ಉಚಿತ ಮತ್ತು ಕಡ್ಡಾಯ ಶಿಕ್ಷಣ

ಶಿಕ್ಷಣದ ಹಕ್ಕು ಭಾರತದ ಸಂವಿಧಾನ, 1950, ಅನುಚ್ಛೇದ 21A ಅಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕು. ಶಿಕ್ಷಣದ ಹಕ್ಕನ್ನು ಖಾತರಿಪಡಿಸುವ ಕಾನೂನನ್ನು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯಿದೆ, 2009 ಎಂದು ಕರೆಯಲಾಗುತ್ತದೆ. 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳು – ಅಂಗವಿಕಲ ಮಕ್ಕಳು, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ ಮಕ್ಕಳು, ಹಿಂದುಳಿದ ಗುಂಪುಗಳಿಗೆ ಸೇರಿದವರು ಮತ್ತು ಎಲ್ಲಾ ಆದಾಯ ಗುಂಪುಗಳಿಗೆ ಸೇರಿದ ಮಕ್ಕಳು 1 ರಿಂದ 8 ನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕನ್ನು ಹೊಂದಿರುತ್ತಾರೆ.

ಅಂತಹ ಮಕ್ಕಳ ಪೋಷಕರು ತಮ್ಮ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯಲು ಯಾವುದೇ ಶುಲ್ಕ ಅಥವಾ ವೆಚ್ಚಗಳನ್ನು ಪಾವತಿಸಬೇಕಾಗಿಲ್ಲ. ಪ್ರಾಥಮಿಕ ಶಿಕ್ಷಣಕ್ಕಾಗಿ ಶಾಲೆಗೆ ದಾಖಲಾದ ಪ್ರತಿ ಮಗುವಿಗೆ ಶಾಲಾ ರಜಾದಿನಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಪೌಷ್ಟಿಕ ಊಟವನ್ನು ಉಚಿತವಾಗಿ ನೀಡಲಾಗುತ್ತದೆ.

ಮಾಹಿತಿಗಾಗಿ ಕೋರಿಕೆ ಸಲ್ಲಿಕೆ

ಮಾಹಿತಿ ಕೋರಿ ಸಲ್ಲಿಸುವ ಅರ್ಜಿಯು ಇಂಗ್ಲಿಷ್, ಹಿಂದಿ ಅಥವಾ ಆಯಾ ಪ್ರದೇಶದ ಅಧಿಕೃತ ಭಾಷೆಯಲ್ಲಿರಬಹುದು. ಅರ್ಜಿಯು ಲಿಖಿತ ರೂಪದಲ್ಲಿರಬೇಕು. ಅದನ್ನು ವೈಯುಕ್ತಿಕವಾಗಿ, ಅಂಚೆ ಮೂಲಕ, ಇ-ಮೇಲ್ ಮೂಲಕ ಅಥವಾ ಆನ್ ಲೈನ್ ವೆಬ್ ಸೈಟುಗಳ ಮೂಲಕ ಸಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಸಾರ್ವಜನಿಕ ಪ್ರಾಧಿಕಾರಗಳಿಗೆ ಮಾಹಿತಿ ಹಕ್ಕು ಅರ್ಜಿಯನ್ನು ನೇರವಾಗಿ ಸಲ್ಲಿಸಬಹುದಾದ ಆನ್ ಲೈನ್ ಫೋರಂ ಲಭ್ಯವಿದೆ. ಅರ್ಜಿಯನ್ನು ಆನ್ ಲೈನ್ ಮೂಲಕ ಕಳುಹಿಸುವ ಕುರಿತು ಜಾಲತಾಣದಲ್ಲಿ ಹಂತ-ಹಂತವಾಗಿ ನಿಮಗೆ ಮಾರ್ಗದರ್ಶನ ಲಭ್ಯವಿದ್ದು ಈ ಸೌಲಭ್ಯವನ್ನೂ ನೀವು ಬಳಸಿಕೊಳ್ಳಬಹುದಾಗಿದೆ.

ಯಾವುದೇ ವ್ಯಕ್ತಿಯು ಬರವಣಿಗೆ ಮಾಡಲು ಅಶಕ್ತರು ಅಥವಾ ಅನಕ್ಷರಸ್ಥರಾಗಿದ್ದ ಪಕ್ಷದಲ್ಲಿ ಅಂತಹ ವ್ಯಕ್ತಿಗೆ ಅವಶ್ಯವಿರುವ ಮಾಹಿತಿ ವಿವರಗಳನ್ನು ಅವರಿಂದ ಪಡೆದುಕೊಂಡು ಲಿಖಿತ ರೂಪದಲ್ಲಿ ಅರ್ಜಿ ತಯಾರು ಮಾಡುವುದು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕರ್ತವ್ಯ. ಕಣ್ತಪ್ಪಿನಿಂದಾಗಿ ಅರ್ಜಿಯನ್ನು ಅನ್ಯ ಪ್ರಾಧಿಕಾರಕ್ಕೆ ಕಳುಹಿಸಿದಲ್ಲಿ, ಅಂತಹ ಅರ್ಜಿಯನ್ನು ಸ್ವೀಕರಿಸುವ ಸಾರ್ವಜನಿಕ ಮಾಹಿತಿ ಅಧಿಕಾರಿಯು ಐದು ದಿನಗಳೊಳಗಾಗಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಅರ್ಜಿಯನ್ನು ವರ್ಗಾಯಿಸಲು ಕರ್ತವ್ಯಬದ್ಧನಾಗಿರುತ್ತಾನೆ.

ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ

6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳು 1ನೇ ತರಗತಿಯಿಂದ 8ನೇ ತರಗತಿವರೆಗೆ ಉಚಿತವಾಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಬಹುದು.

ನೆರೆಹೊರೆ ಶಾಲೆಗಳನ್ನು ಸಮೀಪಿಸಿ

ಮಕ್ಕಳು ನೆರೆಹೊರೆ ಶಾಲೆಗಳಲ್ಲಿ ತರಗತಿಗಳಿಗೆ ಹಾಜರಾಗಬಹುದು. ಈ ನೆರೆಹೊರೆ ಶಾಲೆಗಳು ಕೆಳಕಂಡ ನಡೆಯಬಹುದಾದ ದೂರದಲ್ಲಿ ಸ್ಥಾಪಿಸಿರಬೇಕು:

  • ಮಗುವಿನ ನೆರೆಹೊರೆಯಿಂದ ಒಂದು ಕಿಲೋಮೀಟರ್ (ಮಗು I ರಿಂದ V ನೇ ತರಗತಿಯಲ್ಲಿದ್ದರೆ) ಮತ್ತು
  • ಮಗುವಿನ ನೆರೆಹೊರೆಯಿಂದ ಮೂರು ಕಿಲೋಮೀಟರ್ (ಮಗು VI ರಿಂದ VIII ನೇ ತರಗತಿಯಲ್ಲಿದ್ದರೆ).

ಆದಾಗ್ಯೂ, ಕಾನೂನು ಮಕ್ಕಳ ಶಿಕ್ಷಣವನ್ನು ನೆರೆಹೊರೆ ಶಾಲೆಗಳಿಗೆ ಮಾತ್ರ ಸೀಮಿತಗೊಳಿಸುವುದಿಲ್ಲ. ಉಚಿತವಾಗಿ ಶಿಕ್ಷಣ ಪಡೆಯಲು ಮಗುವಿನ ನೆರೆಹೊರೆಯಿಂದ ದೂರವಿದ್ದರೂ ಮಗುವಿಗೆ ಯಾವುದೇ ಶಾಲೆಗೆ ದಾಖಲಾಗಲು ಸ್ವಾತಂತ್ರ್ಯವಿದೆ. ಆದಾಗ್ಯೂ, ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರ ನೇರವಾಗಿ ಅಥವಾ ಪರೋಕ್ಷವಾಗಿ ನಡೆಸುವ ಅಥವಾ ಗಣನೀಯವಾಗಿ ಧನಸಹಾಯ ನೀಡುವ (ರಾಜ್ಯ ಸ್ಥಾಪಿತ ಶಾಲೆಗಳಾದ ಕೇಂದ್ರೀಯ ವಿದ್ಯಾಲಯ, ಹರಿಯಾಣದ ಆರೋಹಿ ಶಾಲೆಗಳು, ಇತ್ಯಾದಿ) ಶಾಲೆಗಳಿಂದ ಮಾತ್ರ ಮಗುವು ಈ ಕಾಯ್ದೆಯಡಿ ಶಿಕ್ಷಣವನ್ನು ಪಡೆಯಬಹುದು ಎಂಬುದನ್ನು ಗಮನಿಸುವುದು ಮುಖ್ಯ. ಆದ್ದರಿಂದ ಮೇಲೆ ನೀಡಲಾದ ಶಾಲೆಗಳನ್ನು ಹೊರತುಪಡಿಸಿ ಮಗುವನ್ನು ಬೇರೆ ಶಾಲೆಗಳಿಗೆ ಸೇರಿಸಿದರೆ, ಅವರ ಪೋಷಕರು ಮಗುವಿನ ಶಿಕ್ಷಣದ ವೆಚ್ಚಗಳ ಮರುಪಾವತಿಗಾಗಿ ಹಕ್ಕು ಸಲ್ಲಿಸಲು ಸಾಧ್ಯವಿಲ್ಲ. ಆದಾಗ್ಯೂ, ಇದು ಹಿಂದುಳಿದ ಗುಂಪುಗಳಿಗೆ 25% ಕಾಯ್ದಿರಿಸಿದ ಪ್ರವೇಶಗಳ ಅಡಿಯಲ್ಲಿ ಗಣನೆಗೊಳ್ಳುವುದಿಲ್ಲ.

ಶಿಕ್ಷಣ ಹಕ್ಕು ವ್ಯಾಪ್ತಿಯಲ್ಲಿರುವ ಶಾಲೆಗಳ ಪ್ರವೇಶ ಪ್ರಕ್ರಿಯೆಯು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಆದಾಗ್ಯೂ, ಕೆಲವು ಪ್ರಕ್ರಿಯೆಗಳು ಸಾಮಾನ್ಯ. ಒಂದು ಮಗುವನ್ನು ಶಾಲೆಗೆ ಸೇರಿಸಲು, ಈ ಕೆಳಗಿನವುಗಳು ರಾಜ್ಯಗಳಾದ್ಯಂತ ಸಾಮಾನ್ಯ ಅಭ್ಯಾಸಗಳು:

