ಹಿರಿಯ ನಾಗರಿಕರನ್ನು ತ್ಯಜಿಸಿದರೆ ಅಥವಾ ನಿರ್ಲಕ್ಷಿಸಿದರೆ ಶಿಕ್ಷೆ

ನೀವು ಒಬ್ಬ ಹಿರಿಯ ನಾಗರಿಕರನ್ನು ಯಾವುದೇ ಜಾಗದಲ್ಲಿ ಅವರನ್ನು ತ್ಯಜಿಸುವುದಕ್ಕಾಗಲಿ ಅಥವಾ ಅವರ ಕಾಳಜಿ ತೆಗೆದುಕೊಳ್ಳಬಾರದು ಎಂಬ ಉದ್ದೇಶದಿಂದ ಬಿಟ್ಟು ಹೋದಲ್ಲಿ, ನಿಮಗೆ ೩ ತಿಂಗಳ ಸೆರೆಮನೆ ವಾಸ ಮತ್ತು/ಅಥವಾ ೫೦೦೦ ರೂಪಾಯಿಗಳ ದಂಡ ವಿಧಿಸಲಾಗುವುದು. ಪೊಲೀಸರು ನ್ಯಾಯಾಲಯದ ಅನುಮತಿ ಇಲ್ಲದೆ ಆರೋಪಿಗಳನ್ನು ಬಂಧಿಸಬಹುದು. ಆದಾಗ್ಯೂ ಇದು ಜಾಮೀನು ನೀಡಬಹುದಾದ ಅಪರಾಧವಾಗಿದೆ. ನೀವು ಜಾಮೀನು ಪತ್ರದ ಮೊತ್ತ ನೀಡಬಹುದಾದಲ್ಲಿ ಸೆರೆಮನೆಯಿಂದ ಬಿಡುಗಡೆ ಹೊಂದಬಹುದು.

ಬಾಲ್ಯ ವಿವಾಹದ ನಿಷೇಧ

ಬಾಲ್ಯ ವಿವಾಹಗಳು ಭಾರತದಲ್ಲಿ ಸಾವಿರಾರು ವರ್ಷಗಳಿಂದ ನಡೆಯುತ್ತಾ ಬಂದಿವೆ. ಈ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸಲು ನಮ್ಮ ಕಾನೂನು ಬಾಲ್ಯ ವಿವಾಹ ನೆರವೇರಿಸುವುದನ್ನು

ನಿಷೇಧಿಸಿದೆ ಹಾಗು ಇಂತಹ ವಿವಾಹಗಳ ನಿರ್ವಹಣೆಯಲ್ಲಿ ತೊಡಗಿದವರಿಗೆ ಶಿಕ್ಷೆಯನ್ನು ವಿಧಿಸುತ್ತದೆ.

ಆದಾಗ್ಯೂ, ಅಪ್ರಾಪ್ತವಯಸ್ಕರು ಮದುವೆಯಾದಲ್ಲಿ ಕಾನೂನಿನಡಿ ಅದು ಅಮಾನ್ಯವಲ್ಲ. ಆದ ಮದುವೆಯನ್ನು ಮುಂದುವರಿಸಬೇಕೋ ಅಥವಾ ರದ್ದುಪಡಿಸಬೇಕೋ ಎಂಬ ನಿರ್ಧಾರ ಆ ಸಂಬಂಧಪಟ್ಟ ಮಕ್ಕಳದ್ದು.

ಭಾರತದ ಕೆಲವು ವೈಯಕ್ತಿಕ ಕಾನೂನುಗಳಡಿ (ಬೇರೆ ಬೇರೆ ಧರ್ಮಗಳ ಮದುವೆ, ವಿಚ್ಛೇದನ, ಇತ್ಯಾದಿ ವಿಷಯಗಳನ್ನು ನಿರ್ವಹಿಸುವ ಧಾರ್ಮಿಕ ಕಾನೂನುಗಳು), ಮಕ್ಕಳು ಪ್ರೌಢಾವಸ್ಥೆ ಮುಟ್ಟಿದ ಮೇಲೆ ವಿವಾಹದ ಅವಕಾಶವಿದೆ. ಇದು ಹೆಣ್ಣು ಮಕ್ಕಳು ೧೮ ಮುಟ್ಟುವ ಮುನ್ನ ಹಾಗು ಗಂಡು ಮಕ್ಕಳು ೨೧ ಮುಟ್ಟುವ ಮುನ್ನ ಸಂಭವವಿದೆ. ಹಲವಾರು ಪ್ರಕರಣಗಳಲ್ಲಿ ನಮ್ಮ ನ್ಯಾಯಾಲಯಗಳು ಇಂತಹ ಮದುವೆಗಳು ಅಮಾನ್ಯವಲ್ಲ ಎಂದು ತೀರ್ಪುಗಳನ್ನು ನೀಡಿವೆ. ಆದಾಗ್ಯೂ, ಸಂಬಂಧಪಟ್ಟ ಮಕ್ಕಳು ತಮ್ಮ ಮದುವೆಗಳನ್ನು ಬಾಲ್ಯ ವಿವಾಹ ಕಾನೂನಿನಡಿ ರದ್ದುಗೊಳಿಸುವ ಹಕ್ಕನ್ನು ಹೊಂದಿರುತ್ತಾರೆ.

