ಹೊರವಲಯದ ಚೆಕ್ಕುಗಳನ್ನು ತುರ್ತಾಗಿ ಚುಕ್ತಗೊಳಿಸುವ ಪ್ರಕ್ರಿಯೆ

ಅದೇ ನಗರ ಅಥವಾ ಹೊರಗಿನ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರುವ ವ್ಯಕ್ತಿಗೆ ಚೆಕ್ಕುಗಳನ್ನು ನೀಡಬಹುದು. ಚೆಕ್ ಅನ್ನು ಅದೇ ನಗರದ ಹೊರಗಿನ ವ್ಯಕ್ತಿಗೆ ನೀಡಿದಾಗ ಅದು ಹೊರವಲಯದ ಚೆಕ್ ಆಗುತ್ತದೆ.

ಸ್ಪೀಡ್ ಕ್ಲಿಯರಿಂಗ್ ಎನ್ನುವುದು ಸ್ಥಳೀಯವಾಗಿ ಅಂತಹ ಚೆಕ್ಕುಗಳನ್ನು ತ್ವರಿತವಾಗಿ ಚುಕ್ತಗೊಳಿಸಲು ಸಾಧ್ಯವಾಗಿಸುವ ಪ್ರಕ್ರಿಯೆಯಾಗಿದೆ. MICR ಮತ್ತು ಕೋರ್ ಬ್ಯಾಂಕಿಂಗ್ ಸಿಸ್ಟಮ್ (CBS) ಸಹಾಯದಿಂದ, ಅಂತಹ ಚೆಕ್ಕುಗಳನ್ನು ಚುಕ್ತಗೊಳಿಸುವ ಸಂಪೂರ್ಣ ಪ್ರಕ್ರಿಯೆಯು ಸುಲಭ ಮತ್ತು ವೇಗವಾಗಿದೆ. ಇದನ್ನು ‘ಗ್ರಿಡ್-ಆಧಾರಿತ ಚೆಕ್ ಟ್ರಂಕೇಶನ್ ಸಿಸ್ಟಮ್’ ಎಂದೂ ಕರೆಯಲಾಗುತ್ತದೆ.

ಸ್ಪೀಡ್ ಕ್ಲಿಯರಿಂಗ್ ಪ್ರಕ್ರಿಯೆಯು ಅಸ್ತಿತ್ವದಲ್ಲಿರುವುದಕ್ಕಿಂತ ಮೊದಲು, ನಿಮ್ಮ ಬ್ಯಾಂಕ್‌ನಲ್ಲಿ ನೀವು ಹೊರವಲಯದ ಚೆಕ್ ಅನ್ನು ನೀಡಿದ್ದರೆ, ಅದು ಮೊದಲು ನಿಮ್ಮ ನಗರದಲ್ಲಿರುವ ಸ್ಥಳೀಯ ಕ್ಲಿಯರಿಂಗ್ ಹೌಸ್‌ಗೆ ಹೋಗುತ್ತಿತ್ತು ಮತ್ತು ನಂತರ ಪಾವತಿಯನ್ನು ಪ್ರಕ್ರಿಯೆಗೊಳಿಸಲು ಚೆಕ್ ಅನ್ನು ಭೌತಿಕವಾಗಿ ಹೊರಗಿನ ಶಾಖೆಗೆ ಕಳುಹಿಸಲಾಗುತ್ತಿತ್ತು. ಈಗ, ಸ್ಪೀಡ್ ಕ್ಲಿಯರಿಂಗ್‌ನೊಂದಿಗೆ, ಚೆಕ್ ಅನ್ನು ಕ್ಲಿಯರೆನ್ಸ್‌ ಗಾಗಿ ಡ್ರಾಯಿ ಬ್ಯಾಂಕಿನ ಸ್ಥಳೀಯ ಶಾಖೆಗೆ ಕಳುಹಿಸಲಾಗುತ್ತದೆ.

ಆದ್ದರಿಂದ, ಸ್ಪೀಡ್ ಕ್ಲಿಯರಿಂಗ್ ಸಿಸ್ಟಮ್ನೊಂದಿಗೆ ಕ್ಲಿಯರೆನ್ಸ್ ವೇಗವಾಗಿ ಆಗುತ್ತದೆ.

ದೂರು ಸಲ್ಲಿಸಲು ಶುಲ್ಕ

ಗ್ರಾಹಕ ಸಂರಕ್ಷಣಾ ಕಾನೂನಿನಡಿಯಲ್ಲಿ ಸಲ್ಲಿಸಲಾದ ಪ್ರತಿಯೊಂದು ದೂರನ್ನು ರಾಷ್ಟ್ರೀಕೃತ ಬ್ಯಾಂಕ್‌ನ ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಅಥವಾ ಪೋಸ್ಟಲ್ ಆರ್ಡರ್ ಮೂಲಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಅತ್ಯಲ್ಪ ಶುಲ್ಕದೊಂದಿಗೆ ನೀಡಬೇಕು. ಸರಕು ಅಥವಾ ಸೇವೆಗಳ ಮೌಲ್ಯದ ಆಧಾರದ ಮೇಲೆ ಶುಲ್ಕಗಳನ್ನು ಕೆಳಗೆ ನೀಡಲಾಗಿದೆ:

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಪಾವತಿಸಬೇಕಾದ ಶುಲ್ಕ:

ಸರಕು ಅಥವಾ ಸೇವೆಗಳ ಮೌಲ್ಯ ಶುಲ್ಕ
ರು. 5 ಲಕ್ಷಕ್ಕಿಂತಲೂ ಕಡಿಮೆ ಶುಲ್ಕ ಇಲ್ಲ
ರು. 5 ಲಕ್ಷ – ರು. 10 ಲಕ್ಷ ರು.   2000 200 ರು.
10 ಲಕ್ಷ – ರು. 20 ಲಕ್ಷ ರು. 400 ರು.
20 ಲಕ್ಷ – ರು. 50 ಲಕ್ಷ ರು. 1000 ರು.
50 ಲಕ್ಷ – ರು. 1 ಕೋಟಿ ರು. 2000 ರು.

ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಪಾವತಿಸಬೇಕಾದ ಶುಲ್ಕ:

ಸರಕು ಅಥವಾ ಸೇವೆಗಳ ಮೌಲ್ಯ ಶುಲ್ಕ
ರು. 1 ಕೋಟಿ – ರು. 2 ಕೋಟಿ 2500 ರು.
ರು. 2 ಕೋಟಿ – ರು. 4 ಕೋಟಿ 3000 ರು.
ರು. 4 ಕೋಟಿ – ರು. 6 ಕೋಟಿ. 4000 ರು.
ರು. 6 ಕೋಟಿ – ರು. 8 ಕೋಟಿ 5000 ರು.
ರು. 8 ಕೋಟಿ – ರು. 10 ಕೋಟಿ 6000 ರು.

ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಪಾವತಿಸಬೇಕಾದ ಶುಲ್ಕ:

ಸರಕು ಅಥವಾ ಸೇವೆಗಳ ಮೌಲ್ಯ ಶುಲ್ಕ
ರು. 10 ಕೋಟಿಗಿಂತ ಹೆಚ್ಚು ರು. 7,500

ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ, ಹೀಗೆ ಸಂಗ್ರಹಿಸಿದ ಶುಲ್ಕಗಳು ರಾಜ್ಯ ಮಟ್ಟದಲ್ಲಿ ಅಥವಾ ರಾಷ್ಟ್ರಮಟ್ಟದಲ್ಲಿ ಗ್ರಾಹಕ ಕಲ್ಯಾಣ ನಿಧಿಗೆ ಹೋಗುತ್ತದೆ. ಅಂತಹ ನಿಧಿ ಅಸ್ತಿತ್ವದಲ್ಲಿಲ್ಲದಿದ್ದರೆ, ಅದನ್ನು ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಗ್ರಾಹಕ ಕಲ್ಯಾಣ ಯೋಜನೆಗಳ ಮುಂದುವರಿಕೆಗಾಗಿ ಶುಲ್ಕವನ್ನು ಬಳಸಲಾಗುತ್ತದೆ.

ಪ್ರಶ್ನೋತ್ತರಗಳು

ನಾನು ಉಯಿಲು ಮಾಡದೇ ಸತ್ತರೆ ಏನಾಗುತ್ತದೆ?

ನಿಮ್ಮ ಧರ್ಮವನ್ನು ಅವಲಂಬಿಸಿ, ನಿಮ್ಮ ಸಾವಿನ ನಂತರ ನಿಮ್ಮ ಸ್ವತ್ತುಗಳು ಮತ್ತು ಆಸ್ತಿಯನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ವಿಭಿನ್ನ ನಿಯಮಗಳಿವೆ. ಆದಾಗ್ಯೂ, ನೀವು ಉಯಿಲು ಮಾಡಿದರೆ, ನಿಮ್ಮ ಸ್ವತ್ತುಗಳು ಮತ್ತು ಆಸ್ತಿಯನ್ನು ನೀವು ಆಯ್ಕೆ ಮಾಡುವ ಜನರ ನಡುವೆ ಹಂಚಲಾಗುತ್ತದೆ ಮತ್ತು ನಿರ್ದಿಷ್ಟ ಧಾರ್ಮಿಕ ನಿಯಮಗಳು ಸಾಮಾನ್ಯವಾಗಿ ಅನ್ವಯಿಸುವುದಿಲ್ಲ. ಹಿಂದೂ ವ್ಯಕ್ತಿಯಾಗಿ, ಹಿಂದೂ ಉತ್ತರಾಧಿಕಾರ ಕಾಯಿದೆ, 1956 ಎಂದು ಕರೆಯಲ್ಪಡುವ ಕಾನೂನಿನ ಅಡಿಯಲ್ಲಿ ಉತ್ತರಾಧಿಕಾರದ ನಿಯಮಗಳು ಅನ್ವಯಿಸುತ್ತವೆ. ಅದೇ ರೀತಿ ಮುಸ್ಲಿಮರ ಉತ್ತರಾಧಿಕಾರಕ್ಕೆ ಅನ್ವಯವಾಗುವ ನಿಯಮಗಳು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಇರುತ್ತದೆ (ನೀವು ನಾಗರಿಕ ವಿವಾಹಗಳ ಕಾನೂನಿನ ಅಡಿಯಲ್ಲಿ ಮದುವೆಯಾಗಿರದಿದ್ದರೆ). ಮುಸ್ಲಿಂ ವೈಯಕ್ತಿಕ ಕಾನೂನು ಅನ್ವಯವಾದರೆ, ನಿಮ್ಮ ಸಂಪೂರ್ಣ ಆಸ್ತಿಯನ್ನು ನಿಮ್ಮ ಕಾನೂನುಬದ್ಧ ಉತ್ತರಾಧಿಕಾರಿಗಳಲ್ಲದ ವ್ಯಕ್ತಿಗಳಿಗೆ ವಿತರಿಸಲಾಗುವುದಿಲ್ಲ. ನಿಮ್ಮ ಆಸ್ತಿಯ ಮೂರನೇ ಒಂದು ಭಾಗವನ್ನು ಮಾತ್ರ ನೀವು ಬೇರೆಯವರಿಗೆ ಬಿಟ್ಟುಕೊಡಬಹುದು ಮತ್ತು ಉಳಿದ ಮೂರನೇ ಎರಡರಷ್ಟು ಭಾಗವನ್ನು ನಿಮ್ಮ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವಿತರಿಸಬೇಕು.

 

ನಾನು ಯಾರೊಂದಿಗಾದರೂ ಭೂಮಿ ಅಥವಾ ಇತರ ಸ್ಥಿರ ಆಸ್ತಿಯ ಬಗ್ಗೆ ವಿವಾದವನ್ನು ಹೊಂದಿದ್ದರೆ, ನಾನು ಯಾವ ನ್ಯಾಯಾಲಯವನ್ನು ಸಂಪರ್ಕಿಸಬೇಕು?

ಸ್ಥಿರಾಸ್ತಿಯ ಬಗ್ಗೆ ಮೊಕದ್ದಮೆ ಹೂಡಲು ನೀವು ಯಾವ ನ್ಯಾಯಾಲಯವನ್ನು ಸಂಪರ್ಕಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ನಿಮ್ಮ ಆಸ್ತಿಯ ಸ್ಥಳವು ಪ್ರಮುಖ ಪರಿಗಣನೆಗಳಲ್ಲಿ ಒಂದಾಗಿದೆ1. ವಿವಾದಿತ ಆಸ್ತಿ ಇರುವ ಸ್ಥಳದಲ್ಲಿ ನ್ಯಾಯಾಲಯವು ಅಧಿಕಾರವನ್ನು ಹೊಂದಿರಬೇಕು. ಒಂದು ಆಸ್ತಿಯು ಒಂದಕ್ಕಿಂತ ಹೆಚ್ಚು ನ್ಯಾಯಾಲಯಗಳ ನ್ಯಾಯವ್ಯಾಪ್ತಿಯ ಗಡಿಗಳಲ್ಲಿ ನೆಲೆಗೊಂಡಿದ್ದರೆ, ಆ ಯಾವುದೇ ನ್ಯಾಯಾಲಯಗಳಲ್ಲಿ2 ಮೊಕದ್ದಮೆಯನ್ನು ಸಲ್ಲಿಸಬಹುದು. ಅಂತಹ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ವಕೀಲರನ್ನು ಸಂಪರ್ಕಿಸಿ.

ನ್ಯಾಯಾಲಯಗಳನ್ನು ಸಂಪರ್ಕಿಸುವುದರ ಜೊತೆಗೆ, ಲೋಕ್ ಅದಾಲತ್‌ಗಳ ಸಹಾಯದಿಂದ ವಿವಾದಗಳನ್ನು ಇತ್ಯರ್ಥಗೊಳಿಸಬಹುದು. ಇದು ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ, 1987 ರ ಅಡಿಯಲ್ಲಿ ಗುರುತಿಸಲಾದ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನವಾಗಿದೆ.

ಲೋಕ ಅದಾಲತ್‌ಗಳು ನ್ಯಾಯಾಲಯದಲ್ಲಿ ಬಾಕಿ ಇರುವ ವಿವಾದಗಳು/ಪ್ರಕರಣಗಳು ಅಥವಾ ಭೂಮಿ ಮತ್ತು ಆಸ್ತಿ ವಿವಾದಗಳಂತಹ ವ್ಯಾಜ್ಯಪೂರ್ವ ಹಂತದಲ್ಲಿ, ಸೌಹಾರ್ದಯುತವಾಗಿ ಇತ್ಯರ್ಥಗೊಳ್ಳುವ/ ರಾಜಿ ಮಾಡಿಕೊಳ್ಳುವ ವೇದಿಕೆಯಾಗಿದೆ. ಲೋಕ ಅದಾಲತ್‌ನ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿದೆ; ಮೇಲ್ಮನವಿ ಸಲ್ಲಿಸಲು ಯಾವುದೇ ಅವಕಾಶವಿಲ್ಲ. ಆದಾಗ್ಯೂ, ಪಕ್ಷಗಳು ಲೋಕ್ ಅದಾಲತ್ನ ಪ್ರಶಸ್ತಿಯಿಂದ ಅತೃಪ್ತರಾಗಿದ್ದರೆ, ಅವರು ವ್ಯಾಜ್ಯ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.