ಪ್ರವೇಶ ನಮೂನೆಗಳನ್ನು ಭರ್ತಿ ಮಾಡುವುದು

ರಾಜ್ಯ ಸರ್ಕಾರಗಳು ಒದಗಿಸಿದ ನಮೂನೆ ಅನ್ನು ಪೋಷಕರು ತುಂಬಬೇಕಾಗುತ್ತದೆ. ಪ್ರತಿ ರಾಜ್ಯವು ಪ್ರವೇಶಕ್ಕಾಗಿ ಪ್ರತ್ಯೇಕ ಪೋರ್ಟಲ್ ಅನ್ನು ಹೊಂದಿರುವುದರಿಂದ ಈ ನಮೂನೆಗಳು ಸರ್ಕಾರಿ ಪೋರ್ಟಲ್‌ನಲ್ಲಿ ಲಭ್ಯವಿದೆ. ಕೆಲವು ಉದಾಹರಣೆಗಳು ಪಂಜಾಬ್, ಮಹಾರಾಷ್ಟ್ರ ಇತ್ಯಾದಿ. ನಮೂನೆ ಅನ್ನು ಪಡೆಯಲು ನೀವು ನೆರೆಹೊರೆ ಶಾಲೆಗಳನ್ನು ಸಹ ಸಂಪರ್ಕಿಸಬಹುದು. ಯೋಜಿತವಲ್ಲದ ಪ್ರವೇಶಗಳ ಸಂದರ್ಭದಲ್ಲಿ ಶಾಲೆಗಳನ್ನು ಆಯ್ಕೆ ಮಾಡಲು ಸಹ ನಮೂನೆ ಅವಕಾಶ ಒದಗಿಸುತ್ತದೆ. ಗರಿಷ್ಠ ಐದು ಶಾಲೆಗಳನ್ನು ಆಯ್ಕೆ ಮಾಡಬಹುದು.

ಗುರುತಿನ ದಾಖಲೆಗಳನ್ನು ಒದಗಿಸುವುದು

ಕೆಲವು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ. ಈ ದಾಖಲೆಗಳು ಮಗುವಿನ ಐಡಿಯನ್ನು ವಯಸ್ಸಿನ ಪುರಾವೆಯಾಗಿ (ಜನನ ಪ್ರಮಾಣಪತ್ರ, ಅಂಗನವಾಡಿ ದಾಖಲೆ, ಆಧಾರ್ ಕಾರ್ಡ್ ಇತ್ಯಾದಿ) ಮತ್ತು ಪೋಷಕರ ID ಗಳನ್ನು ಒಳಗೊಂಡಿರುತ್ತದೆ. ನಮೂನೆಗಳು ಕುಟುಂಬದ ಪಡಿತರ ಚೀಟಿ, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಮತ್ತು ಮಕ್ಕಳ ವಿಶೇಷ ಅಗತ್ಯಗಳನ್ನು ಎತ್ತಿ ತೋರಿಸುವ ಸಂಬಂಧಿತ ಪ್ರಮಾಣಪತ್ರಗಳಂತಹ ದಾಖಲೆಗಳನ್ನು ಪಟ್ಟಿ ಮಾಡುತ್ತವೆ. ಅಂತಹ ಭರ್ತಿ ಮಾಡಿದ ನಮೂನೆಯನ್ನು ಸಾಮಾನ್ಯವಾಗಿ ನೆರೆಹೊರೆ ಶಾಲೆಗೆ ಸಲ್ಲಿಸಬಹುದು. ಕೆಲವು ರಾಜ್ಯಗಳು ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್‌ ಮಾಡಿರುವುದರಿಂದ, ಅರ್ಜಿಯನ್ನು ಸರ್ಕಾರಿ ಪೋರ್ಟಲ್‌ನಲ್ಲಿ ಸಾಗಿಸಬಹುದು.

ಶಾಲಾ ಶುಲ್ಕಗಳು ಮತ್ತು ವೆಚ್ಚಗಳು

ಯಾವುದೇ ಶುಲ್ಕ ಅಥವಾ ವೆಚ್ಚವನ್ನು ಪಾವತಿಸದೆ ಮಕ್ಕಳು ಶಾಲೆಗಳಿಗೆ ಪ್ರವೇಶ ಪಡೆಯಬಹುದು. ಭಾರತದಲ್ಲಿ ಶಿಕ್ಷಣದ ಹಕ್ಕು ಕಾನೂನು ಮಗುವಿನ ಪ್ರವೇಶಕ್ಕೆ ಮುಂಚಿತವಾಗಿ ಯಾವುದೇ ಶುಲ್ಕವನ್ನು ವಿಧಿಸುವುದನ್ನು ನಿಷೇಧಿಸುತ್ತದೆ. ಶಾಲಾ ಶುಲ್ಕವನ್ನು ಹೊರತುಪಡಿಸಿ ಯಾವುದೇ ರೀತಿಯ ದೇಣಿಗೆ / ಶುಲ್ಕವನ್ನು ವಿಧಿಸಲು ಯಾವ ಶಾಲೆಗೂ ಅನುಮತಿ ಇಲ್ಲ.