ಹೀಗಿದ್ದರೂ ಕೂಡ, ಕೆಲವು ಸಂದರ್ಭಗಳಲ್ಲಿ, ಕೆಲವು ಬಾಲ್ಯ ವಿವಾಹಗಳು ಸಂಪೂರ್ಣವಾಗಿ ಅಮಾನ್ಯ ಎಂದು ನಮ್ಮ ಕಾನೂನು ಪರಿಗಣಿಸುತ್ತದೆ.

ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನಾ ಅರ್ಜಿ ಸಲ್ಲಿಸುವಿಕೆ

ವಿಚ್ಛೇದನ ಎಂದರೆ ನೀವು ನಿಮ್ಮ ಸಂಗಾತಿಯಿಂದ ಅಂತಿಮವಾಗಿ ಹಾಗು ಮಾರ್ಪಡಿಸಲಾಗದಂತೆ ಬೇರ್ಪಡೆ ಹೊಂದುವುದು. ಕಾನೂನಿನಡಿಯಲ್ಲಿ ಬೇರೆ ತರಹಗಳ, ಅಂತಿಮವಲ್ಲದ ವೈವಾಹಿಕ ಬೇರ್ಪಡೆಗಳೂ ಸಂಭವವಿವೆ.

ನಿಮ್ಮ ವಿವಾಹವು ಮಾನ್ಯವಿದ್ದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ನಿಮ್ಮ ವಿವಾಹವು ಅಮಾನ್ಯವಿದ್ದಲ್ಲಿ, ನಿಮ್ಮ ಸಂಬಂಧವನ್ನು ಕಾನೂನಾತ್ಮಕವಾಗಿ ರದ್ದುಗೊಳಿಸಲು ಕೋರ್ಟಿಗೆ ಅರ್ಜಿಸಲ್ಲಿಸಬೇಕಾಗುತ್ತದೆ.

ಕೋರ್ಟಿಗೆ ಹೋಗುವುದು:

ನಿಮಗೆ ವಿಚ್ಛೇದನ ಬೇಕಾದಲ್ಲಿ ಕೋರ್ಟಿಗೆ ಹೋಗಬೇಕಾಗುತ್ತದೆ. ನಿಮ್ಮ ವಿಚ್ಛೇದನದ ಪ್ರಕರಣ ಕೋರ್ಟಿನಲ್ಲಿ ನಡೆಯುತ್ತಿರುವಾಗಲೂ ಸಹ, ನಿಮ್ಮ ಸಂಗಾತಿ ಹಾಗು ಮಕ್ಕಳನ್ನು ಸಂಬಂಧಿಸಿದ ಕೆಲವು ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ. ಉದಾಹರಣೆಗೆ, ಅವರಿಗೆ ಆರ್ಥಿಕ ಬೆಂಬಲ ನೀಡುವುದು.

ಅಕ್ರಮವಾದ ಕ್ರಿಶ್ಚಿಯನ್ ಮದುವೆಗಳು ಯಾವುವು?

ಅಕ್ರಮ ಮದುವೆಗಳು ಕೆಲವು ಷರತ್ತುಗಳನ್ನು ಪಾಲಿಸದೆ ನಡೆದಿರುತ್ತವೆ. ಸಾಮಾನ್ಯವಾಗಿ, ಇಂತಹ ಮದುವೆಗಳು, ಶುರುವಿನಿಂದ ಅಮಾನ್ಯವೆಂದು ಪರಿಗಣಿಸಲಾಗುತ್ತವೆ. ಆದರೆ, ಕಾನೂನಿನ ಪ್ರಕಾರ ಮದುವೆಗಳಲ್ಲಿ ಅಕ್ರಮಗಳಿದ್ದಲ್ಲಿ ಅವುಗಳನ್ನು ಸುಧಾರಿಸಬಹುದಾಗಿದೆಯೋ ವಿನಃ, ಇಂತಹ ಮದುವೆಗಳು ಅಮಾನ್ಯವಾಗುವುದಿಲ್ಲ. ಮದುವೆಗಳು ಅಕ್ರಮವಾಗುವ ಕೆಲವು ಕಾರಣಗಳನ್ನು ಕೆಳಗೆ ಕೊಡಲಾಗಿವೆ. ದೋಷಗಳು ಇವುಗಳಲ್ಲಿ ಇರಬಹುದು:

  • ಮದುವೆಯಾಗ ಬಯಸುವ ವ್ಯಕ್ತಿಗಳ ನಿವಾಸ ಸ್ಥಾನದ ಕುರಿತ ಹೇಳಿಕೆಯಲ್ಲಿ
  • ಕಾನೂನಿನ ಪ್ರಕಾರ ಮದುವೆಗೆ ಯಾರ ಒಪ್ಪಿಗೆ ಬೇಕಾಗಿದೆಯೋ, ಆ ವ್ಯಕ್ತಿಯು ಒಪ್ಪಿಗೆ ಕೊಟ್ಟ ರೀತಿಯಲ್ಲಿ
  • ಮದುವೆಯ ಸೂಚನೆಯಲ್ಲಿ
  • ಮದುವೆಯ ಪ್ರಮಾಣಪತ್ರದಲ್ಲಿ
  • ಮಾಡುವೆ ನಡೆದ ಸ್ಥಳ ಮತ್ತು ಸಮಯದಲ್ಲಿ
  • ಮದುವೆಯ ನೋಂದಣಿಯಲ್ಲಿ

ಯಾರು ದತ್ತು ಪಡೆಯಬಹುದು:

ಧಾರ್ಮಿಕೇತರ ಕಾನೂನಿನಡಿ ದತ್ತು ಸ್ವೀಕಾರ:

ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನಡಿ ನೀವು ಭಾವೀ ದತ್ತು ತಂದೆ/ತಾಯಿ ಎಂದು ಪರಿಗಣಿಸಬೇಕಾದಲ್ಲಿ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:

ಆರೋಗ್ಯ:

  • ೧. ನೀವು ದೈಹಿಕವಾಗಿ ಸ್ವಸ್ಥವಾಗಿರಬೇಕು. ಅಂದರೆ, ನಿಮಗೆ ಯಾವುದೇ ಮಾರಣಾತಿಕ ರೋಗವಿರಬಾರದು
  • ೨. ನೀವು ಆರ್ಥಿಕವಾಗಿ ಸಧೃಢವಾಗಿರಬೇಕು, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸ್ಥಿರವಾಗಿರಬೇಕು, ಮತ್ತು ಮಗುವನ್ನು ದತ್ತು ತೆಗೆದುಕೊಂಡು ಅದಕ್ಕೆ ಒಳ್ಳೆಯ ಪಾಲನೆ-ಪೋಷಣೆ ನೀಡುವಿರಿ ಎಂದು ಪ್ರೇರಿತರಾಗಿರಬೇಕು.

ವೈವಾಹಿಕ ಸ್ಥಿತಿ:

ಅವಿವಾಹಿತ ದತ್ತು ತಂದೆ/ತಾಯಿ: ನಿಮಗೆ ಈಗಾಗಲೇ ಮದುವೆಯಾಗಿದೆಯೋ ಇಲ್ಲವೋ, ಅಥವಾ ಈಗಾಗಲೇ ಮಕ್ಕಳಿದ್ದಾರೋ ಇಲ್ಲವೋ, ಎನ್ನುವುದು ಅಪ್ರಸ್ತುತ. ಅಂದರೆ, ಅವಿವಾಹಿತ/ವಿಚ್ಛೇದಿತ/ಮಕ್ಕಳುಳ್ಳ ವೈವಾಹಿಕ ವ್ಯಕ್ತಿಗಳೂ ಸಹ ದತ್ತು ಸ್ವೀಕಾರ ಪಡೆಯಬಹುದು. ಆದರೆ, ನೀವು ಹೆಣ್ಣು ಮಗುವನ್ನು ದತ್ತು ಪಡೆಯಬೇಕೆಂದಲ್ಲಿ ನೀವು ಮಹಿಳೆಯಾಗಿರಬೇಕು. ಏಕೆಂದರೆ, ಒಬ್ಬ ಅವಿವಾಹಿತ ಮಹಿಳೆ ಗಂಡು ಹಾಗು ಹೆಣ್ಣು ಮಕ್ಕಳನ್ನು ದತ್ತು ಪಡೆಯಬಹುದು, ಆದರೆ ಒಬ್ಬ ಅವಿವಾಹಿತ ಪುರುಷ ಹೆಣ್ಣು ಮಗುವನ್ನು ದತ್ತು ಪಡೆಯುವಂತಿಲ್ಲ.

ವಿವಾಹಿತ ದತ್ತು ತಂದೆ/ತಾಯಿ:

ಮದುವೆಯಾದ ದಂಪತಿಗಳ ಸಂದರ್ಭದಲ್ಲಿ, ಗಂಡ-ಹೆಂಡತಿ ಇಬ್ಬರೂ ದತ್ತು ಸ್ವೀಕೃತಿಗೆ ಒಪ್ಪಿಗೆ ನೀಡಬೇಕು, ಮತ್ತು ಕನಿಷ್ಟ ೨ ವರ್ಷಗಳ ಕಾಲ ಸ್ಥಿರವಾದ ವೈವಾಹಿಕ ಜೀವನ ನಡೆಸಿರಬೇಕು.

