ಗ್ರಾಹಕರು ಎಂದರೆ ಯಾರು?

ಗ್ರಾಹಕರು ಸರಕು ಅಥವಾ ಸೇವೆಗಳನ್ನು ಖರೀದಿಸುವ ಮತ್ತು ಬಳಸುವ ಜನರು. ಗ್ರಾಹಕರು ಅವರು ಬಳಸುವ ಯಾವುದೇ ಸೇವೆಗಳು ಅಥವಾ ಸರಕುಗಳಿಗೆ ದೂರು ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ:

ಸರಕು ಮತ್ತು ಸೇವೆಗಳನ್ನು ಖರೀದಿಸುವ ಮತ್ತು ಬಳಸುವ ವ್ಯಕ್ತಿ

ಗ್ರಾಹಕರು ಎಂದರೆ ಸರಕು ಮತ್ತು ಸೇವೆಗಳನ್ನು ಖರೀದಿಸುವ ಮತ್ತು ಅವುಗಳನ್ನು ಬಳಸುವ ಯಾವುದೇ ವ್ಯಕ್ತಿ. ಉದಾಹರಣೆಗೆ, ಚಲನಚಿತ್ರ ಟಿಕೆಟ್ ಖರೀದಿಸಿದ ನಂತರ ಚಲನಚಿತ್ರವನ್ನು ವೀಕ್ಷಿಸುವ ವ್ಯಕ್ತಿಯು ಗ್ರಾಹಕನಾಗಿರುತ್ತಾರೆ ಮತ್ತು ಅದೇ ರೀತಿ, ಬೇರೆಯವರಿಂದ ಉಡುಗೊರೆಯಾಗಿ ನೀಡಿದ ಉಡುಗೊರೆ ಚೀಟಿ (gift voucher) ಯನ್ನು ಬಳಸುವ ವ್ಯಕ್ತಿಯು ಸಹ ಗ್ರಾಹಕನಾಗಿರುತ್ತಾರೆ.

ಸ್ವಯಂ ಉದ್ಯೋಗಕ್ಕಾಗಿ ಸರಕುಗಳ ಬಳಕೆ, ವಾಣಿಜ್ಯ ಉದ್ದೇಶಗಳಿಗಾಗಿ ಅಲ್ಲ

ವಾಣಿಜ್ಯ ಉದ್ದೇಶಗಳಿಗಾಗಿ ಸರಕು ಮತ್ತು ಸೇವೆಗಳನ್ನು ಬಳಸುವ ಜನರಿಗೆ ಗ್ರಾಹಕ ಸಂರಕ್ಷಣಾ ಕಾನೂನು ಅನ್ವಯಿಸುವುದಿಲ್ಲ. ಆದಾಗ್ಯೂ, ಇದಕ್ಕೆ ಕೆಲವು ಅಪವಾದಗಳಿವೆ. ಉದಾಹರಣೆಗೆ, ತಮ್ಮ ವ್ಯಾಪಾರದಲ್ಲಿ ಬಳಸುವುದಕ್ಕಾಗಿ ದೊಡ್ಡ ಯಂತ್ರಗಳನ್ನು ಖರೀದಿಸುವ ವ್ಯಕ್ತಿಯು ‘ಗ್ರಾಹಕ’ ಅಲ್ಲ. ಆದಾಗ್ಯೂ, ಸ್ವಯಂ ಉದ್ಯೋಗಕ್ಕಾಗಿ ಸರಕುಗಳನ್ನು ಬಳಸುವ ಜನರನ್ನು ಗ್ರಾಹಕರು ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ತಮ್ಮ ಕೆಲಸಕ್ಕಾಗಿ ಕಲಾ ಸಾಮಗ್ರಿಗಳನ್ನು ಖರೀದಿಸುವ ಕಲಾವಿದರು ಅಥವಾ ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸುವ ಸೌಂದರ್ಯವರ್ಧಕರು (beauticians) ಗ್ರಾಹಕರು.

ಆನ್‌ಲೈನ್ ಸೌಲಭ್ಯಗಳನ್ನು ಬಳಸುವ ವ್ಯಕ್ತಿ

‘ಗ್ರಾಹಕ’ ಎಂದರೆ ಆನ್‌ಲೈನ್‌ನಲ್ಲಿ ಸರಕುಗಳು ಅಥವಾ ಸೇವೆಗಳನ್ನು ಖರೀದಿಸುವ ಅಥವಾ ಬಾಡಿಗೆಗೆ ಪಡೆಯುವ ಯಾವುದೇ ವ್ಯಕ್ತಿಯನ್ನು ಸಹ ಒಳಗೊಂಡಿರುತ್ತದೆ. ಉದಾಹರಣೆಗೆ, ನೀವು ಆನ್‌ಲೈನ್ ಬಟ್ಟೆ ವೆಬ್‌ಸೈಟ್‌ನಿಂದ ಆರ್ಡರ್ ಮಾಡಿದರೆ, ನೀವು ಗ್ರಾಹಕರು.

ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು

ಕಲಬೆರಕೆ, ಕಳಪೆ ಗುಣಮಟ್ಟ, ಸೇವೆಯ ಕೊರತೆ ಇತ್ಯಾದಿಗಳಂತಹ ಆಹಾರ ಪದಾರ್ಥಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರನ್ನು ಸಹ ಗ್ರಾಹಕರು ಒಳಗೊಂಡಿರುತ್ತಾರೆ. ಉದಾಹರಣೆಗೆ, ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಜ್ಯೂಸ್‌ಗಳಂತಹ ವಸ್ತುಗಳ ಉತ್ಪಾದನೆಗೆ ಹೋಗುವ ನೀರಿನಿಂದ ಪ್ರಾರಂಭವಾಗುವ ಜೊತೆಗೆ ಮಾನವನ ಬಳಕೆಗಾಗಿ ಸ್ಪಷ್ಟವಾಗಿ ಉದ್ದೇಶಿಸಿರುವ ಕೋಳಿ, ಕುರಿಮರಿ ಇತ್ಯಾದಿ ಪ್ರಾಣಿಗಳ ಮಾರಾಟದಿಂದ ಪ್ರಾರಂಭವಾಗುವ ಉತ್ಪನ್ನಗಳಾದ್ಯಂತ ಸಮಸ್ಯೆಗಳನ್ನು ಒಳಗೊಳ್ಳಬಹುದು.

ಮನೆ ಹುಡುಕುವುದು

ಬ್ರೋಕರ್ ಸಂಪರ್ಕಿಸಿರಿ
ಮನೆ ಅಥವಾ ಫ್ಲಾಟನ್ನು ಹುಡುಕಲು ನೀವು ತೀರ್ಮಾನಿಸಿದಾಗ, ನೀವು ವಾಸ ಮಾಡಲು ಇಚ್ಛಿಸುವ ಸ್ಥಳದ ಬ್ರೋಕರ್ ಗಳನ್ನು ಸಂಪರ್ಕಿಸಿರಿ. ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಳ್ಳಲು ನೀವು ಅಂತಿಮ ತೀರ್ಮಾನ ತೆಗೆದುಕೊಂಡು ಒಪ್ಪಂದವನ್ನು ಸಹಿ ಮಾಡಿದ ನಂತರ ಬ್ರೋಕರ್ ಗಳಿಗೆ ಸಾಮಾನ್ಯವಾಗಿ ಹಣ ನೀಡಲಾಗುತ್ತದೆ.

ಮನೆ ಪರಿವೀಕ್ಷಣೆ
ನೀವು ಬಾಡಿಗೆಗೆ ತೆಗೆದುಕೊಳ್ಳಲು ಇಚ್ಚಿಸುವ ಮನೆಯ ಬಗೆಯನ್ನು (ಫರ್ನಿಷ್ ಆಗಿರುವ/ಆಗದಿರುವ) ಅವಲಂಬಿಸಿ, ನಿಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಮನೆ ಇದೆಯೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶಕ್ಕಾಗಿ ನೀವು ಬಾಡಿಗೆ ತೆಗೆದುಕೊಳ್ಳಲು ಬಯಸುವ ಮನೆಯನ್ನು ಭೌತಿಕವಾಗಿ ಪರಿವೀಕ್ಷಣೆ ಮಾಡತಕ್ಕದ್ದು.

ನೀರು, ವಿದ್ಯುಚ್ಛಕ್ತಿ ಸರಬರಾಜು, ಬಲ್ಬ್ ಗಳು, ಫ್ಯಾನ್ ಇತ್ಯಾದಿಗಳು ಮನೆಯೊಂದರಲ್ಲಿ ಇರಬೇಕಾದ ಮೂಲಭೂತ ಸೌಕರ್ಯಗಳು. ನಿಮ್ಮ ವೈಯುಕ್ತಿಕ ಅವಶ್ಯಕತೆಳಿದ್ದಲ್ಲಿ ಮಾಲೀಕರು/ಪರವಾನಗಿ ನೀಡುವವರೊಂದಿಗೆ ಮಾತುಕತೆ ಮಾಡಿ ನಿಷ್ಕರ್ಷೆಮಾಡಿಕೊಳ್ಳಿರಿ.

ಸಾಂಕೇತಿಕ ಮುಂಗಡ ಹಣ
ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಳ್ಳುವ ಕುರಿತು ನಿರ್ಧಾರ ಮಾಡಲು ನಿಮಗೆ ಸಮಯದ ಅವಶ್ಯಕತೆ ಇದ್ದಲ್ಲಿ, ಆ ಮನೆಯನ್ನು ನಿಮಗಾಗಿ ಕಾದಿರಿಸುವ ಉದ್ದೇಶದಿಂದ ಮಾಲೀಕರಿಗೆ ನೀವು ಸಾಂಕೇತಿಕ ಮುಂಗಡ ಹಣವನ್ನು ಪಾವತಿ ಮಾಡಬಹುದಾಗಿದೆ. ಮಾಲೀಕರು ಬೇರೆ ಯಾವುದೇ ಉದ್ದೇಶಿತ ಬಾಡಿಗೆದಾರರು/ಪರವಾನಗಿದಾರರಿಗೆ ಮನೆಯನ್ನು ತೋರಿಸದಂತೆ ಖಾತರಿ ಮಾಡಿಕೊಳ್ಳಲು ಈ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿರುತ್ತದೆ. ಆದರೆ, ಇದು ಐಚ್ಛಿಕ. ನೀವೇನಾದರೂ ಸಾಂಕೇತಿಕ ಮುಂಗಡ ಮೊತ್ತವನ್ನು ಪಾವತಿ ಮಾಡಿದಲ್ಲಿ ಅದಕ್ಕಾಗಿ ರಸೀದಿಯನ್ನು ಕೊಡುವಂತೆ ಮಾಲೀಕರಿಗೆ ತಿಳಿಸಿ.