ಪ್ರವೇಶಕ್ಕೆ ಯಾವುದೇ ಪರೀಕ್ಷಣ ಕಾರ್ಯವಿಧಾನವಿಲ್ಲ

ಇದಲ್ಲದೆ, ಪ್ರವೇಶಕ್ಕೆ ಮುನ್ನ ಶಾಲೆಗಳು ಮಗುವನ್ನು ಅಥವಾ ಪೋಷಕರನ್ನು ಯಾವುದೇ ರೀತಿಯ ಪರೀಕ್ಷಣ ಕಾರ್ಯವಿಧಾನಕ್ಕೆ ಒಳಪಡಿಸುವಂತಿಲ್ಲ. ಪರೀಕ್ಷಣ ಪ್ರಕ್ರಿಯೆಯು ಶಾಲೆಗೆ ಪ್ರವೇಶದ ಉದ್ದೇಶಕ್ಕಾಗಿ ಮಗುವಿನ ಅಥವಾ ಪೋಷಕರ ಯಾವುದೇ ಪರೀಕ್ಷೆ ಅಥವಾ ಸಂದರ್ಶನವನ್ನು ಒಳಗೊಂಡಿರಬಹುದು. ಶಾಲೆಯು ಮಕ್ಕಳನ್ನು ರಾಂಡಮ್ ಆಗಿ ಆಯ್ಕೆ ಮಾಡಬೇಕು ಮತ್ತು ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಮುಕ್ತ ಲಾಟರಿ ವಿಧಾನವನ್ನು ಬಳಸಿಕೊಳ್ಳಬೇಕು. ಇದನ್ನು ಕಾಗದ ಚೀಟಿಗಳಲ್ಲಿ ಮಕ್ಕಳ ಹೆಸರುಗಳನ್ನು ಬರೆಯುವ ರೂಪದಲ್ಲಿ ಮಾಡಬಹುದು ಮತ್ತು ನಂತರ ಪಾರದರ್ಶಕತೆಯನ್ನು ಖಚಿತಪಡಿಸಲು ಅವುಗಳನ್ನು ರಾಂಡಮ್ ಆಗಿ ಪೆಟ್ಟಿಗೆಯಿಂದ ಹೊರತೆಗೆಯಬಹುದು. ಈ ನಿಬಂಧನೆಯ ಮೊದಲ ಉಲ್ಲಂಘನೆಗಾಗಿ ಶಾಲೆಗಳಿಗೆ ರೂ.25,000 ವರೆಗೆ ದಂಡ ವಿಧಿಸಬಹುದು ಮತ್ತು ನಂತರದ ಯಾವುದೇ ಉಲ್ಲಂಘನೆಗಳಿಗೆ ರೂ.50,000 ವರೆಗೆ ದಂಡ ವಿಸ್ತರಿಸಬಹುದು.

ಮಾಹಿತಿ ಹಕ್ಕು ಅರ್ಜಿಯ ಶುಲ್ಕ

ಮಾಹಿತಿ ಹಕ್ಕು ಅರ್ಜಿಯೊಡನೆ ತೆರಬೇಕಾದ ಶುಲ್ಕವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬೇರೆಯಾಗಿರುತ್ತದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಪ್ರಾಧಿಕಾರಗಳಿಗೆ ಈ ಶುಲ್ಕ ರೂ. 10. ಆಯಾ ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿರುವ ಸಾರ್ವಜನಿಕ ಪ್ರಾಧಿಕಾರಗಳಿಗೆ ತೆರಬೇಕಾದ ಶುಲ್ಕವನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿರಿ.

ಅರ್ಜಿ ಶುಲ್ಕದ ಜೊತೆಯಲ್ಲಿ, ಮಾಹಿತಿಯನ್ನು ನಿಮಗೆ ತಲುಪಿಸಲು (ನಮೂನೆ/ಪುಟಗಳ ಸಂಖ್ಯೆಯ ಆಧಾರದ ಮೇಲೆ) ನೀವು ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಪ್ರಾಧಿಕಾರಗಳಿಗೆ ತೆರಬೇಕಾದ ಈ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಾಹಿತಿ ಹಕ್ಕು ನಿಯಮಗಳು, 2012ನ್ನು ನೋಡಿರಿ. ರಾಜ್ಯ ಸರ್ಕಾರದ ಅಡಿಯಲ್ಲಿರುವ
ಸಾರ್ವಜನಿಕ ಪ್ರಾಧಿಕಾರಗಳಿಗೆ ತೆರಬೇಕಾದ ಶುಲ್ಕಕ್ಕೆ ಆಯಾ ರಾಜ್ಯದ ನಿಯಮಾವಳಿಗಳನ್ನು ನೋಡಿರಿ.

ಸಾರ್ವಜನಿಕ ಮಾಹಿತಿ ಅಧಿಕಾರಿಯ ನಿಮಗೆ ಹೆಚ್ಚಿನ ಶುಲ್ಕವನ್ನು ಪಾವತಿಸುವಂತೆ ತಿಳಿಸಬಹುದು. ಆದರೆ, ಶುಲ್ಕದ ರೂಪದಲ್ಲಿ ತೆರಬೇಕಾದ ಮೊತ್ತಕ್ಕೆ ಸೂಕ್ತ ಲೆಕ್ಕಾಚಾರವನ್ನು ಆತ ನೀಡತಕ್ಕದ್ದು ಮತ್ತು ಅಂತಹ ಮೊತ್ತ ನ್ಯಾಯೋಚಿತವೆಂದು ಸಮರ್ಥಿಸಿಕೊಳ್ಳತಕ್ಕದ್ದು. ಹೆಚ್ಚಿನ ಶುಲ್ಕ ಪಾವತಿಗಾಗಿ ನೀಡುವ ನೋಟೀಸಿನ ದಿನಾಂಕದಿಂದ ಆ ಶುಲ್ಕವನ್ನು ಪಾವತಿಸುವ ದಿನದವರೆಗಿನ ಅವಧಿಯನ್ನು, ನಿಮಗೆ ಮಾಹಿತಿ ನೀಡಬೇಕಾದ ಕಡ್ಡಾಯ 30 ದಿನಗಳ ಅವಧಿಯೊಳಗೆ ಪರಿಗಣಿಸಲಾಗುವುದಿಲ್ಲ.