  1. ಸಿವಿಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 16 ರ ಅಡಿಯಲ್ಲಿ, ಸ್ಥಿರ ಆಸ್ತಿಗೆ ಸಂಬಂಧಿಸಿದ ವಿವಿಧ ವಿವಾದಗಳಿಗೆ,  ಆಸ್ತಿಯು ಯಾವ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ಸ್ಥಳೀಯ ಮಿತಿಗಳಲ್ಲಿ ಇರುತ್ತದೆಯೋ, ಅಂತಃ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬೇಕು []
  2. ಸಿವಿಲ್ ಪ್ರೊಸೀಜರ್ ಕೋಡ್‌ನ ವಿಭಾಗ 17 []

ನಾನು ಮನೆ ಅಥವಾ ಭೂಮಿಯನ್ನು ಮಾರಾಟ ಮಾಡುವಾಗ ನಾನು ಏನು ಪರಿಗಣಿಸಬೇಕು?

ನೀವು ಆಸ್ತಿಯನ್ನು ಮಾರಾಟ ಮಾಡಲು ಯೋಜಿಸುತ್ತಿದ್ದರೆ, ಮಾರಾಟದ ಸಮಯದಲ್ಲಿ ನೀವು ಪರಿಗಣಿಸಬೇಕಾದ ಅತ್ಯಂತ ನಿರ್ಣಾಯಕ ಅಂಶವೆಂದರೆ ವಹಿವಾಟನ್ನು ನೋಂದಾಯಿಸುವ ಪ್ರಕ್ರಿಯೆ.

  • ಮಾರಾಟವನ್ನು ನೋಂದಾಯಿಸುವುದು
    • ವಹಿವಾಟು ಅಥವಾ ಮಾರಾಟವನ್ನು ನೋಂದಾಯಿಸುವುದು ಎರಡೂ ಪಕ್ಷಗಳಿಗೆ ಪ್ರಯೋಜನಕಾರಿಯಾಗಿದೆ ಏಕೆಂದರೆ ಮಾರಾಟಗಾರರಿಂದ ಖರೀದಿದಾರರಿಗೆ ಆಸ್ತಿಯ ವರ್ಗಾವಣೆಯನ್ನು ಸರ್ಕಾರವು ಗುರುತಿಸುತ್ತದೆ ಎಂದರ್ಥ.  ಭಾರತದಲ್ಲಿ, ಎಲ್ಲಾ ವ್ಯಕ್ತಿಗಳು1 ವಹಿವಾಟಿನ ವೆಚ್ಚ ರೂ.100 ಮೀರಿದರೆ, ಸ್ಥಿರ ಆಸ್ತಿಯ ಮಾರಾಟವನ್ನು ನೋಂದಾಯಿಸಿಕೊಳ್ಳಲೇ ಬೇಕು.  ಭೂಮಿ ಅಥವಾ ಮನೆಯ ಬೆಲೆ ಹೆಚ್ಚು ಹೆಚ್ಚಿರುವುದರಿಂದ, ಅಂತಹ ಆಸ್ತಿಯ ಮಾರಾಟವನ್ನು ನೋಂದಾಯಿಸಬೇಕು ಎಂದು ಇದು ಪರಿಣಾಮಕಾರಿಯಾಗಿ ಸೂಚಿಸುತ್ತದೆ.  ಇದಲ್ಲದೆ, ಸ್ಥಿರ ಆಸ್ತಿಯ ಉಡುಗೊರೆಯನ್ನು ಒಳಗೊಂಡಿರುವ ಎಲ್ಲಾ ವಹಿವಾಟುಗಳು, ಹಾಗೆಯೇ 12 ತಿಂಗಳುಗಳಿಗಿಂತ ಹೆಚ್ಚಿನ ಅವಧಿಗೆ ಗುತ್ತಿಗೆಯನ್ನು ಸಹ ನೋಂದಾಯಿಸಬೇಕಾಗುತ್ತದೆ.
  • ಮಾಹಿತಿಯ ಬಹಿರಂಗಪಡಿಸುವಿಕೆ
  • ಮಾರಾಟಗಾರರಾಗಿ, ವಹಿವಾಟನ್ನು ಸಂಪೂರ್ಣ ಪ್ರಾಮಾಣಿಕತೆಯೊಂದಿಗೆ ಮತ್ತು ಖರೀದಿದಾರರೊಂದಿಗೆ ಸಂಪೂರ್ಣ ಒಪ್ಪಂದದಲ್ಲಿ ಕೈಗೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.  ಭವಿಷ್ಯದಲ್ಲಿ ವಹಿವಾಟಿನ ಮೇಲೆ ಉದ್ಭವಿಸುವ ಯಾವುದೇ ಸಂಘರ್ಷ ಅಥವಾ ವಿವಾದ ಇರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇದು ಅವಶ್ಯಕವಾಗಿದೆ.  ನೀವು ಮಾರಾಟ ಮಾಡಲು ಬಯಸುವ ಭೂಮಿ ಅಥವಾ ಮನೆಯಲ್ಲಿ ಖರೀದಿದಾರರು ಆಸಕ್ತಿಯನ್ನು ತೋರಿಸಿದಾಗ, ಮಾರಾಟಗಾರರಾಗಿ ನೀವು ಹೀಗೆ ಮಾಡಬೇಕು:
  • ಆಸ್ತಿಯಲ್ಲಿ ನಿಮಗೆ ತಿಳಿದಿರುವ ಆದರೆ ಖರೀದಿದಾರರಿಗೆ ತಿಳಿದಿಲ್ಲದ ಮತ್ತು ಖರೀದಿದಾರರು ಸಾಮಾನ್ಯವಾಗಿ ಕಂಡುಹಿಡಿಯಲು ಸಾಧ್ಯವಾಗದ   ಯಾವುದೇ ವಸ್ತು ದೋಷವನ್ನು, ನೀವು ಖರೀದಿದಾರರಿಗೆ ಬಹಿರಂಗಪಡಿಸಿ.