ಈಗಾಗಲೇ ಇದ್ದ ಮಕ್ಕಳು:

ಯಾವ ಮದುವೆಯಾದ ದಂಪತಿಗಳಿಗೆ ಈಗಾಗಲೇ ೩ರ ರಿಂದ ಹೆಚ್ಚ ಮಕ್ಕಳಿದ್ದಾರೋ, ಅವರು ದತ್ತು ಸ್ವೀಕಾರ ಮಾಡಲಾರರು. ಈ ನಿಯಮಕ್ಕೆ ಅಪವಾದಗಳು: ವಿಶೇಷ ಚೇತನ ಮಕ್ಕಳು, ಬಹಳಷ್ಟು ಸಮಯದಿಂದ ದತ್ತು ತೆಗೆದುಕೊಳ್ಳಲು ಕಾಯುತ್ತಿರುವ ಮಕ್ಕಳು, ನೆಂಟರಿಂದ ದತ್ತು ಸ್ವೀಕಾರ, ಮತ್ತು ಮಲ ತಂದೆ/ತಾಯಿಯಿಂದ ದತ್ತು ಸ್ವೀಕಾರ.

ವಯಸ್ಸು:

ಮಗು ಮತ್ತು ಭಾವೀ ದತ್ತು ತಂದೆ/ತಾಯಿಯ ಮಧ್ಯೆ ಕನಿಷ್ಠ ೨೫ ವರ್ಷಗಳ ಅಂತರವಿರಬೇಕು. ಭಾವೀ ದತ್ತು ತಂದೆ ಮತ್ತು ತಾಯಿಯರ ಸೇರಿಸಲಾದ ವಯಸ್ಸನ್ನು ಅವರು ಬೇರೆ-ಬೇರೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು ಅರ್ಹರಿದ್ದಾರೋ ಇಲ್ಲವೋ ಎಂದು ನಿರ್ಧರಿಸಲು ಪರಿಗಣಿಸಲಾಗುತ್ತದೆ. ನೀವು ಬೇರೆ-ಬೇರೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು ಅರ್ಹರಿದ್ದೀರೋ ಇಲ್ಲವೋ ಎಂದು ತಿಳಿದುಕೊಳ್ಳಲು ಕೆಳಗಿನ ಟೇಬಲ್ ನೋಡಿ:

ಮಗುವಿನ ವಯಸ್ಸು ಭಾವೀ ದತ್ತು ತಂದೆತಾಯಿಯರ ಒಟ್ಟು ಸೇರಿಸಿದ ಗರಿಷ್ಟ ವಯಸ್ಸು (ಮದುವೆಯಾದ ದಂಪತಿಗಳು) ಅವಿವಾಹಿತ ಭಾವೀ ದತ್ತು ತಂದೆ/ತಾಯಿಯ ವಯಸ್ಸು
ವರ್ಷಗಳ ವರೆಗೆ ೯೦ ವರ್ಷಗಳು ೪೫ ವರ್ಷಗಳು
೪ರಿಂದ ೮ವರ್ಷಗಳ ವರೆಗೆ ೧೦೦ ವರ್ಷಗಳು ೫೦ ವರ್ಷಗಳು
೮ರಿಂದ ೧೮ವರ್ಷಗಳ ವರೆಗೆ ೧೧೦ ವರ್ಷಗಳು ೫೫ ವರ್ಷಗಳು

ಹಿಂದೂ ಕಾನೂನಿನಡಿ ದತ್ತು ಸ್ವೀಕಾರ:

ಹಿಂದೂ ದತ್ತು ಸ್ವೀಕಾರ ಕಾನೂನಿನ ಪ್ರಕಾರ ನೀವು ಭಾವೀ ದತ್ತು ತಂದೆ/ತಾಯಿ ಎಂದು ಪರಿಗಣಿಸಲು ಕೆಳಗಿನ ಷರತ್ತುಗಳನ್ನು ಪೂರೈಸಬೇಕು:

ನೀವು ಸ್ತ್ರೀ ಅಥವಾ ಪುರುಷ ಹಿಂದೂ ಆಗಿ, ಗಂಡು ಅಥವಾ ಹೆಣ್ಣು ಮಗುವನ್ನು ದತ್ತು ಪಡೆಯಬಹುದು. ಒಬ್ಬ ಹಿಂದೂ ಪುರುಷ ಹೆಣ್ಣು ಮಗುವನ್ನು ದತ್ತು ಪಡೆಯಲು ಆ ಮಗುವಿಗಿಂತ ಕನಿಷ್ಠ ೨೧ ವರ್ಷ ದೊಡ್ಡವನಾಗಿರಬೇಕು. ಹಾಗೆಯೇ, ಒಬ್ಬ ಹಿಂದೂ ಮಹಿಳೆ ಗಂಡು ಮಗುವನ್ನು ದತ್ತು ಪಡೆಯಲು ಆ ಮಗುವಿಗಿಂತ ಕನಿಷ್ಟ ೨೧ ವರ್ಷ ದೊಡ್ಡವಳಾಗಿರಬೇಕು. ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯಿದೆಯಡಿಯಲ್ಲಿ ನೀವು ದತ್ತು ಪಡೆಯಬೇಕೆಂದಲ್ಲಿ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:

ವಯಸ್ಸು:

ನೀವು ವಯಸ್ಕರಾಗಿದ್ದು (ವಯಸ್ಸು ೧೮ರ ಮೇಲೆ ಇರಬೇಕು), ಮಾನಸಿಕವಾಗಿ ಸ್ವಸ್ಥವಾಗಿರಬೇಕು.