ಸಾಂಕೇತಿಕ ಮುಂಗಡ ಪಾವತಿಯು ಒಂದು ಪದ್ಧತಿಯಾಗಿದ್ದು, ಇದಕ್ಕೆ ಯಾವುದೇ ಕಾನೂನಿನ ಚೌಕಟ್ಟಿರುವುದಿಲ್ಲ. ಹೀಗಾಗಿ ಈ ಬಾಬ್ತು ಪಾವತಿ ಮಾಡಿದ ಹಣದ ಸಲುವಾಗಿ ನೀವು ಯಾವುದೇ ಕಾನೂನು ಕ್ರಮವನ್ನು ಮಾಲೀಕರ ವಿರುದ್ಧ ಕೈಗೊಳ್ಳುವುದು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಸಾಂಕೇತಿಕವಾಗಿ ಮುಂಗಡ ಪಾವತಿ ಮಾಡುವಾಗ ವಿವೇಚನೆ ಅಗತ್ಯ.

ಮಾನ್ಯ ಉಯಿಲು

ಉಯಿಲು ಮಾನ್ಯವಾಗಲು:
ಇದು ನಿಮ್ಮ ಸಹಿಯನ್ನು ಹೊಂದಿರಬೇಕು (ಅಥವಾ ನಿಮ್ಮ ಹೆಬ್ಬೆರಳಿನ ಗುರುತು).
ಸಹಿ/ಬೆರಳಚ್ಚುಗಳನ್ನು ಇತರ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಮಾಡಬೇಕು.
ಇಬ್ಬರೂ ಸಾಕ್ಷಿಗಳು ಉಯಿಲಿಗೆ ಸಹಿ ಹಾಕುತ್ತಾರೆ ಅಥವಾ ನಿಮ್ಮ ಉಪಸ್ಥಿತಿಯಲ್ಲಿ ಅವರ ಬೆರಳಚ್ಚುಗಳನ್ನು ಹಾಕುತ್ತಾರೆ.
ನಿಮ್ಮ ಉಪಸ್ಥಿತಿಯಲ್ಲಿ ನಿಮ್ಮ ಉಯಿಲಿಗೆ ಸಹಿ ಹಾಕಲು ನೀವು ಬೇರೆಯವರಿಗೆ ನಿರ್ದೇಶಿಸಬಹುದು. ಈ ಸಹಿ ಮಾಡಲು ಯಾವುದೇ ನಿಗದಿತ ಸ್ವರೂಪ ಅಥವಾ ನಿಗದಿತ ಸ್ಥಳವಿಲ್ಲ. ನಿಮ್ಮ ಉಯಿಲಿಗೆ ಯಾರಾದರೂ ಸಾಕ್ಷಿಯಾಗಬಹುದು – ಉಯಿಲಿನ ಕಾರ್ಯ ನಿರ್ವಾಹಕರೂ (ಎಕ್ಸಿಕ್ಯೂಟರ್) ಸೇರಿದಂತೆ.

ಪಿತ್ರಾರ್ಜಿತ ಹಕ್ಕುಗಳು ಯಾವುವು?

ಸ್ಥಿರ ಆಸ್ತಿಯ ವಿಷಯಕ್ಕೆ ಬಂದಾಗ, ಉತ್ತರಾಧಿಕಾರವು ವ್ಯಕ್ತಿಯ ಮರಣದ ನಂತರ ಆಸ್ತಿಯ ಮಾಲೀಕತ್ವದ ವರ್ಗಾವಣೆಯನ್ನು ಸೂಚಿಸುತ್ತದೆ.  ಒಬ್ಬರ ಮರಣದ ನಂತರ ಆಸ್ತಿ ಮಾಲೀಕತ್ವದ ಸುಗಮ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತವಾದ ಮಾರ್ಗವು ಉಯಿಲಿನ ಮೂಲಕ  ನೆಡೆಯುತ್ತದೆ1.

ಆದಾಗ್ಯೂ, ಯಾವುದೇ ಉಯಿಲು/ವಿಲ್ಇಲ್ಲದಿದ್ದರೆ, ಅಂತಹ ಆಸ್ತಿಯ ಹಂಚಿಕೆಯನ್ನು ನಿರ್ಧರಿಸಲು ಉತ್ತರಾಧಿಕಾರದ ಕಾನೂನು ಅನ್ವಯಿಸುತ್ತದೆ. ಭಾರತದಲ್ಲಿ, ವೈಯಕ್ತಿಕ ಕಾನೂನುಗಳು, ಸಾಂಪ್ರದಾಯಿಕ ಕಾನೂನುಗಳು ಮತ್ತು ಶಾಸಕಾಂಗ ಕಾನೂನುಗಳು ಆಸ್ತಿಯ ಉತ್ತರಾಧಿಕಾರದ ಕಾನೂನನ್ನು ನಿಯಂತ್ರಿಸುತ್ತವೆ. ಹಿಂದೂ ಉತ್ತರಾಧಿಕಾರ ಕಾಯಿದೆ 1956 ಮತ್ತು ಇಸ್ಲಾಮಿಕ್ ವೈಯಕ್ತಿಕ ಕಾನೂನುಗಳು ಇದಕ್ಕೆ  ಸಂಬಂಧಪಟ್ಟ ಕಾನೂನುಗಳು