ಆಸ್ತಿಗೆ ಸಂಬಂಧಿಸಿದ ಹಕ್ಕು ಪತ್ರ ಮತ್ತು ಆಸ್ತಿಗೆ ಸಂಬಂಧಿಸಿದ ಎಲ್ಲಾ  ದಾಖಲೆಗಳನ್ನು ಪರೀಕ್ಷೆಗಾಗಿ ಖರೀದಿದಾರರಿಗೆ ಲಭ್ಯವಾಗುವಂತೆ ಮಾಡಿ.

  1. ನೋಂದಣಿ ಕಾಯಿದೆ, 1908. []

ಅನಧಿಕೃತ ವ್ಯವಹಾರಗಳ ಕುರಿತು ಬ್ಯಾಂಕಿಗೆ ಮಾಹಿತಿ ನೀಡುವಲ್ಲಿ ಗ್ರಾಹಕರ ಹೊಣೆಗಾರಿಕೆ

ತಮ್ಮ ಖಾತೆಯಲ್ಲಿ ಯಾವುದೇ ಅನಧಿಕೃತ ವ್ಯವಹಾರ ಕುರಿತು ತಕ್ಷಣವೇ ಅಥವಾ ಸಾಧ್ಯವಾದಷ್ಟು ಬೇಗ ಬ್ಯಾಂಕಿಗೆ ಮಾಹಿತಿ ನೀಡುವಂತೆ ಗ್ರಾಹಕರಿಗೆ ಸಲಹೆ ನೀಡತಕ್ಕದ್ದು. ಈ ರೀತಿ ಮಾಹಿತಿ ನೀಡಲು ತಡಮಾಡಿದಷ್ಟು ಬ್ಯಾಂಕ್/ಗ್ರಾಹಕರಿಗೆ ನಷ್ಟವಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಎಸ್ ಎಂ ಎಸ್ ಕಳುಹಿಸಿದ ಸಮಯ ಮತ್ತು ಗ್ರಾಹಕರಿಂದ ಪ್ರತ್ಯುತ್ತರ/ಎಸ್ ಎಂಎಸ್ ಬಂದ ಸಮಯವನ್ನು ಬ್ಯಾಂಕ್ ದಾಖಲು ಮಾಡಿಕೊಂಡಿರುತ್ತದೆ. ಗ್ರಾಹಕರ ಹೊಣೆಗಾರಿಕೆಯನ್ನು ನಿರ್ಧರಿಸುವ ಸಲುವಾಗಿ ಹೀಗೆ ಮಾಡಲಾಗುತ್ತದೆ.

ಮಾನ್ಯ ಚೆಕ್ಕುಗಳು

ಡ್ರಾಯರ್ ಖಾತೆಯಿಂದ ಹಣವನ್ನು ಸ್ವೀಕರಿಸಲು ಬ್ಯಾಂಕಿಗೆ ಪ್ರಸ್ತುತಪಡಿಸುವಂತದ್ದು ಮಾನ್ಯ ಚೆಕ್ ಆಗಿರುತ್ಥದೆ . ಚೆಕ್‌ನ ಅವಧಿಯು ಅದನ್ನು ನೀಡಿದ ದಿನಾಂಕವನ್ನು ಅವಲಂಬಿಸಿರುತ್ತದೆ. ವಿತರಿಸುವ ಸಮಯದಲ್ಲಿ ಚೆಕ್‌ನಲ್ಲಿ ದಿನಾಂಕವನ್ನು ಒಮ್ಮೆ ಬರೆದರೆ, ಅದು ಆ ದಿನಾಂಕದಿಂದ 3 ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಉದಾಹರಣೆಗೆ, 1ನೇ ಜನವರಿ, 2019 ರಂದು ಚೆಕ್ ಅನ್ನು ನೀಡಿದ್ದರೆ, ಅದು 1ನೇ ಏಪ್ರಿಲ್ 2019 ರವರೆಗೆ ಮಾತ್ರ

ಮಾನ್ಯವಾಗಿರುತ್ತದೆ. ಮಾನ್ಯ ಚೆಕ್ಕುಗಳಲ್ಲಿ ಎರಡು ವಿಶಾಲ ವರ್ಗಗಳಿವೆ:

ಗ್ರಾಹಕರ ಹಕ್ಕುಗಳ ಉಲ್ಲಂಘನೆಗಾಗಿ ಶಿಕ್ಷೆಗಳು

ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಬ್ಬ ವ್ಯಕ್ತಿ ಅಥವಾ ಘಟಕಕ್ಕೆ ದಂಡ ವಿಧಿಸುವ ಅಧಿಕಾರವನ್ನು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಹೊಂದಿದೆ. ದಂಡಗಳು, ದೋಷಪೂರಿತ ಸರಕುಗಳನ್ನು ಹಿಂಪಡೆಯುವುದು, ಅಂತಹ ಸರಕುಗಳು / ಸೇವೆಗಳಿಗೆ ಮರುಪಾವತಿಗಳು ಅಥವಾ ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ಸ್ಥಗಿತಗೊಳಿಸುವುದು ಮುಂತಾದ ವಿವಿಧ ವಿಧಾನಗಳ ಮೂಲಕ ಇದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಶಿಕ್ಷೆ

ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ತಯಾರಕರು, ಜಾಹೀರಾತುದಾರರು ಅಥವಾ ಅನುಮೋದಕರು ಹೊಣೆಗಾರರಾಗಿರುತ್ತಾರೆ. ಆದಾಗ್ಯೂ, ಅಂತಹ ಜಾಹೀರಾತನ್ನು ಅನುಮೋದಿಸುವ ಮೊದಲು ಅವರು ತಮ್ಮ ಸಂಶೋಧನೆಯನ್ನು ಮಾಡದಿದ್ದಾಗ ಮಾತ್ರ ಈ ಸಂದರ್ಭಗಳಲ್ಲಿ ಅವರ ಹೊಣೆಗಾರಿಕೆಯು ಉದ್ಭವಿಸುತ್ತದೆ. ಶಿಕ್ಷೆಯೇನೆಂದರೆ:

  • ಮೊದಲ ಅಪರಾಧಕ್ಕೆ: ರೂ. 10 ಲಕ್ಷ ವರೆಗೆ ವಿಸ್ತರಿಸಬಹುದಾದ ದಂಡ ಮತ್ತು 2 ವರ್ಷಗಳವರೆಗೆ ಜೈಲು ಶಿಕ್ಷೆ.
  • ಪ್ರತಿ ಪುನರಾವರ್ತಿತ ಅಪರಾಧಕ್ಕೆ: ರೂ. 50 ಲಕ್ಷ ವರೆಗೆ ವಿಸ್ತರಿಸಬಹುದಾದ ದಂಡ ಮತ್ತು 5 ವರ್ಷಗಳವರೆಗೆ ಜೈಲು ಶಿಕ್ಷೆ.
  • ಕೇಂದ್ರ ಪ್ರಾಧಿಕಾರವು 1 ವರ್ಷದವರೆಗೆ ಯಾವುದೇ ಉತ್ಪನ್ನವನ್ನು ಅನುಮೋದಿಸದಂತೆ ನಿಷೇಧಿಸಬಹುದು.
  • ನಂತರದ ಅಪರಾಧಗಳ ಸಂದರ್ಭದಲ್ಲಿ, ಅದನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು. ಕೇಂದ್ರ ಪ್ರಾಧಿಕಾರದ ಈ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದರೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ರೂ. 20 ಲಕ್ಷ ದಂಡ.

ಕಲಬೆರಕೆ ಉತ್ಪನ್ನಗಳ ಮಾರಾಟಕ್ಕೆ ಶಿಕ್ಷೆ

ಕಲಬೆರಕೆ ಆಹಾರದ ಮಾರಾಟ, ಆಮದು, ಸಂಗ್ರಹಣೆ ಅಥವಾ ವಿತರಣೆಯನ್ನು ಒಳಗೊಂಡಿರುವ ತಯಾರಕರು ಅಥವಾ ಚಿಲ್ಲರೆ ವ್ಯಾಪಾರಿಗಳ ಯಾವುದೇ ಕ್ರಮವು ಶಿಕ್ಷಾರ್ಹವಾಗಿರುತ್ತದೆ. ಕೆಳಗಿನ ಶಿಕ್ಷೆಗಳು ಅನ್ವಯಿಸುತ್ತವೆ:

  • ಗ್ರಾಹಕರಿಗೆ ಯಾವುದೇ ರೀತಿಯ ನೋವು ಅಥವಾ ಸಾವು ಸಂಭವಿಸದಿದ್ದಾಗ, 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷ ವರೆಗೆ ದಂಡ ವಿಧಿಸಬಹುದು. ಗಾಯವು ಗ್ರಾಹಕರಿಗೆ ಗಂಭೀರವಾದ ನೋವನ್ನು ಉಂಟುಮಾಡದಿದ್ದಲ್ಲಿ, 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ರೂ. 3 ಲಕ್ಷ ವರೆಗಿನ ದಂಡ ವಿಧಿಸಬಹುದು.
  • ಗ್ರಾಹಕರಿಗೆ ಘೋರ ನೋವು ಉಂಟಾದಾಗ, 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 5 ಲಕ್ಷ ವರೆಗೆ ದಂಡ ವಿಧಿಸಬಹುದು. ಕಲಬೆರಕೆಯು ಗ್ರಾಹಕರ ಸಾವಿಗೆ ಕಾರಣವಾದಾಗ, 7 ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆ ಮತ್ತು ಜೀವಿತಾವಧಿಯವರೆಗೆ ವಿಸ್ತರಿಸುವುದು ಮತ್ತು ರೂ. 10 ಲಕ್ಷ ದಂಡ ವಿಧಿಸಲಗಬಹುದು.
  • ಹೆಚ್ಚುವರಿಯಾಗಿ, ಗ್ರಾಹಕ ಪ್ರಾಧಿಕಾರವು, ಅದು ಮೊದಲ ಅಪರಾಧವಾದಾಗ ತಯಾರಕರ ಪರವಾನಗಿಯನ್ನು 2 ವರ್ಷಗಳವರೆಗೆ ಅಮಾನತುಗೊಳಿಸಬಹುದು. ಅಪರಾಧ ಪುನರಾವರ್ತನೆಯಾದರೆ ಅಂತಹ ತಯಾರಕರ ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬಹುದು.