ವೈವಾಹಿಕ ಸ್ಥಿತಿ:

ವಿವಾಹಿತ ದತ್ತು ತಂದೆ/ತಾಯಿ: ನೀವು ಮದುವೆಯಾಗಿದ್ದಲ್ಲಿ, ದತ್ತು ಪಡೆಯಲು ನಿಮ್ಮ ಜೀವಂತ ಗಂಡ/ಹೆಂಡತಿಯ ಒಪ್ಪಿಗೆ ಇರಬೇಕು. ಆದರೆ, ನಿಮ್ಮ ಸಂಗಾತಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ, ಲೋಕವನ್ನು ತ್ಯಜಿಸಿದ್ದರೆ, ಅಥವಾ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದರೆ, ಈ ಒಪ್ಪಿಗೆಯ ಅವಶ್ಯಕತೆ ಇಲ್ಲ. ನಿಮಗೆ ಒಬ್ಬ ಹೆಂಡತಿ ಇದ್ದಲ್ಲಿ ಅವಳು ದತ್ತು ಮಗುವಿನ ತಾಯಿಯೆಂದು, ಹಾಗು ನಿಮಗೆ ಒಬ್ಬರಿಗಿಂತ ಹೆಚ್ಚು ಹೆಂಡತಿಯರು ಇದ್ದರೆ, ಎಲ್ಲರಿಗಿಂತ ಹಿರಿಯ ಹೆಂಡತಿಯು ದತ್ತು ಮಗುವಿನ ತಾಯಿ, ಮತ್ತು ಇನ್ನಿತರ ಹೆಂಡಂದಿರು ಮಲ-ತಾಯಿಯರು ಎಂದು ಪರಿಗಣಿಸಲಾಗುತ್ತದೆ.

ಅವಿವಾಹಿತ ದತ್ತು ತಂದೆ/ತಾಯಿ: ನೀವು ಅವಿವಾಹಿತ ಅಥವಾ ವಿಧವೆ/ವಿಧುರರಾಗಿದ್ದರೆ, ನೀವು ಮಗುವನ್ನು ದತ್ತು ಪಡೆಯಬಹುದು. ಕಾಲಾಂತರದಲ್ಲಿ ನೀವು ಮದುವೆಯಾಗುವ ಗಂಡ/ಹೆಂಡತಿಯು ನಿಮ್ಮ ಮಗುವಿನ ದತ್ತು ತಂದೆ/ತಾಯಿ ಎಂದು ಪರಿಗಣಿಸಲಾಗುತ್ತಾರೆ.

ಈಗಾಗಲೇ ಇರುವ ಮಕ್ಕಳು:

ನೀವು ಹೆಣ್ಣು ಮಗುವನ್ನು ದತ್ತು ಪಡೆಯಬೇಕೆಂದಲ್ಲಿ ನಿಮಗೆ ಈಗಾಗಲೇ ಜೀವಂತವಿರುವ (ಜೈವಿಕ ಅಥವಾ ದತ್ತು ಪಡೆದಿರುವ) ಹಿಂದೂ ಹೆಣ್ಣು ಮಗಳು / ಮೊಮ್ಮಗಳು ಇರಬಾರದು. ಹಾಗು ನೀವು ಗಂಡು ಮಗುವನ್ನು ದತ್ತು ಪಡೆಯಬೇಕೆಂದಲ್ಲಿ, ನಿಮಗೆ ಈಗಾಗಲೇ ಜೀವಂತವಿರುವ (ಜೈವಿಕ ಅಥವಾ ದತ್ತು ಪಡೆದಿರುವ) ಹಿಂದೂ ಗಂಡು ಮಗ / ಮೊಮ್ಮಗ ಇರಬಾರದು.

ಮುಸ್ಲಿಂ ಮದುವೆಯಲ್ಲಿ ಹೆಂಡತಿಗೆ ವಿಚ್ಛೇದನ ಬೇಕಾದಾಗ

ಹೆಂಡತಿಯು ಈ ಕೆಳಗಿನ ರೀತಿಗಳಲ್ಲಿ ವಿಚ್ಛೇದನವನ್ನು ಪಡೆದುಕೊಳ್ಳಬಹುದು:

ಖುಲಾ:

“ಖುಲಾ” ಹೆಂಡತಿ ವಿಚ್ಛೇದನ ತೆಗೆದುಕೊಳ್ಳುವ ಒಂದು ವಿಧಾನವಾಗಿದೆ. ನಿಮಗೆ ವಿಚ್ಛೇದನ ಬೇಕಾದಲ್ಲಿ ನೀವು ನ್ಯಾಯಾಲಯಕ್ಕೆ ಹೋಗಬಹುದು ಅಥವಾ ಮುಫ್ತಿಯರ ಬಳಿ ಹೋಗಬಹುದು. ನ್ಯಾಯಾಲಯ ಅಥವಾ ಮುಫ್ತಿಯರು ಗಂಡನಿಗೆ ಹಾಜರಿರಲು ಆದೇಶಿಸುತ್ತಾರೆ. ಗಂಡನ ಹಾಜರಿಯಲ್ಲಿ ಅವನಿಗೆ ಈ ವಿಚ್ಛೇದನ ಒಪ್ಪಿಗೆ ಇದೆಯೇ ಎಂದು ಕೇಳುತ್ತಾರೆ. ಒಪ್ಪಿಗೆಯಾದ ತಕ್ಷಣ ವಿಚ್ಛೇದನ ಪೂರ್ಣಗೊಳ್ಳುತ್ತದೆ.