ಶಾಲೆಗಳ ವಿವಿಧ ವರ್ಗಗಳು

ಈ ಕೆಳಕಂಡ ಶಾಲೆಗಳು ಮಕ್ಕಳ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣಕ್ಕಾಗಿ ನಿಬಂಧನೆಗಳನ್ನು ಮಾಡುವ ಜವಾಬ್ದಾರಿಯನ್ನು ಹೊಂದಿವೆ.

ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಸ್ಥಾಪಿಸಲ್ಪಟ್ಟ, ಮಾಲೀಕತ್ವದ ಅಥವಾ ನಿಯಂತ್ರಿಸಲ್ಪಡುವ ಶಾಲೆಗಳು

ಇಂತಹ ಶಾಲೆಗಳು ಪ್ರವೇಶ ಪಡೆದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿವೆ. ಉದಾಹರಣೆಗೆ, ಹೊಸ ದೆಹಲಿ ಮುನ್ಸಿಪಾಲಿಟಿ ಕೌನ್ಸಿಲ್ ಅಥವಾ ದೆಹಲಿ ಕಂಟೋನ್ಮೆಂಟ್ ಬೋರ್ಡ್ ನಡೆಸುವ ಶಾಲೆಗಳು.

ಅನುದಾನಿತ ಶಾಲೆಗಳು

ಅನುದಾನಿತ ಶಾಲೆಗಳು ಎಂದರೆ ಖಾಸಗಿಯಾಗಿ ಸ್ಥಾಪಿತವಾದ ಶಾಲೆಗಳು, ಆದರೆ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ನೆರವು ಅಥವಾ ಅನುದಾನದ ರೂಪದಲ್ಲಿ ಪೂರ್ಣ ಅಥವಾ ಸ್ವಲ್ಪಮಟ್ಟಿಗೆ ಧನಸಹಾಯವನ್ನು ಪಡೆಯುವ ಶಾಲೆಗಳು. ಪ್ರವೇಶ ಪಡೆದ ಮಕ್ಕಳ ಪೈಕಿ ಕನಿಷ್ಠ 25% ರಷ್ಟು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಬೇಕು ಮತ್ತು ಅದರ ವಾರ್ಷಿಕ ಮರುಕಳಿಸುವ ನೆರವು ಅಥವಾ ಅನುದಾನ ಅದರ ವಾರ್ಷಿಕ ಮರುಕಳಿಸುವ ವೆಚ್ಚಗಳಿಗೆ ಹೋಲಿಸಿ ಪಡೆದಂತಹ ಮಕ್ಕಳ ಅನುಪಾತಕ್ಕೆ ಒದಗಿಸಬೇಕು.

ನಿರ್ದಿಷ್ಟ ವರ್ಗದ ಶಾಲೆಗಳು ಮತ್ತು ಸರ್ಕಾರದಿಂದ ಯಾವುದೇ ರೀತಿಯ ನೆರವು ಅಥವಾ ಅನುದಾನವನ್ನುಪಡೆಯದಂತಹ ಅನುದಾನರಹಿತ ಶಾಲೆಗಳು

ನಿರ್ದಿಷ್ಟಪಡಿಸಿದ ವರ್ಗಕ್ಕೆ ಸೇರಿದ ಶಾಲೆಗಳು ಎಂದರೆ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಸೈನಿಕ ಶಾಲೆಗಳು ಅಥವಾ ವಿಶಿಷ್ಟ ಲಕ್ಷಣವನ್ನು ಹೊಂದಿರುವ ಮತ್ತು ಸರ್ಕಾರದಿಂದ ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಿದ ಇತರ ಶಾಲೆಗಳು. ವಿಶೇಷ ಶಾಲೆಗಳ ಹೊರತಾಗಿ ಸರ್ಕಾರದಿಂದ ಯಾವುದೇ ಅನುದಾನ ಪಡೆಯದ ಅನುದಾನರಹಿತ ಶಾಲೆಗಳು ಸಹ ಕಾನೂನಿನ ವ್ಯಾಪ್ತಿಗೆ ಬರುತ್ತವೆ. ಅಂತಹ ಶಾಲೆಗಳಲ್ಲಿ, ಪ್ರಾಥಮಿಕ ಶಿಕ್ಷಣವು ಪೂರ್ಣಗೊಳ್ಳುವವರೆಗೆ ತರಗತಿಯ 25% ರಷ್ಟು ಮಕ್ಕಳನ್ನು I ನೇ ತರಗತಿಗೆ ಸೇರಿಸಿಕೊಳ್ಳಬೇಕು. ಈ ಅನುಪಾತವು ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳನ್ನು ಮತ್ತು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದಂತಹ ಹಿಂದುಳಿದ ಗುಂಪುಗಳನ್ನು ಒಳಗೊಂಡಿದೆ.

ಮೇಲೆ ತಿಳಿಸಿದ 25% ನಿಯಮವು ಯಾವುದಾದರೂ ಶಾಲೆ ಒದಗಿಸಿದರೆ, ಶಾಲಾಪೂರ್ವ ಶಿಕ್ಷಣಕ್ಕೂ ಅನ್ವಯಿಸುತ್ತದೆ.