ನಕಲಿ ಸರಕುಗಳ ಮಾರಾಟಕ್ಕೆ ಶಿಕ್ಷೆ

ನಕಲಿ ಸರಕುಗಳೆಂದರೆ ಅಸಲಿ ಎಂದು ತಪ್ಪಾಗಿ ಹೇಳಿಕೊಳ್ಳುವುದು ಅಥವಾ ನೈಜ, ಮೂಲ ಸರಕುಗಳ ಅನುಕರಣೆ. ಇವುಗಳು ಸಾಮಾನ್ಯವಾಗಿ ಕೆಳಮಟ್ಟದ ಗುಣಮಟ್ಟವನ್ನು ಹೊಂದಿರುತ್ತವೆ ಮತ್ತು ಮೂಲ ಸರಕುಗಳ ಕಾನೂನಾತ್ಮಕ ಮಾಲೀಕರ ಟ್ರೇಡ್‌ಮಾರ್ಕ್‌ಗಳು ಮತ್ತು ಹಕ್ಕುಸ್ವಾಮ್ಯಗಳನ್ನು ಉಲ್ಲಂಘಿಸುತ್ತವೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಕಂಡುಬರುವ ಔಷಧಿಗಳು ಅಥವಾ ಅಗ್ಗದ ಮೇಕಪ್ ಉತ್ಪನ್ನಗಳು ಒಂದು ಬಹುಮುಖ್ಯವಾದ ಉದಾಹರಣೆ. ಈ ಸರಕುಗಳ ಮಾರಾಟ, ಆಮದು, ಸಂಗ್ರಹಣೆ ಅಥವಾ ವಿತರಣೆಯನ್ನು ಒಳಗೊಂಡಿರುವ ತಯಾರಕರ ಯಾವುದೇ ಕ್ರಮವು ಈ ಕೆಳಗಿನಂತೆ ಶಿಕ್ಷಾರ್ಹವಾಗಿದೆ:

ಇಂತಹ ನಕಲಿ ಸರಕುಗಳು ಗ್ರಾಹಕರಿಗೆ ಗಂಭೀರವಾದ ಗಾಯವನ್ನು ಉಂಟುಮಾಡದಿದ್ದರೆ, ತಯಾರಕರಿಗೆ 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ರೂ. 3 ಲಕ್ಷ ದಂಡ. ಇಂತಹ ನಕಲಿ ಸರಕುಗಳು ಗ್ರಾಹಕರಿಗೆ ಗಂಭೀರವಾದ ನೋವನ್ನು ಉಂಟುಮಾಡಿದಾಗ, ತಯಾರಕರಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 5 ಲಕ್ಷ ದಂಡ. ಖರೀದಿಸಿದ ವಸ್ತುವು ಗ್ರಾಹಕರ ಸಾವಿಗೆ ಕಾರಣವಾದಾಗ, ತಯಾರಕರಿಗೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಜೀವಿತಾವಧಿಯವರೆಗೆ ವಿಸ್ತರಿಸಬಹುದು ಮತ್ತು ಕನಿಷ್ಠ ರೂ. 10 ಲಕ್ಷ ದಂಡ

ಭೋಗ್ಯದ ಒಪ್ಪಂದ

ಸಾಮಾನ್ಯವಾಗಿ “ಬಾಡಿಗೆ ಒಪ್ಪಂದ” ಎಂದೂ ಕರೆಯಲ್ಪಡುವ ಭೋಗ್ಯದ ಒಪ್ಪಂದವು ದೆಹಲಿ, ಬೆಂಗಳೂರು ಇತ್ಯಾದಿ ನಗರಗಳಲ್ಲಿ ಜಾರಿಯಲ್ಲಿರುವ ವ್ಯವಸ್ಥೆ.

ಬಾಡಿಗೆ ಒಪ್ಪಂದದ ಅಡಿಯಲ್ಲಿ ದೊರೆಯುವ ಹಕ್ಕುಗಳು

ಕಟ್ಟಡವೊಂದನ್ನು ಭೋಗ್ಯ ಒಪ್ಪಂದದ ಅಡಿಯಲ್ಲಿ ನೀವು ಬಾಡಿಗೆಗೆ ಪಡೆದಿದ್ದಲ್ಲಿ ನಿಮಗೆ ಕಾನೂನು ಕೆಲವು ಹಕ್ಕುಗಳನ್ನು ದಯಪಾಲಿಸುತ್ತದೆ. ಈ ಹಕ್ಕುಗಳು ಅನುಮತಿ/ಪರವಾನಗಿ ಒಪ್ಪಂದದ ಅಡಿ ಲಭ್ಯವಾಗುವುದಿಲ್ಲ. ಅಂತಹ ಹಕ್ಕುಗಳೆಂದರೆ:

ಸ್ವತ್ತಿನಲ್ಲಿ ಹಿತಾಸಕ್ತಿ

ನೀವು ಸ್ಚತ್ತಿಗೆ ಬಾಡಿಗೆಯನ್ನು ನೀಡುತ್ತಿರುವುದರಿಂದ ಅದರ ಸ್ವಾಮ್ಯವನ್ನು ಹೊಂದಿರುವ ಹಕ್ಕನ್ನು ಹೊಂದಿರುತ್ತೀರಿ.