ಹಿಂದೂ ಉತ್ತರಾಧಿಕಾರದ ಕಾನೂನಿನಡಿಯಲ್ಲಿ, ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಇಚ್ಛೆಯಂತೆ ಬಳಸಬಹುದು, ಆದರೆ ಪಿತ್ರಾರ್ಜಿತ ಆಸ್ತಿಯ ವರ್ಗಾವಣೆಗೆ ನಿರ್ಬಂಧಗಳಿವೆ. ಕಾನೂನು ಕೆಲವು ಕುಟುಂಬ ಸದಸ್ಯರಿಗೆ ಪೂರ್ವಜರ ಆಸ್ತಿಯ ಮೇಲೆ ಜನ್ಮಸಿದ್ಧ ಹಕ್ಕನ್ನು ನೀಡುತ್ತದೆ. ಹಿಂದೂ ಪಿತ್ರಾರ್ಜಿತ ಕಾನೂನಿನ ಅಡಿಯಲ್ಲಿ ಸಹೋದರರು ಮತ್ತು ಸಹೋದರಿಯರು ತಮ್ಮ ತಾಯಿ ಅಥವಾ ತಂದೆಯ ಆಸ್ತಿಯಲ್ಲಿ ಸಮಾನ ಪಾಲುಗಳಿಗೆ ಅರ್ಹರಾಗಿದ್ದಾರೆ. ಇಲ್ಲಿ, ‘ಮಗ’ ಮತ್ತು ‘ಮಗಳು’ ಎಂಬ ಪದಗಳು ದತ್ತು ಪಡೆದ ಪುತ್ರರು ಮತ್ತು ಹೆಣ್ಣು ಮಕ್ಕಳನ್ನು ಒಳಗೊಂಡಿರುತ್ತವೆ, ಆದರೆ ಮಲಮಕ್ಕಳನ್ನಲ್ಲ.

 ಸ್ಥಿರ ಆಸ್ತಿಯ ಮಾಲೀಕ ವಿಲ್ ಮಾಡದೆ ಇದ್ದಲ್ಲಿ, ಅಂತಹ ಆಸ್ತಿ ಬಗ್ಗೆ ಉತ್ತರಾಧಿಕಾರಿಗಳಿಗೆ ವಿವಾದವಿದ್ದರೆ , ಅವರು ನ್ಯಾಯಾಲಯದ ಮುಂದೆ ದಾವೆ ಹೂಡಬಹುದು.

ಮುಸ್ಲಿಂ ಉತ್ತರಾಧಿಕಾರದ ಕಾನೂನಿನ ಸಂದರ್ಭದಲ್ಲಿ, ಅವರ ಉಪ-ಪಂಗಡದ ( ಅಂದರೆ, ಸುನ್ನಿ ಅಥವಾ ಶಿಯಾ) ಮೇಲೆ ಅವರಿಗೆ ಅನ್ವಯವಾಗುವ ವೈಯಕ್ತಿಕ ಕಾನೂನುಗಳು   ಅವಲಂಬಿತವಾಗಿರುತ್ತದೆ. ಮುಸ್ಲಿಂ ಕಾನೂನುಗಳನ್ನು ಕ್ರೋಡೀಕರಿಸಲಾಗಿಲ್ಲ, ಅಂದರೆ ಅವುಗಳನ್ನು ಸೂಚಿಸುವ ಯಾವುದೇ ಕಾಯಿದೆ ಇಲ್ಲ. ಹನಾಫಿ ಕಾನೂನನ್ನು ಅನುಸರಿಸುವ ಸುನ್ನಿಗಳಿಗೆ, ವೈಯಕ್ತಿಕ ಕಾನೂನು ಅಂತ್ಯಕ್ರಿಯೆಯ ವೆಚ್ಚಗಳು, ಮನೆಕೆಲಸದವರ ಬಾಕಿ ವೇತನ ಮತ್ತು ಸಾಲಗಳನ್ನು ನಿರ್ವಹಿಸಿದ ನಂತರ ಉಳಿದಿರುವ ಎಸ್ಟೇಟಿನ ಗರಿಷ್ಠ ಮೂರನೇ ಒಂದು ಭಾಗಕ್ಕೆ ಪರಂಪರೆಯನ್ನು ನಿರ್ಬಂಧಿಸುತ್ತದೆ.

  1. ಉಯಿಲಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವಿವರಣೆಯನ್ನು ಓದಿ -https://kannada.nyaaya.org/legal-explainers/money-and-property/inheritance/will/ []

ವಿವಿಧ ರೀತಿಯ ಸ್ಥಿರ ಆಸ್ತಿಗಳು ಯಾವುವು?

ಭಾರತೀಯ ಕಾನೂನುಗಳ ಅಡಿಯಲ್ಲಿ, ಸ್ಥಿರ ಆಸ್ತಿಯು ಭೂಮಿ, ಕಟ್ಟಡಗಳು, ಅನುವಂಶಿಕ ಭತ್ಯೆಗಳು, ಮಾರ್ಗಗಳ ಹಕ್ಕುಗಳು, ದೀಪಗಳು, ದೋಣಿಗಳು, ಮೀನುಗಾರಿಕೆ ಅಥವಾ ಭೂಮಿಯಿಂದ ಹೊರಹೊಮ್ಮುವ ಯಾವುದೇ ಇತರ ಪ್ರಯೋಜನಗಳು ಮತ್ತು ಭೂಮಿಗೆ ಅಂಟಿಕೊಂಡಿರುವ ವಸ್ತುಗಳು ಅಥವಾ ಶಾಶ್ವತವಾಗಿ ಜೋಡಿಸಲಾದ ಯಾವುದನ್ನಾದರೂ ಒಳಗೊಂಡಿರುತ್ತದೆ. ಆದರೆ ಭೂಮಿಯಲ್ಲಿ  ನಿಂತಿರುವ ಮರ, ಬೆಳೆಯುತ್ತಿರುವ ಬೆಳೆಗಳು ಅಥವಾ ಹುಲ್ಲು ಅಲ್ಲ.((ನೋಂದಣಿ ಕಾಯಿದೆ, 1908 ರ ವಿಭಾಗ 2 (6))) ಭಾರತ ಸಂವಿಧಾನದ VII ಶೆಡ್ಯೂಲ್ ಅಡಿಯಲ್ಲಿ ಭೂಮಿ ರಾಜ್ಯದ ವಿಷಯವಾಗಿರುವುದರಿಂದ, ಸ್ಥಿರ ಆಸ್ತಿಯನ್ನು ನಿಯಂತ್ರಿಸುವ ಕಾನೂನುಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.