ತಲಾಕ್-ಎ-ತಫ್ವೀದ್:

ನಿಮ್ಮ ಗಂಡನು ವಿವಾಹ ಒಪ್ಪಂದದ (ಕಾಬಿನಾಮ) ಮೇರೆಗೆ ವಿಚ್ಛೇದನದ ಹಕ್ಕನ್ನು ನಿಮಗೆ ನಿಯೋಗಿಸಿದ್ದಲ್ಲಿ, ನೀವು ಅವರನ್ನು ವಿಚ್ಛೇದಿಸಬಹುದು.

ಮದುವೆಯ ಸಮಯದಲ್ಲಿ, ವಿಚ್ಛೇದನಾ ಹಕ್ಕನ್ನು ನಿಮಗೆ ಅಥವಾ ಇನ್ನೋರ್ವ ವ್ಯಕ್ತಿಗೆ, ಮದುವೆಯ ಒಪ್ಪಂದದ (ಕಾಬಿನಾಮ) ಮೂಲಕ, ನಿಯೋಗಿಸುವ ಹಕ್ಕು ನಿಮ್ಮ ಗಂಡನಿಗಿದೆ. ಈ ವಿವಾಹದ ಒಪ್ಪಂದವು ಈ ಹಕ್ಕಿನ ವರ್ಗಾವಣೆಯ ಸಂಬಂಧಪಟ್ಟ ಎಲ್ಲ ವಿಷಯಗಳ ವಿವರವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ, ಈ ವಿಚ್ಛೇದನಾ ಹಕ್ಕನ್ನು ನೀವು ಬಳಸಬೇಕಾದಲ್ಲಿ, ನಿಮಗೆ ಸಿಗಲಿರುವ/ಸಿಕ್ಕಿರುವ ಮೆಹೆರ್ ಹಣದ ಎಷ್ಟು ಪಾಲು ನೀವು ಬಿಟ್ಟುಕೊಡಬೇಕು ಎಂಬುದನ್ನು ಈ ಒಪ್ಪಂದದಲ್ಲಿ ಕ್ರೋಡೀಕರಿಸಲಾಗಿರುತ್ತದೆ.

 

ಜೀವನಾಂಶದ ಮೊತ್ತ

ತಂದೆ-ತಾಯಿಗೆ ಕೊಡಬೇಕಾದ ಜೀವನಾಂಶದ ಮೊತ್ತ ಎಲ್ಲರಿಗೂ ಸಮನಾಗಿರುವಂತೆ ಕಾನೂನು ನಿಗದಿಪಡಿಸಿಲ್ಲ. ಆಯಾ ಪ್ರಕರಣಗಳ ಸಂದರ್ಭಾನುಸಾರ ಈ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಈ ಕೆಳಗಿನ ಅಂಶಗಳ ಮೇಲೆ ನ್ಯಾಯಾಲಯವು ಜೀವನಾಂಶದ ಮೊತ್ತವನ್ನು ನಿಗದಿಪಡಿಸುತ್ತದೆ:

  • ಮಕ್ಕಳ/ಉತ್ತರಾಧಿಕಾರಿಯ ಅಂತಸ್ತು ಅಥವಾ ಜೀವನದ ಗುಣಮಟ್ಟ
  • ನಿಮ್ಮ ಅವಶ್ಯಕತೆಗಳು (ಸಮಂಜಸವಾಗಿ ಲೆಕ್ಕ ಹಾಕಲಾಗುತ್ತದೆ)
  • ನೀವು ನಿಮ್ಮ ಮಕ್ಕಳು/ಉತ್ತರಾಧಿಕಾರಿಯಿಂದ ಬೇರೆಯಾಗಿ ವಾಸಿಸುತ್ತಿದ್ದೀರೋ ಹೇಗೆ
  • ಮಕ್ಕಳ/ಉತ್ತರಾಧಿಕಾರಿಗಳ ಆದಾಯ, ಸಂಪತ್ತು, ಮತ್ತು ಆಸ್ತಿಯ ಮೌಲ್ಯ
  • ನಿಮ್ಮ ಆದಾಯ, ಸಂಪತ್ತು, ಮತ್ತು ಆಸ್ತಿಯ ಮೌಲ್ಯ
  • ಜೀವನಾಂಶ ಪಡೆಯಬೇಕಾದ ಒಟ್ಟು ವ್ಯಕ್ತಿಗಳು

 

ಬಾಲ್ಯ ವಿವಾಹವನ್ನು ನೆರವೇರಿಸುವುದು

ಬಾಲ್ಯ ವಿವಾಹವನ್ನು ನೆರವೇರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.