ಅಲ್ಪಸಂಖ್ಯಾತ ಶಾಲೆಗಳು

ಅಲ್ಪಸಂಖ್ಯಾತ ಶಾಲೆಗಳು ಅಲ್ಪಸಂಖ್ಯಾತ ಗುಂಪಿನ ಸದಸ್ಯರು ನಡೆಸುವ ಶಾಲೆಗಳು. ಅಲ್ಪಸಂಖ್ಯಾತರು ಹಿಂದೂಗಳನ್ನು ಹೊರತುಪಡಿಸಿ ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಪಾರ್ಸಿಗಳಂತಹ ಧಾರ್ಮಿಕ ಗುಂಪುಗಳು. ಅವರು ರಾಜ್ಯದ ಮುಖ್ಯ ಅಥವಾ ಅಧಿಕೃತ ಭಾಷೆಯನ್ನು ಮಾತನಾಡದ ರಾಜ್ಯದ ಗುಂಪುಗಳು, ಉದಾಹರಣೆಗೆ ಹರಿಯಾಣದಲ್ಲಿ ತಮಿಳರು ಅಥವಾ ಕರ್ನಾಟಕದ ಗುಜರಾತಿಗಳು. ಭಾರತದ ಸಂವಿಧಾನವು ಅಲ್ಪಸಂಖ್ಯಾತರು ತಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸಲು ತಮ್ಮದೇ ಆದ ರೀತಿಯಲ್ಲಿ ಶಾಲೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಇದರರ್ಥ ಅಲ್ಪಸಂಖ್ಯಾತ ಶಾಲೆಗಳು ಇತರ ಶಾಲೆಗಳಿಗೆ ಅನ್ವಯಿಸುವ ಎಲ್ಲಾ ನಿಯಮಗಳನ್ನು ಅನುಸರಿಸಬೇಕಾಗಿಲ್ಲ ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ.

ಮಾಹಿತಿ ಹಕ್ಕು ಅರ್ಜಿಯನ್ನು ವಿಲೇ ಮಾಡುವ ಪ್ರಕ್ರಿಯೆ

ಅರ್ಜಿದಾರನು ಕೋರಿರುವ ಮಾಹಿತಿಯನ್ನು ಒದಗಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿ 30 ದಿನಗಳ ಸಮಯವನ್ನು ಹೊಂದಿರುತ್ತಾರೆ. ಅರ್ಜಿಯನ್ನು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸಲ್ಲಿಸಿದ್ದಲ್ಲಿ, ಕೋರಿರುವ ಮಾಹಿತಿಯನ್ನು 35 ದಿನಗಳ ಒಳಗೆ ಒದಗಿಸತಕ್ಕದ್ದು. ಕೋರಿರುವ ಮಾಹಿತಿಯು ವ್ಯಕ್ತಿಯೊಬ್ಬನ ಪ್ರಾಣಕ್ಕೆ ಪ್ರತಿಕೂಲವಾಗಿದ್ದು, ತುರ್ತಾಗಿ ಅಗತ್ಯವಿದ್ದಲ್ಲಿ, ಅಂತಹ ಮಾಹಿತಿಯನ್ನು 48 ಘಂಟೆಗಳ ಒಳಗೆ ಒದಗಿಸತಕ್ಕದ್ದು.

ಈ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯ ಕೆಲವು ಅರ್ಜಿಗಳಿಗೆ ಉತ್ತರ ನೀಡಲು ನಿರಾಕರಿಸಬಹುದು. ಈ ಕಾಯ್ದೆಯ ಪರಿಧಿಯಿಂದ ವಿನಾಯ್ತಿ ಪಡೆದಿರುವ ಮಾಹಿತಿಗಳ ವಿವರಕ್ಕಾಗಿ ಸೆಕ್ಷನ್ 8 ಮತ್ತು 9 ನ್ನು ದಯವಿಟ್ಟು ಗಮನಿಸಿರಿ.

ಮಾಹಿತಿಯನ್ನು 30/35 ದಿನಗಳ ಒಳಗೆ ಒದಗಿಸದಿದ್ದಲ್ಲಿ, ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿಯನ್ನು ತಡೆಹಿಡಿದಿದ್ದಾರೆಂದು ನೀವು ಭಾವಿಸಬಹುದು. ಮೇಲಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿಗಾಗಿ ಅರ್ಜಿ ಶುಲ್ಕವನ್ನು ಹೊರತುಪಡಿಸಿ ಬೇರಾವುದೇ ಮೊತ್ತವನ್ನು ನಿಮ್ಮಿಂದ ಪಡೆಯುವಂತಿಲ್ಲ.

ಶಾಲೆಗಳಿಗೆ ಪ್ರವೇಶ ನಿರಾಕರಣೆ

ಯಾವುದೇ ಶೈಕ್ಷಣಿಕ ವರ್ಷದಲ್ಲಿ ಪ್ರವೇಶವನ್ನು ಕೋರಿದ ಸಮಯ ಏನೇ ಆದರೂ, ಯಾವುದೇ ಮಗುವಿಗೆ ಶಾಲೆಗೆ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ. ಸಾಮಾನ್ಯವಾಗಿ, ಶೈಕ್ಷಣಿಕ ಅಧಿವೇಶನದ ಆರಂಭದಲ್ಲಿ ಎಲ್ಲಾ ಮಕ್ಕಳನ್ನು ಶಾಲೆಗೆ ದಾಖಲಿಸಬೇಕು, ಆದಾಗ್ಯೂ, ಶಾಲಾ ವರ್ಷದ ಮಧ್ಯದಲ್ಲೂ ಸಹ ಮಗುವಿಗೆ ಶಾಲೆಗೆ ಪ್ರವೇಶವನ್ನು ಶಾಲೆಗಳು ಅನುಮತಿಸತಕ್ಕದ್ದು.