ಬ್ಯಾಂಕಿನಲ್ಲಿ ದೂರು ದಾಖಲಿಸುವುದು

ಸಾಮಾನ್ಯವಾಗಿ ಎಲ್ಲ ಬ್ಯಾಂಕುಗಳು ಇಂತಹ ಉದ್ದೇಶಕ್ಕಾಗಿಯೇ ಮೀಸಲಾದ ಸಿಬ್ಬಂದಿಯನ್ನು ಹೊಂದಿರುತ್ತವೆ. ನಿಮ್ಮ ಡೆಬಿಟ್ / ಕ್ರೆಡಿಟ್ ಕಾರ್ಡಿನ ಹಿಂಭಾಗದಲ್ಲಿ ಹಾಗೂ ಬ್ಯಾಂಕಿನ ವೆಬ್ ಸೈಟಿನಲ್ಲಿ ಈ ಸಿಬ್ಬಂದಿಯ ಸಂಪರ್ಕ ಮಾಹಿತಿ ಲಭ್ಯವಿರುತ್ತದೆ. ಹೆಲ್ಪ್ ಡೆಸ್ಕ್ ಗಳ ದೂರವಾಣಿ ಸಂಖ್ಯೆಗಳನ್ನು ಎಟಿಎಂ ಯಂತ್ರದ ಮೇಲೆಯೂ ನಮೂದಿಸಲಾಗಿರುತ್ತದೆ. ನೀವು ಆನ್ ಲೈನ್ ವ್ಯವಹಾರಗಳಲ್ಲಿ ಹಣ ಕಳೆದುಕೊಂಡಲ್ಲಿ ತಕ್ಷಣವೇ ನಿಮ್ಮ ಬ್ಯಾಂಕನ್ನು ದೂರವಾಣಿ (ಆದ್ಯತೆ ಮೇರೆಗೆ) ಅಥವಾ ಇ-ಮೇಲ್ ಮೂಲಕ ಸಂಪರ್ಕಿಸತಕ್ಕದ್ದು. ನಿಮ್ಮ ದೂರು ಸಂಖ್ಯೆಯನ್ನು ಬರೆದಿಟ್ಟುಕೊಳ್ಳಲು ಮರೆಯಬೇಡಿ. ದೂರಿನ ಕುರಿತು ಯಾವುದೇ ಪತ್ರ ವ್ಯವಹಾರದಲ್ಲಿ ಈ ಸಂಖ್ಯೆಯನ್ನು ನೀವು ತಪ್ಪದೇ ನಮೂದಿಸತಕ್ಕದ್ದು. ನಿಮ್ಮ ಇ-ಮೇಲ್ ಸೀಕೃತಿಯ ಬಗ್ಗೆ ಬ್ಯಾಂಕ್ ನಿಮಗೆ ದೃಢಪಡಿಸಬೇಕು.

ಬ್ಯಾಂಕಿಂಗ್ ಕೋಡ್ಸ್ ಅಂಡ್ ಸ್ಟಾಂಡರ್ಡ್ಸ್ ಬೋರ್ಡ್ ಆಫ್ ಇಂಡಿಯಾ ಜಾರಿಗೆ ತಂದಿರುವ ಗ್ರಾಹಕ ಬದ್ಧತೆ ಸಂಹಿತೆ ಪ್ರಕಾರ ಗ್ರಾಹಕ ದೂರುಗಳನ್ನು  ಪರಿಹರಿಸಲು ನಿಯುಕ್ತಿಗೊಂಡಿರುವ ಅಧಿಕಾರಿಯ ಹೆಸರನ್ನು ಬ್ಯಾಂಕಿನ ಶಾಖೆಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.

ಶಾಖೆಯ ಮಟ್ಟದಲ್ಲಿ ನಿಮ್ಮ ದೂರು ಪರಿಹಾರವಾಗದಿದ್ದಲ್ಲಿ ಬ್ಯಾಂಕಿನ ರೀಜನಲ್ ಅಥವಾ ಜೋನಲ್ ಮ್ಯಾನೇಜರ್ ಅಥವಾ ಪ್ರಧಾನ ನೋಡಲ್ ಆಫೀಸರ್ ರವರನ್ನು ಶಾಖೆಯಲ್ಲಿ ಪ್ರದರ್ಶಿಸಿರುವ ವಿಳಾಸದಲ್ಲಿ ಸಂಪರ್ಕಿಸಿರಿ. ಸಾಮಾನ್ಯವಾಗಿ, ನಿಮ್ಮ ದೂರನ್ನು ಸ್ವೀಕರಿಸಿದ 30 ದಿನಗಳೊಳಗೆ ಬ್ಯಾಂಕ್ ತನ್ನ ಅಂತಿಮ ಉತ್ತರ ನೀಡುತ್ತದೆ ಅಥವಾ ದೂರನ್ನು ವಿಚಾರಣೆ ಮಾಡಲು ಹೆಚ್ಚಿನ ಕಾಲಾವಕಾಶ ಅಗತ್ಯವಿದ್ದಲ್ಲಿ ಅದಕ್ಕೆ ಕಾರಣಗಳನ್ನು ವಿವರಿಸುತ್ತದೆ. ಬ್ಯಾಂಕಿನ ಅಂತಿಮ ಉತ್ತರ ನಿಮಗೆ ತೃಪ್ತಿದಾಯಕವಾಗಿರದಿದ್ದಲ್ಲಿ ನೀವು ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ಸಹ ಬ್ಯಾಂಕ್ ನಿಮಗೆ ತಿಳಿಸುತ್ತದೆ.