ವಿವಾಹವನ್ನು ನೆರವೇರಿಸುವುದು: ಯಾರಾದರೂ ಬಾಲ್ಯ ವಿವಾಹವನ್ನು ನೆರವೇರಿಸಿದಲ್ಲಿ, ಅಥವಾ ನೆರವೇರಿಸುವುದಕ್ಕೆ ಸಹಾಯ ಮಾಡಿದಲ್ಲಿ, ಅವರುಗಳು ಅಪರಾಧಿಗಳಾಗುತ್ತಾರೆ.

ಪಾಲಕರು/ಪೋಷಕರು ಬಾಲ್ಯ ವಿವಾಹ ನೆರವೇರಿಸಿದಾಗ: ಯಾವ ತಂದೆ-ತಾಯಿ/ಪಾಲಕರು/ಪೋಷಕರು/ಮಗುವಿನ ರಕ್ಷಣೆಯ ಜವಾಬ್ದಾರರು ಬಾಲ್ಯ ವಿವಾಹದಲ್ಲಿ ಭಾಗವಹಿಸುವುದಾಗಲಿ, ಅಥವಾ ಬಾಲ್ಯ ವಿವಾಹದ ಪ್ರಚಾರದಲ್ಲಾಗಲಿ ತೊಡಗುತ್ತಾರೋ, ಅವರು ಅಪರಾಧಿಗಳಾಗುತ್ತಾರೆ. ಬಾಲ್ಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಹಾಗು ಭಾಗವಹಿಸುವುದೂ ಕೂಡ ಅಪರಾಧ.

ಯಾರಾದರೂ ಈ ಅಪರಾಧಗಳಿಗೆ ಹೊಣೆ ಎಂದು ಸಾಬೀತಾದಲ್ಲಿ ಅವರಿಗೆ ೨ ವರ್ಷಗಳ ಕಠಿಣ ಸೆರೆವಾಸದ ಜೊತೆಗೆ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುತ್ತದೆ.

ಈ ಕಾನೂನಿನಡಿಯ ಎಲ್ಲ ಅಪರಾಧಗಳು ಸಂಜ್ನ್ಯೆಯ (cognisable) ಹಾಗು ಜಾಮೀನು-ರಹಿತ (non-bailable) ವಾಗಿವೆ. ಅಂದರೆ, ಪೊಲೀಸರು ನಿಮ್ಮನ್ನು ವಾರೆಂಟ್ ಇಲ್ಲದೆ ಬಂಧಿಸಬಹುದು, ಮತ್ತು ಬಂಧನದ ನಂತರ ಜಾಮೀನು ಸಿಗುವುದು ನಿಮ್ಮ ಹಕ್ಕಾಗಿರುವುದಿಲ್ಲ.

ಪತಿ ಯಾ ಪತ್ನಿಗೆ ಮಾತ್ರ ಹಿಂದೂ ವೈವಾಹಿಕ ಕಾನೂನಿನಡಿ ವಿಚ್ಛೇದನ ಬೇಕಾದಾಗ

ಹಲವು ಸಂದರ್ಭಗಳಲ್ಲಿ, ಕೇವಲ ಪತಿ ಯಾ ಪತ್ನಿಗೆ ಮಾತ್ರ ವಿಚ್ಛೇದನ ಬೇಕು ಎಂದು ಎನಿಸುವುದುಂಟು. ಕಾನೂನಿನಡಿ, ಕೇವಲ ಕೆಲವು ಸಂದರ್ಭಗಳಲ್ಲಿ ಮಾತ್ರ ಇಂತಹ ಏಕಪಕ್ಷೀಯ ವಿಚ್ಛೇದನ ಲಭಿಸುತ್ತದೆ. ಉದಾಹರಣೆಗೆ, ವಿವಾಹದಲ್ಲಿ ದೌರ್ಜನ್ಯ/ಕ್ರೌರ್ಯ ಇದ್ದಾಗ, ಅಥವಾ ನಿಮ್ಮ ಸಂಗಾತಿಗೆ ಮಾನಸಿಕ ರೋಗವಿದ್ದಾಗ. ಇಂತಹ ಸಂದರ್ಭಗಳಲ್ಲಿ, ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ, ನಿಮ್ಮ ಸಂಗಾತಿ ಈ ಆರೋಪಗಳನ್ನು ನಿರಾಕರಿಸಿ, ಅವರಿಗೆ ಯಾಕೆ ಈ ವಿಚ್ಛೇದನಕ್ಕೆ ಒಪ್ಪಿಗೆ ಇಲ್ಲ ಎಂದು ಕೋರ್ಟಿಗೆ ಹೇಳಬಹುದಾಗಿದೆ.