ವಿಶೇಷ ತರಬೇತಿ

ಶೈಕ್ಷಣಿಕ ಅವಧಿಯ ಪ್ರಾರಂಭದ ಆರು ತಿಂಗಳ ನಂತರ ಪ್ರವೇಶ ಪಡೆದ ಮಕ್ಕಳಿಗೆ ಅವರ ಅಧ್ಯಯನವನ್ನು ಪೂರ್ಣಗೊಳಿಸಲು ಶಾಲೆಯ ಮುಖ್ಯ ಶಿಕ್ಷಕರು ನಿರ್ಧರಿಸಿದಂತೆ ವಿಶೇಷ ತರಬೇತಿಯನ್ನು ನೀಡಬಹುದು. ವಿಶೇಷ ತರಬೇತಿಯು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ವ್ಯವಸ್ಥೆಯಲ್ಲಿ ಸಂಯೋಜಿಸಲಾಗಿದ್ದಾರೆಂದು ಖಚಿತಪಡಿಸುತ್ತದೆ. ಅಂತಹ ಬೆಂಬಲವು ಅಗತ್ಯವಿರುವಂತೆ ವಸತಿ ಅಥವಾ ವಸತಿರಹಿತ ಕೋರ್ಸ್ ಗಳ ರೂಪದಲ್ಲಿರುತ್ತದೆ ಮತ್ತು ಅಂತಹ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಲು 14 ವರ್ಷ ವಯಸ್ಸಿನ ಮೇಲೂ ಮುಂದುವರಿಯುತ್ತಾರೆ.

ದೈಹಿಕ ಶಿಕ್ಷೆ ಮತ್ತು ಮಾನಸಿಕ ಕಿರುಕುಳದ ನಿಷೇಧ

ಶಾಲಾ ಅಧಿಕಾರಿಗಳ ಕೈಯಿಂದ ಯಾವುದೇ ಮಗು ದೈಹಿಕ ಶಿಕ್ಷೆ ಅಥವಾ ಮಾನಸಿಕ ಕಿರುಕುಳಕ್ಕೆ ಒಳಗಾಗುವಂತಿಲ್ಲ. ದೈಹಿಕ ಕಿರುಕುಳವು ಮಕ್ಕಳಿಗೆ ಹೊಡೆಯುವುದು, ಅವರ ಕೂದಲನ್ನು ಎಳೆಯುವುದು, ಬಡಿಯುವುದು, ಯಾವುದೇ ವಸ್ತುವಿನಿಂದ (ರೂಲರ್, ಚಾಕ್) ಹೊಡೆಯುವ ಮೂಲಕ ದೈಹಿಕ ಹಾನಿಯನ್ನುಂಟುಮಾಡುವುದನ್ನು ಒಳಗೊಂಡಿರುತ್ತದೆ. ಮಾನಸಿಕ ಕಿರುಕುಳ ಎಂದರೆ ಮಗುವನ್ನು ಅವರ ಹಿನ್ನೆಲೆ, ಜಾತಿ, ಪೋಷಕರ ಉದ್ಯೋಗಕ್ಕೆ ಸಂಬಂಧಿಸಿದಂತೆ ಅಪಹಾಸ್ಯ ಮಾಡುವುದು ಅಥವಾ ಅವರ ಪರ್ಫಾರ್ಮೆನ್ಸ್ ಅನ್ನು ಸುಧಾರಿಸಲು ಮಗುವನ್ನು ಅವಮಾನಿಸುವುದು, ಇತ್ಯಾದಿ. ಮಗುವನ್ನು ಇಂತಹ ಕಿರುಕುಳಕ್ಕೆ ಒಳಪಡಿಸಿದವರ ಮೇಲೆ ಅನ್ವಯವಾಗುವ ಸೇವಾ ನಿಯಮಗಳ ಅಡಿಯಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ.

ಮಕ್ಕಳನ್ನು ಹೊರಹಾಕಲು ನಿಷೇಧ

ಯಾವುದೇ ಮಗು ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಶಾಲೆಯಿಂದ ಹೊರಹಾಕಲಾಗುವುದಿಲ್ಲ.

ನೀವು ಕೋರಿರುವ ಮಾಹಿತಿ ಒದಗಿಸಲು ನಿರಾಕರಣೆ

ಸಾರ್ವಜನಿಕ ಮಾಹಿತಿ ಅಧಿಕಾರಿಯು ನೀವು ಕೋರಿರುವ ಮಾಹಿತಿಯನ್ನು ನೀಡಲು ನಿರಾಕರಿಸಿದಲ್ಲಿ, ಆತ ಈ ಕೆಳಕಂಡ ವಿವರಗಳನ್ನು ನೀಡತಕ್ಕದ್ದು.
 ನಿಮ್ಮ ಕೋರಿಕೆಯನ್ನು ಯಾವ ಕಾರಣಕ್ಕಾಗಿ ನಿರಾಕರಿಸಲಾಗಿದೆ.
 ಈ ನಿರಾಕರಣೆಯ ವಿರುದ್ಧ ನೀವು ಯಾವ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು.
 ಈ ಮೇಲ್ಮನವಿಯನ್ನು ಸಲ್ಲಿಸಲು ಲಭ್ಯವಿರುವ ಅವಧಿ.

ಸಾರ್ವಜನಿಕ ಮಾಹಿತಿ ಅಧಿಕಾರಿಯು ಕಾನೂನುಬಾಹಿರವಾಗಿ ನಿಮಗೆ ಮಾಹಿತಿಯನ್ನು ಒದಗಿಸದಿದ್ದಲ್ಲಿ ಅಥವಾ ಮಾಹಿತಿಯನ್ನು ನೀಡಲು ನಿರಾಕರಿಸಿದಲ್ಲಿ, ನೀವು ಅವರಿಗಿಂತ ಹೆಚ್ಚಿನ ಶ್ರೇಣಿಯ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು ಅಥವಾ ಕೇಂದ್ರ ಅಥವಾ ರಾಜ್ಯ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಬಹುದು.