ಚೆಕ್ ನೀಡುವವರ/ ಡ್ರಾಯರ್ನ ಉದ್ದೇಶ

ನೀವು ನೀಡಿದ ಚೆಕ್ ಬೌನ್ಸ್ ಆಗಿದ್ದರೆ, ಚೆಕ್‌ನ ಡ್ರಾಯರ್‌ನ ಉದ್ದೇಶವು ಅಪ್ರಸ್ತುತವಾಗುತ್ತದೆ. ನಿಮ್ಮ ಚೆಕ್ ಬೌನ್ಸ್ ಆಗಲು ನೀವು ಬಯಸುತ್ತೀರೋ ಇಲ್ಲವೋ ಎಂಬುದು ಅಪ್ರಸ್ತುತ. ಕೆಟ್ಟ ಉದ್ದೇಶ ಅಥವಾ ದುರುದ್ದೇಶವಿಲ್ಲದೆ ಚೆಕ್ ಬೌನ್ಸ್ ಆಗಿದ್ದರೂ ಅದನ್ನು ಕಾನೂನುಬಾಹಿರ ಮತ್ತು ಕಾನೂನಿನ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲಾಗುತ್ತದೆ.

ಗ್ರಾಹಕ ಹಕ್ಕುಗಳು ಯಾವುವು?

ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದ ಗ್ರಾಹಕರು ಮಾರುಕಟ್ಟೆಗೆ ಗುರಿಯಾಗುತ್ತಾರೆ. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯ, ಇದರಿಂದ ಅವರು ಆತ್ಮವಿಶ್ವಾಸದಿಂದ ಮತ್ತು ಅವರ ಆಸಕ್ತಿಗಳಿಗೆ ಸಂಬಂಧಿಸಿದಂತೆ ಆಯ್ಕೆಗಳನ್ನು ಮಾಡಬಹುದು. ಗ್ರಾಹಕ ಹಕ್ಕುಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ, ಆದರೆ ಇವುಗಳಿಗೆ ಸೀಮಿತವಾಗಿಲ್ಲ:

ಜೀವ ಮತ್ತು ಆಸ್ತಿಗೆ ಅಪಾಯಕಾರಿಯಾದ ಸರಕು ಮತ್ತು ಸೇವೆಗಳ ವಿರುದ್ಧ ರಕ್ಷಣೆಯ ಹಕ್ಕು

ಸರಕುಗಳು ಗ್ರಾಹಕರ ತಕ್ಷಣದ ಅಗತ್ಯಗಳನ್ನು ಪೂರೈಸುವುದಲ್ಲದೆ, ದೀರ್ಘಾವಧಿಯ ಹಿತಾಸಕ್ತಿಗಳನ್ನು ಪೂರೈಸಬೇಕು ಮತ್ತು ಸರಕು ಮತ್ತು ಸೇವೆಗಳ ಬಳಕೆಯು ಗ್ರಾಹಕರಿಗೆ ಯಾವುದೇ ಹಾನಿಯನ್ನುಂಟು ಮಾಡಬಾರದು. ಉದಾಹರಣೆಗೆ, ಒಬ್ಬ ವ್ಯಕ್ತಿಯು ಜ್ವರದಂತಹ ಈಗಿರುವ ಕಾಯಿಲೆಯನ್ನು ಗುಣಪಡಿಸುವ ಔಷಧಿಯನ್ನು ಬಳಸಿದರೆ, ಔಷಧಿ ಕೆಟ್ಟ ಪರಿಣಾಮಗಳನ್ನು ಉಂಟುಮಾಡಿದರೆ, ನಂತರ ಅವರು ಗ್ರಾಹಕರ ದೂರನ್ನು ದಾಖಲಿಸಬಹುದು.

ಮಾಹಿತಿ ಹಕ್ಕು

ಸರಕುಗಳ ಗುಣಮಟ್ಟ, ಪ್ರಮಾಣ, ಸಾಮರ್ಥ್ಯ, ಶುದ್ಧತೆ ಮತ್ತು ಬೆಲೆಯ ಬಗ್ಗೆ ಗ್ರಾಹಕರಿಗೆ ಮಾಹಿತಿ ಹಕ್ಕಿದೆ. ಮಾರಾಟಗಾರರು ಉತ್ಪನ್ನದ ಲೇಬಲ್‌ಗಳ ಮೇಲೆ ಅಧಿಕೃತ ಮಾಹಿತಿಯನ್ನು ಹಾಕುತ್ತಾರೆ ಮತ್ತು ನಿಜವಲ್ಲದ ಹೇಳಿಕೊಳ್ಳುವಿಕೆಗಳನ್ನು ನೀಡುವುದಿಲ್ಲ ಎಂದು ಈ ಹಕ್ಕು ಖಚಿತಪಡಿಸುತ್ತದೆ.

ಮಂಡಿ ಬೆಲೆಗಳು, ದೈನಂದಿನ ಬೆಲೆ ವರದಿಗಳು, ಗ್ರಾಹಕರ ಡಿಜಿಟಲ್ ಸುರಕ್ಷತೆಯ ಕುರಿತು ಶೈಕ್ಷಣಿಕ ಸಾಮಗ್ರಿಗಳು ಇತ್ಯಾದಿಗಳೊಂದಿಗೆ ಅಗತ್ಯ ವಸ್ತುಗಳ ಬೆಲೆ ನಿಗಾ ಪಟ್ಟಿಯನ್ನು ಸರ್ಕಾರ ಪ್ರಕಟಿಸುತ್ತದೆ. ತಮಿಳುನಾಡಿನಂತಹ ಕೆಲವು ರಾಜ್ಯ ಸರ್ಕಾರಗಳು ಗ್ರಾಹಕರಿಗೆ ಶಿಕ್ಷಣ ನೀಡಲು ಸಲಹೆಗಳನ್ನು ಪ್ರಕಟಿಸಿವೆ.