ಕಾನೂನಿನಡಿಯಲ್ಲಿ, ಮದುವೆಯಾಗಿ ಒಂದು ವರ್ಷವಾದ ನಂತರ ಮಾತ್ರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಒಂದು ವರ್ಷದ ಸಮಯ:

ನಿಮಗೆ ವಿಚ್ಛೇದನದ ಅರ್ಜಿ ಸಲ್ಲಿಸುವುದಿದ್ದಲ್ಲಿ, ನಿಮ್ಮ ಮದುವೆಯಾದ ದಿನಾಂಕದಿಂದ ಹಿಡಿದು ಒಂದು ವರ್ಷದ ವರೆಗೆ ನೀವು ಕಾಯಬೇಕಾಗುತ್ತದೆ. ಉದಾಹರಣೆಗೆ, ಜಿತೇಂದ್ರ ಹಾಗು ವಹೀದಾ ಜನೆವರಿ ೯, ೨೦೧೮ರಂದು ಮದುವೆಯಾದರು. ಜಿತೇಂದ್ರ ಕಡೆ ಪಕ್ಷ ಜನೆವರಿ ೯, ೨೦೧೯ರ ವರೆಗೆ ವಿಚ್ಛೇದನದ ಅರ್ಜಿ ಸಲ್ಲಿಸಲು ಕಾಯಬೇಕಾಗುತ್ತದೆ.

ಒಂದು ವರ್ಷದ ನಿಯಮಕ್ಕೆ ಅಪವಾದಗಳು:

ಕಾನೂನಿನಡಿಯಲ್ಲಿ ಮದುವೆಯ ನಂತರ ಒಂದು ವರ್ಷದ ಬಳಿಕ ಮಾತ್ರವೇ ವಿಚ್ಛೇದನ ಸಿಗುವುದಾದರೂ, ಈ ನಿಯಮಕ್ಕೆ ಕೆಲವು ಅಪವಾದಗಳಿವೆ. ಉದಾಹರಣೆಗೆ:

  • ಅಸಾಧಾರಣ ಕಷ್ಟ ಅನುಭವಿಸುತ್ತಿದ್ದಲ್ಲಿ: ಉದಾಹರಣೆಗೆ, ನಿಮ್ಮ ಪತಿ ಯಾ ಪತ್ನಿ ದಿನವೂ ನಿಮಗೆ ಶಾರೀರಿಕವಾಗಿ ಕಿರುಕುಳ ಕೊಡುತ್ತಿದ್ದಲ್ಲಿ, ನೀವು ಕೋರ್ಟಿನ ಮೊರೆ ಹೋಗಬಹುದಾಗಿದೆ.
  • ಅಸಾಧಾರಣ ನೈತಿಕ ಭ್ರಷ್ಟತೆ: ಉದಾಹರಣೆಗೆ, ನಿಮ್ಮ ಪತಿ ಯಾ ಪತ್ನಿ ಅವಮಾನಕರ ಲೈಂಗಿಕ ಕ್ರಿಯೆಗಳನ್ನು ಮಾಡುವುದಾಗಿ ನಿಮ್ಮನ್ನು ಪೀಡಿಸುತ್ತಿದ್ದಲ್ಲಿ , ನೀವು ಕೋರ್ಟಿನ ಮೊರೆ ಹೋಗಬಹುದಾಗಿದೆ.

ಕ್ರಿಶ್ಚಿಯನ್ ಕಾನೂನಿನ ಪ್ರಕಾರ ಮದುವೆಯಾಗುವ ಬೇರೆ-ಬೇರೆ ಕಾರ್ಯವಿಧಾನಗಳಾವುವು?

ವಿವಾಹ ಕಾರ್ಯವಿಧಾನವು ಯಾರು ಸಮಾರಂಭವನ್ನು ನೆರವೇರಿಸುತ್ತಿದ್ದಾರೆ ಎಂಬುದರ ಮೇಲೆ ನಿರ್ಭರಿಸುತ್ತದೆ. ಮದುವೆಯು ಯಾವುದೇ ಒಂದು ಪಂಗಡದ ಚರ್ಚಿನ ನಿಯಮಗಳನುಸಾರ ನಡೆಯುತ್ತಿದ್ದರೆ, ಕಾನೂನು ವಿವಾಹ ಕಾರ್ಯವಿಧಾನಗಳ ವಿವರಗಳನ್ನು ನೀಡುವುದಿಲ್ಲ. ಆದರೆ, ಕ್ರಿಶ್ಚಿಯನ್ ವಿವಾಹ ಕಾನೂನಿನಡಿ ನೇಮಕಗೊಂಡ ವಿವಾಹ ಕುಲಸಚಿವರು, ಅಥವಾ ಇನ್ನಿತರ ಪ್ರಮಾಣೀಕೃತ ಧರ್ಮ ಸಚಿವರು ಮದುವೆಯನ್ನು ನೆರವೇರಿಸುತ್ತಿದ್ದಲ್ಲಿ, ಆ ಕಾಯಿದೆಯಡಿಯ ಕಾರ್ಯವಿಧಾನವನ್ನು ಪಾಲಿಸಬೇಕಾಗುತ್ತದೆ.