ಶಾಲೆಗಳಲ್ಲಿ ಪಠ್ಯಕ್ರಮ ಮತ್ತು ಮೌಲ್ಯಮಾಪನ ವಿಧಾನಗಳು

ಪ್ರತಿ ರಾಜ್ಯ ಸರ್ಕಾರವು ಪಠ್ಯಕ್ರಮ ಮತ್ತು ಮೌಲ್ಯಮಾಪನ ಕಾರ್ಯವಿಧಾನಗಳನ್ನು ನಿಗದಿಪಡಿಸಿದ ವಿವಿಧ ಶೈಕ್ಷಣಿಕ ಪ್ರಾಧಿಕಾರಗಳನ್ನು ನಿರ್ದಿಷ್ಟಪಡಿಸಿದೆ. ಇವುಗಳು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (SCERT) ಅಥವಾ ರಾಜ್ಯದ ಇತರ ಶೈಕ್ಷಣಿಕ ಸಂಸ್ಥೆಗಳಾಗಿರಬಹುದು. ಉದಾಹರಣೆಗೆ, ದೆಹಲಿ ಎಸ್‌ಸಿಇಆರ್‌ಟಿ ಮತ್ತು ಉತ್ತರಾಖಂಡ ಎಸ್‌ಸಿಇಆರ್‌ಟಿಗಳು ತಮ್ಮ ರಾಜ್ಯಗಳಲ್ಲಿನ ಪಠ್ಯಕ್ರಮದ ಜವಾಬ್ದಾರಿಯನ್ನು ಹೊಂದಿವೆ. ಆದಾಗ್ಯೂ, ರಾಜ್ಯದ ಪಠ್ಯಕ್ರಮಗಳನ್ನು ಕೆಲವು ಸಾಮಾನ್ಯ ತತ್ವಗಳ ಪ್ರಕಾರ ಸಿದ್ಧಪಡಿಸಬೇಕು.

ರಾಜ್ಯದ ಪಠ್ಯಕ್ರಮಗಳು ಮತ್ತು ಮೌಲ್ಯಮಾಪನ ಕಾರ್ಯವಿಧಾನಗಳು ಮಗುವಿನ ಜ್ಞಾನದ ತಿಳುವಳಿಕೆಯ ಸಮಗ್ರ ಮತ್ತು ನಿರಂತರ ಮೌಲ್ಯಮಾಪನವನ್ನು ಒಳಗೊಂಡಿರಬೇಕು.

  • ಇದು ಮಕ್ಕಳ ಸ್ನೇಹಿಯಾಗಿ ಮಗುವಿನ ಸರ್ವತೋಮುಖ ಬೆಳವಣಿಗೆಯತ್ತ ಗಮನ ಹರಿಸಬೇಕು.
  • ಸಾಧ್ಯವಾದಷ್ಟು ಮಟ್ಟಿಗೆ, ಬೋಧನೆಯ ಮಾಧ್ಯಮವು ಮಗುವಿನ ಮಾತೃಭಾಷೆಯಾಗಿರಬೇಕು.

ಮಾಹಿತಿಯನ್ನು ತಡೆಹಿಡಿದಿದ್ದಕ್ಕಾಗಿ/ತಪ್ಪು ಮಾಹಿತಿಯನ್ನು ನೀಡಿದ್ದಕ್ಕಾಗಿ ವಿಧಿಸುವ ಜುಲ್ಮಾನೆ

ಮಾಹಿತಿಯನ್ನು ತಡೆಹಿಡಿದ ಅಥವಾ ತಪ್ಪು ಮಾಹಿತಿಯನ್ನು ನೀಡಿದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ರಾಜ್ಯ ಅಥವಾ ಕೇಂದ್ರ ಮಾಹಿತಿ ಆಯೋಗವು ಪ್ರತಿ ದಿನಕ್ಕೆ ರೂ.250/- ಜುಲ್ಮಾನೆ ವಿಧಿಸಬಹುದು. ಮಾಹಿತಿಯನ್ನು ಒದಗಿಸುವ ದಿನದವರೆಗೂ ಈ ಜುಲ್ಮಾನೆಯನ್ನು ತೆರತಕ್ಕದ್ದು. ಆದರೆ, ಹೀಗೆ ತೆರುವ ಜುಲ್ಮಾನೆಯ ಗರಿಷ್ಟ ಮೊತ್ತ ರೂ.25,000/-ವನ್ನು ಮೀರತಕ್ಕದ್ದಲ್ಲ.

ಜುಲ್ಮಾನೆ ವಿಧಿಸುವ ಮೊತ್ತ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ನೀಡತಕ್ಕದ್ದು. ಆದರೆ, ತನ್ನ ತೀರ್ಮಾನ ನ್ಯಾಯೋಚಿತ ಎಂದು ರುಜುವಾತುಪಡಿಸುವ ಜವಾಬ್ದಾರಿ ಅಧಿಕಾರಿಯದ್ದಾಗಿರುತ್ತದೆ. ಸೇವಾ ನಿಯಮಗಳ ಅನ್ವಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿರುದ್ಧ ಶಿಸ್ತುಕ್ರಮವನ್ನು ಜರುಗಿಸಬಹುದಾಗಿದೆ.