ಸಾಧ್ಯವಾದಲ್ಲೆಲ್ಲಾ ಸ್ಪರ್ಧಾತ್ಮಕ ಬೆಲೆಗಳಲ್ಲಿ ವಿವಿಧ ವಸ್ತುಗಳನ್ನು ಆಯ್ಕೆ ಮಾಡುವ ಹಕ್ಕು

ಗ್ರಾಹಕರು ನ್ಯಾಯಯುತ ಬೆಲೆಯಲ್ಲಿ ಸರಕು ಮತ್ತು ಸೇವೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಉದಾಹರಣೆಗೆ, ಆಸ್ಪತ್ರೆಯ ವೈದ್ಯಕೀಯ ಮಳಿಗೆಯಿಂದ ಅಥವಾ ಸಾಮಾನ್ಯ ಮಳಿಗೆಗಳಿಂದ ನ್ಯಾಯಯುತ ಬೆಲೆಯಲ್ಲಿ ಔಷಧಿಗಳನ್ನು ಖರೀದಿಸುವ ಹಕ್ಕು ನಿಮಗೆ ಇದೆ.

ಗ್ರಾಹಕರ ಪರಿಹಾರ ವೇದಿಕೆಗಳಲ್ಲಿ ದೂರು ಸಲ್ಲಿಸುವ ಹಕ್ಕು

ಗ್ರಾಹಕರು ತಮ್ಮ ದೂರುಗಳನ್ನು ಸಲ್ಲಿಸಲು ಪರಿಹಾರ ವೇದಿಕೆಗಳನ್ನು ಬಳಸಲು ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾರೆ. ಪ್ರತಿ ಗ್ರಾಹಕರು ದೂರು ಸಲ್ಲಿಸಲು ಮತ್ತು ತಮ್ಮ ಸಮಸ್ಯೆಯನ್ನು ವಿವರಿಸುವ ಹಕ್ಕನ್ನು ಹೊಂದಿದ್ದಾರೆ, ಇದರಿಂದ ಕುಂದುಕೊರತೆಗಳನ್ನು ಪರಿಹರಿಸಬಹುದು.

ಅನ್ಯಾಯದ ವ್ಯಾಪಾರ ಪದ್ಧತಿಗಳ ವಿರುದ್ಧ ಪರಿಹಾರ ಹುಡುಕುವ ಹಕ್ಕು

ಅನ್ಯಾಯದ ವ್ಯಾಪಾರ ಪದ್ಧತಿಗಳು ಸಾಮಾನ್ಯವಾಗಿ ಯೋಜನೆಗಳು, ಜಾಹೀರಾತುಗಳು ಇತ್ಯಾದಿಗಳ ಮೂಲಕ ಗ್ರಾಹಕರನ್ನು ವಂಚನೆ, ಮೋಸಗೊಳಿಸುವಿಕೆ ಅಥವಾ ದಗಾ ಹಾಕುವುದನ್ನು ಸಂಬಂಧಿಸಿವೆ. ಕಾನೂನು ಗ್ರಾಹಕರನ್ನು ಶೋಷಣೆಗೆ ಒಳಗಾಗದಂತೆ ರಕ್ಷಿಸುತ್ತದೆ ಮತ್ತು ಪರಿಹಾರ ವೇದಿಕೆಗಳ ಮೂಲಕ ಗ್ರಾಹಕರು ನ್ಯಾಯಯುತ ಪರಿಹಾರವನ್ನು ಪಡೆಯಲು ವ್ಯವಸ್ಥೆಯನ್ನು ರಚಿಸುತ್ತದೆ.

ಮಾಲೀಕರೊಂದಿಗೆ ಮಾತುಕತೆ ಮಾಡುವ ವಿಧಾನ

ಗುರ್ತಿನ ದಾಖಲೆ ಪಡೆದುಕೊಳ್ಳಿ
ಮಾಲೀಕರು/ಪರವಾನಗಿ ನೀಡುವವರೇ ಮನೆಯ ಕಾನೂನುಬದ್ಧ ಮಾಲೀಕರು ಅಥವಾ ಮನೆಯನ್ನು ಬಾಡಿಗೆಗೆ ನೀಡಲು ಮಾಲೀಕರಿಂದ ಅನುಮತಿ ಪಡೆದಿರುವವರು ಎಂಬುದನ್ನು ಖಾತರಿಗೊಳಿಸಿಕೊಳ್ಳಲು ಮಾಲೀಕರು/ಪರವಾನಗಿ ನೀಡುವವರ ಗುರ್ತಿನ ದಾಖಲೆಯನ್ನು ನೀವು ಕೇಳಬಹುದಾಗಿದೆ. ಆ ವ್ಯಕ್ತಿಯು ತಾನು ಯಾರು ಎಂದು ಪ್ರತಿಬಿಂಬಿಸಿಕೊಳ್ಳುತ್ತಿದ್ದಾನೆಯೋ ಆತನ ಸತ್ಯಾಸತ್ಯತೆಯನ್ನು ದೃಢೀಕರಣಗೊಳಿಸಿಕೊಳ್ಳುವುದು ಇದರ ಉದ್ದೇಶ. ಆಧಾರ್ ಕಾರ್ಡ್, ಚಾಲನಾ ಪರವಾನಗಿ ಇತ್ಯಾದಿಗಳನ್ನು ಸಾಮಾನ್ಯವಾಗಿ ಗುರ್ತಿನ ದಾಖಲೆಗಳಾಗಿ ಬಳಸಲಾಗುತ್ತದೆ. ಈ ದಾಖಲೆಗಳನ್ನು ವ್ಯಕ್ತಿಯ ಭಾವಚಿತ್ರ ಮತ್ತು ಖಾಯಂ ವಿಳಾಸ ಇರತಕ್ಕದ್ದು.

