು ಮಕ್ಕಳ ಕಲ್ಯಾಣ ಸಮಿತಿಯಿಂದ ಸಿಕ್ಕ ಅನುಮತಿ
  • ಕೌಟುಂಬಿಕ ಹಿನ್ನೆಲೆ ವರದಿ

ಇದಾದಮೇಲೆ ದತ್ತು ಸ್ವೀಕೃತಿ ಆದೇಶದ ಪ್ರಮಾಣೀಕರಿಸಲಾದ ಪ್ರತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸಲ್ಲಿಸಬೇಕು.

ಕ್ರೂರ ವರ್ತನೆ ಮತ್ತು ಮುಸ್ಲಿಂ ವಿವಾಹ ಕಾನೂನು

ಕ್ರೂರ ವರ್ತನೆಗೆ ಸಂಬಂಧಪಟ್ಟ ನಿಬಂಧನೆಗಳು ಮುಸ್ಲಿಂ ಕಾನೂನಿನಲ್ಲಿವೆ. ನಿಮ್ಮ ಯಾವುದೇ ವರ್ತನೆ ಅಥವಾ ನಡವಳಿಕೆ ನಿಮ್ಮ ಸಂಗಾತಿಯ ಮನದಲ್ಲಿ ಕಿರುಕುಳವನ್ನುಂಟು ಮಾಡಿದರೆ, ಅದನ್ನು ಕ್ರೌರ್ಯ ಎನ್ನುತ್ತಾರೆ. ಮುಸ್ಲಿಂ ಕಾನೂನಿನ ಪ್ರಕಾರ ನಿಮ್ಮ ಗಂಡ ನಿಮ್ಮ ಜೊತೆ ಕೆಳಗಿನಂತೆ ವರ್ತಿಸಿದರೆ ಅದು ಕ್ರೌರ್ಯವಾಗುತ್ತದೆ:

  • ನಿಮ್ಮ ಮೇಲೆ ದಾಳಿ ಮಾಡಿದರೆ, ಅಥವಾ ಶಾರೀಕವಾಗಿ ಹಿಂಸಿಸಿದರೆ
  • ಪರ ಸ್ತ್ರೀಯರ ಜೊತೆ ಲೈಂಗಿಕ ಸಂಭೋಗ ಮಾಡಿದರೆ
  • ನಿಮ್ಮನ್ನು ಅನೈತಿಕ ಜೀವನ ನಡೆಸುವಂತೆ ಒತ್ತಾಯಿಸಿದರೆ
  • ನಿಮ್ಮ ಆಸ್ತಿಯನ್ನು ವಿಲೇವಾರಿ ಮಾಡಿ, ಅದರ ಮೇಲೆ ನಿಮ್ಮ ಕಾನೂನುಬದ್ಧ ಹಕ್ಕುಗಳನ್ನು ಪ್ರಯೋಗಿಸಲಾರದಂತೆ ಮಾಡಿದರೆ
  • ನಿಮ್ಮ ಧರ್ಮವನ್ನು ಆಚರಿಸಲಾರದಂತೆ ಮಾಡಿದರೆ
  • ನಿಮ್ಮ ಗಂಡನಿಗೆ ಒಬ್ಬರಿಗಿಂತ ಹೆಚ್ಚು ಹೆಂಡತಿಯರು ಇದ್ದರೆ, ನಿಮ್ಮನ್ನು ಅವರೆಲ್ಲರ ಸರಿಸಮನಾಗಿ ಕಾಣದಿದ್ದರೆ.

ಬಾಲ್ಯ ವಿವಾಹ ನಿಷೇಧಾಧಿಕಾರಿಗಳು

ಭಾರತದಲ್ಲಿ ರಾಜ್ಯ ಸರ್ಕಾರಗಳು ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನು ಬಾಲ್ಯ ವಿವಾಹಗಳನ್ನು ತಡೆಗಟ್ಟಲು ನೇಮಿಸಿವೆ. ಈ ಅಧಿಕಾರಿಗಳ ಜವಾಬ್ದಾರಿ ಬಾಲ್ಯ ವಿವಾಹಗಳ ಬಗ್ಗೆ ವರದಿ ಮಾಡುವುದು ಮತ್ತು ಅವುಗಳನ್ನು ತಡೆಗಟ್ಟುವುದಾಗಿದೆ. ಪ್ರತಿ ರಾಜ್ಯ ಸರ್ಕಾರವು ಈ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕರ್ತವ್ಯಗಳನ್ನು ನಿರ್ಧರಿಸಿ ನಿಗದಿಪಡಿಸುತ್ತದೆ. ಈ ಕರ್ತವ್ಯಗಳು ಕೆಳಗಿನಂತಿವೆ:

  1. ಸಮಂಜಸ ಕ್ರಮಗಳನ್ನು ಕೈಗೊಂಡು ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು
  2. ಆರೋಪಿಗಳ ಮೇಲೆ ಮೊಕದ್ದಮೆ ಹೂಡುವುದಕ್ಕೆ ಅವರ ವಿರುಧ್ಧ ಪುರಾವೆ ಸಂಗ್ರಹಿಸುವುದು
  3. ಸ್ಥಳೀಯ ಜನರಿಗೆ ಬಾಲ್ಯ ವಿವಾಹದಲ್ಲಿ ಭಾಗವಹಿಸದಿರಿ ಹಾಗು ಇಂತಹ ವಿವಾಹಗಳಿಗೆ ಬೆಂಬಲ ನೀಡದಿರಿ ಎಂದು ಸಲಹೆ ಹಾಗು ಸಮಾಲೋಚನೆ ನೀಡುವುದು
  4. ಬಾಲ್ಯ ವಿವಾಹಗಳಿಂದ ಆಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಉದಾಹರಣೆಗೆ, ಪ್ರಸವದ ವೇಳೆ ತಾಯಿಯ ಮರಣ, ಅಪೌಷ್ಟಿಕತೆ, ಕೌಟುಂಬಿಕ ಹಿಂಸೆ, ಇತ್ಯಾದಿ.
  5. ಬಾಲ್ಯ ವಿವಾಹ ಸಮಸ್ಯೆಯ ಬಗ್ಗೆ ಸಮುದಾಯವನ್ನು ಸಂವೇದನಾಶೀಲಗೊಳಿಸುವುದು.
  6. ಬಾಲ್ಯ ವಿವಾಹದ ಘಟನೆಗಳು ಎಷ್ಟರ ಮಟ್ಟಿಗೆ, ಯಾವಾಗ, ಮತ್ತು ಎಲ್ಲೆಲ್ಲಿ ಸಂಭವಿಸುತ್ತಿವೆ ಎಂಬ ಅಂಕಿಅಂಶಗಳನ್ನು ನಿಯತಕಾಲಿಕವಾಗಿ ರಾಜ್ಯ ಸರ್ಕಾರಕ್ಕೆ ವರದಿ ಮಾಡುವುದು.

ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು, ರಾಜ್ಯ ಸರ್ಕಾರವು ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ, ಕೆಲವು ಷರತ್ತುಗಳು ಮತ್ತು ಮಿತಿಗಳೊಂದಿಗೆ, ಪೊಲೀಸ್ ಅಧಿಕಾರಿಗಳ ಅಧಿಕಾರಗಳನ್ನು ನೀಡಬಹುದು. ಇಂತಹ ಅಧಿಕಾರಗಳನ್ನು ರಾಜ್ಯದ ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯೊಂದನ್ನು ಪ್ರಕಟಿಸಿ ನೀಡಬಹುದಾಗಿದೆ.

ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚು ಮಾಹಿತಿ ಬೇಕಾದಲ್ಲಿ, ದಯವಿಟ್ಟು ಈ ಸರ್ಕಾರಿ ದಾಖಲೆಯನ್ನು ಓದಿ (೧೯-೨೨ ಪುಟಗಳು)

ಹಿಂದೂ ವಿವಾಹ ಕಾಯಿದೆಯಡಿ ವಿಚ್ಛೇದನದ ಪುರಾವೆ

ನ್ಯಾಯಾಲಯವು ಅಂತಿಮವಾಗಿ ನೀಡುವ ವಿಚ್ಛೇದನದ ತೀರ್ಪು ನಿಮ್ಮ ವಿಚ್ಛೇದನಕ್ಕೆ ಪುರಾವೆಯಾಗಿದೆ. ಇದು ಒಂದು ಆದೇಶದ ರೂಪದಲ್ಲಿದ್ದು, ಈ ದಾಖಲೆಯು ನಿಮ್ಮ ವಿಚ್ಛೇದನವನ್ನು ಕಾನೂನಾತ್ಮಕವಾಗಿ ಜಾರಿಗೊಳಿಸುತ್ತದೆ.

ಕೆಳಕಂಡ ಈ ಎರಡು ಸಂದರ್ಭಗಳು ಸಂಭವಿಸಿದ್ದಾಗ ವಿಚ್ಛೇದನದ ತೀರ್ಪು ಅಂತಿಮವಾಗುತ್ತದೆ:

  • ವಿಚ್ಛೇದನದ ಅಂತಿಮ ತೀರ್ಪಿನ ವಿರುದ್ಧ, ೯೦ ದಿನಗಳೊಳಗೆ, ತೀರ್ಪಿನಿಂದ ಅತೃಪ್ತರಾದ ನೀವು/ನಿಮ್ಮ ಸಂಗಾತಿಯು ಉನ್ನತ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ಈ ಮನವಿಯು ವಜಾಗೊಂಡಿದೆ.
  • ವಿಚ್ಛೇದನದ ತೀರ್ಪಿನ ವಿರುದ್ಧ ಮನವಿ ಮಾಡುವ ಹಕ್ಕು ಇಲ್ಲವೇ ಇಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ವಕೀಲರನ್ನು ವಿಚಾರಿಸಿ.