ಸ್ವತ್ತಿನ ಅನುಭವದ ಹಕ್ಕು

ನಿಮಗೆ ಬಾಡಿಗೆ ನೀಡುತ್ತಿರುವ ಸ್ವತ್ತಿನ ಸ್ವಾಧೀನ ಪಡೆಯುವ ಹಕ್ಕನ್ನು ಹೊಂದಿರುತ್ತೀರಿ. ಎಂದರೆ, ಮಾಲೀಕ ನಿಮಗೆ ಮನೆ ಅಥವಾ ಮತ್ತಾವುದೇ ಸ್ಥಳವನ್ನು ಬಾಡಿಗೆಗೆ ನೀಡಿದ್ದಲ್ಲಿ, ಆತ ಆ ಸ್ಥಳವನ್ನು ತನ್ನ ಉಪಯೋಗಕ್ಕಾಗಿ ಬಳಸುವಂತಿಲ್ಲ. ಬಾಡಿಗೆ ಅವಧಿ ಕೊನೆಯಾಗುವವರೆಗೂ ಅದು ನಿಮ್ಮ ಉಪಯೋಗಕ್ಕೆ ಮೀಸಲಾಗಿರುವ ಸ್ವತ್ತಾಗಿರುತ್ತದೆ.

ತೆರವುಗೊಳಿಸುವುದರಿಂದ ರಕ್ಷಣೆ

ನ್ಯಾಯಬದ್ಧವಾದ ಸಕಾರಣಗಳನ್ನು ನೀಡದೆಯೇ ಮಾಲೀಕರು ನಿಮ್ಮ ಭೋಗ್ಯವನ್ನಾಗಲೀ ಭೋಗ್ಯದ ಅವಧಿಯನ್ನಾಗಲೀ ಕಡಿತಗೊಳಿಸುವಂತಿಲ್ಲ. ತೆರವುಗೊಳಿಸುವುದರ ವಿರುದ್ಧ ನಿಮಗೆ ಕೆಲವು ರಕ್ಷಣೆಗಳು ಲಭ್ಯ ಇರುತ್ತವೆ.

ನಿಮ್ಮ ಬಾಡಿಗೆ ಒಪ್ಪಂದದಲ್ಲಿ ಈ ಕೆಳಕಂಡ ಅಂಶಗಳು ಒಳಗೊಂಡಿವೆಯೇ ಎಂದು ಖಾತ್ರಿ ಪಡಿಸಿಕೊಳ್ಳಲು ಚೆಕ್ ಲಿಸ್ಟ್ ಗಮನಿಸಿ.

ಯಾರು ಆಸ್ತಿಯನ್ನು ಮಾರಾಟ ಮಾಡಬಹುದು?

ಕಾನೂನಿನ ಅಡಿಯಲ್ಲಿ, ಒಪ್ಪಂದಕ್ಕೆ ಮುಂದಾಗಲು ಸಮರ್ಥರಾಗಿರುವ ಯಾವುದೇ ವ್ಯಕ್ತಿಯು, 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು ಸ್ವಸ್ಥ ಮನಸ್ಸಿನವರು, ಸ್ಥಿರ ಆಸ್ತಿಯನ್ನು ಮಾರಾಟ ಮಾಡಬಹುದು.((ಆಸ್ತಿ ವರ್ಗಾವಣೆ ಕಾಯಿದೆ, 1882 ರ ವಿಭಾಗ 7.)) ಭಾರತದಲ್ಲಿ (NRI)ಅನಿವಾಸಿ ಭಾರತೀಯರು ಮತ್ತು (IPO)ಭಾರತೀಯ ಮೂಲದ ವ್ಯಕ್ತಿಗಳಿಂದ ಆಸ್ತಿ ಮಾರಾಟಕ್ಕೆ ನಿರ್ದಿಷ್ಟ ನಿಯಮಗಳಿವೆ. ಆದಾಗ್ಯೂ, ಆಸ್ತಿಯ ಮಾರಾಟವು ಕಾನೂನುಬದ್ಧವಾಗಿರಲು, ವಿವಿಧ ಅಂಶಗಳು ಪರಿಗಣನೆಗೆ ಬರುತ್ತವೆ, ಅವುಗಳೆಂದರೆ:

  • ನೀವು ಮಾರಾಟ ಮಾಡುವ ಹಕ್ಕನ್ನು ಹೊಂದಿದ್ದೀರಾ, ಅಂದರೆ, ನೀವು ಮಾಲೀಕರೆ ಎಂದು ನೋಡುವುದು.
  • ಆಸ್ತಿಯನ್ನು ಮಾರಾಟ ಮಾಡಲು ನಿಮಗೆ ಅಧಿಕಾರವಿದೆಯೇ. ಉದಾಹರಣೆಗೆ, ನೀವು ಪವರ್ ಆಫ್ ಅಟಾರ್ನಿ  ಹೊಂದಿದ್ದೀರಾ ಅಥವಾ ಮಾರಾಟ ಮಾಡಲು ಮಾಲೀಕರಿಂದ ಅಧಿಕಾರ ಪಡೆದಿದ್ದೀರಾ ಎಂದು ನೋಡುವುದು.