ಬಾಡಿಗೆ ಮತ್ತು ಮುಂಗಡ ಠೇವಣಿ ಕುರಿತು ಸಂಧಾನ
ಮುಂಗಡ ಠೇವಣಿ ಮತ್ತು ಬಾಡಿಗೆ ಮೊತ್ತದ ಕುರಿತು ಮಾಲೀಕರೊಂದಿಗೆ ಸೂಕ್ತವಾಗಿ ಮಾತುಕತೆ ನಡೆಸಿ, ಎರಡಕ್ಕೂ ರಸೀದಿ ನೀಡುವಂತೆ ತಿಳಿಸಿರಿ. ಕೆಲವು ಸಂದರ್ಭಗಳಲ್ಲಿ ಬಾಡಿಗೆ ನಿರ್ಧಾರಿಸುವಾಗ ಬ್ರೋಕರ್ ಗಳು ಅತ್ಯಂತ ಹೆಚ್ಚಿನ ನೆರವನ್ನು ನೀಡಬಲ್ಲರು. ಹೀಗಾಗಿ ಮಾತುಕತೆ ಸಮಯದಲ್ಲಿ ಅವರನ್ನೂ ನಿಮ್ಮೊಂದಿಗೆ ಕರೆತನ್ನಿ.

ಮನೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಸಂಧಾನ
ಮನೆಯನ್ನು ಪರಿವೀಕ್ಷಣೆ ಮಾಡುವಾಗ ನಿಮ್ಮ ಅವಶ್ಯಕತೆಗೆ ಸಂಬಂಧಿಸಿದಂತೆ ಏನಾದರೂ ಮಾರ್ಪಾಡಿನ ಅಗತ್ಯವಿದ್ದಲ್ಲಿ ಒಪ್ಪಂದ ಸಹಿಮಾಡುವ ಮೊದಲೇ ಅದನ್ನು ಮಾಲೀಕರ ಗಮನಕ್ಕೆ ತನ್ನಿರಿ. ಹೀಗೆ ಮಾಡುವುದರಿಂದ ಮಾಲೀಕರು ಮಾತುಕತೆಗೆ ಮುಕ್ತರಾಗಿದ್ದಾರೆಯೇ ಮತ್ತು ನೀವು ಉತ್ತಮ ಬೆಲೆಗೆ ನಿಮ್ಮ ಅನಕೂಲಕ್ಕೆ ತಕ್ಕದಾದ ಬಾಡಿಗೆ ಮನೆಯನ್ನು ಪಡೆಯುತ್ತಿದ್ದೇರೇ ಎಂದು ಖಾತರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಅವಶ್ಯಕತೆಗಳನ್ನು – ದುರಸ್ತಿ ಇತ್ಯಾದಿ – ಪಟ್ಟಿಮಾಡಿ ಮಾಲೀಕರಿಗೆ ನೀಡಿರಿ.

ಉಯಿಲಿನಲ್ಲಿ ಇರಬೇಕಾದ ವಿಷಯಗಳು

ನೀವು ಸಂಪೂರ್ಣ ಮಾಲೀಕತ್ವವನ್ನು ಹೊಂದಿರುವ ನಿಮ್ಮ ಎಲ್ಲಾ ಆಸ್ತಿಯನ್ನು ನೀವು ಬಿಟ್ಟುಕೊಡಬಹುದು. ನೀವು ಹೊಂದಿರದ ಆಸ್ತಿಯನ್ನು ನೀವು ಬಿಟ್ಟುಕೊಡಲು ಸಾಧ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ, ನೀವು ಆಸ್ತಿಯಲ್ಲಿ ಜೀವಿತಾವಧಿಯ ಹಕ್ಕನ್ನು ಮಾತ್ರ ಹೊಂದಿರಬಹುದು, ಅಂದರೆ ನಿಮ್ಮ ಜೀವಿತಾವಧಿಯಲ್ಲಿ ಬಳಸಲು ಮಾತ್ರ ಯಾರಾದರೂ ತಮ್ಮ ಇಚ್ಚಾನುಸಾರ ಆಸ್ತಿಯನ್ನು ನಿಮಗೆ ನೀಡಿದಾಗ, ಅದು ನಿಮ್ಮ ಸೊತ್ತಾಗಿರುವುದಿಲ್ಲ .

ನೀವೇ ಸಂಪಾದಿಸಿರುವ ಯಾವುದೇ ಚರಾಸ್ತಿ ಅಥವಾ ಸ್ಥಿರಾಸ್ತಿಯನ್ನು ನೀವು ಉಯಿಲಿಗೆ ಸೇರಿಸಿಕೊಳ್ಳಬಹುದು. ನೀವು ಹಿಂದೂ ಅವಿಭಕ್ತ ಕುಟುಂಬದ ಸದಸ್ಯರಾಗಿದ್ದರೆ, ನಿಮ್ಮ ಪಾಲಿಗೆ ಬರುವ ನಿಮ್ಮ ಪೂರ್ವಜರ ಆಸ್ತಿಯ ಭಾಗವನ್ನು ಮಾತ್ರ ಉಯಿಲಿನಲ್ಲಿ ನೀಡಬಹುದು.