ಮಲ ಹೊರುವವರು ಅಂದರೆ ಯಾರು?

ಅನೈರ್ಮಲ್ಯವಾದ ಶೌಚಾಲಯಗಳಿಂದ, ತೆರೆದ ಚರಂಡಿಯಿಂದ, ತಗ್ಗಿನಿಂದ, ಅಥವಾ ರೈಲು ಹಳಿಗಳಿಂದ ಕೊಳೆಯದ ಮಾನವ ತ್ಯಾಜ್ಯವನ್ನು ತೆಗೆಯಲು ಉದ್ಯೋಗಕ್ಕಿಟ್ಟುಕೊಂಡ ವ್ಯಕ್ತಿಗಳನ್ನು ಮಲ ಹೊರುವವರು ಎನ್ನುತ್ತಾರೆ. ಇಂತಹ ವ್ಯಕ್ತಿಗಳು ಯಾರಿಂದಾದರೂ ಕೆಲಸಕ್ಕಿಟ್ಟುಕೊಂಡಿರಬಹುದು – ಅವರ ಹಳ್ಳಿಯ ಯಾವುದೇ ವ್ಯಕ್ತಿ, ಸಂಸ್ಥೆ, ಅಥವಾ ಗುತ್ತಿಗೆದಾರ. ಅವರು ಶಾಶ್ವತವಾದ ನಿಯಮಿತ ಉದ್ಯೋಗದಲ್ಲಿದ್ದಾರೋ, ಅಥವಾ ತಾತ್ಕಾಲಿಕ ಒಪ್ಪಂದದ ಮೇರೆಗೆ ಇಂತಹ ಕೆಲಸ ಮಾಡುತ್ತಿದ್ದಾರೋ ಎಂಬುದು ಮುಖ್ಯವಲ್ಲ.

ಸೂಕ್ತವಾದ ರಕ್ಷಣಾ ಕವಚದ ಜೊತೆಗೆ ಯಾವುದೇ ವ್ಯಕ್ತಿಯನ್ನು ಮಾನವ ತ್ಯಾಜ್ಯವನ್ನು ಸ್ವಚ್ಛಮಾಡಲು ಕೆಲಸಕ್ಕಿಟ್ಟುಕೊಂಡಿದ್ದಲ್ಲಿ ಅವರಿಗೆ “ಮಲ ಹೊರುವವರು” ಎಂದು ಪರಿಗಣಿಸಲಾಗುವುದಿಲ್ಲ.

ಸಫಾಯಿ ಕರ್ಮಚಾರಿಗಳು:

“ಸಫಾಯಿ ಕರ್ಮಚಾರಿಗಳು” (ಸ್ವಚ್ಛತಾ ಕಾರ್ಮಿಕರು) ಎಂಬ ಪ್ರತ್ಯೇಕ ಗುಂಪಿನ ಕಾರ್ಮಿಕರಿಗೆ ಕೆಲವು ಬಾರಿ “ಮಲ ಹೊರುವವರು” ಎಂದು ಕರೆಯುವುದುಂಟು. ಆದರೆ ಈ ಗುಂಪಿಗೆ ಸೇರಿದವರು ಪುರಸಭೆಗಳಲ್ಲಿ, ಸರ್ಕಾರದಲ್ಲಿ, ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಸ ಗುಡಿಸುವವರು/ ಸ್ವಚ್ಛತಾ ಕಾರ್ಮಿಕರಾಗಿರುತ್ತಾರೆ.

೧೪ರಿಂದ ೧೮ ವರ್ಷಗಳೊಳಗಿನ ಕಿಶೋರರನ್ನು ಕೆಲಸಕ್ಕಿಟ್ಟುಕೊಳ್ಳುವುದು

ದುಡ್ಡಿಗೋಸ್ಕರ ರಸ್ತೆ ಬದಿಗಳಲ್ಲಿ ಮಕ್ಕಳು ಪ್ರದರ್ಶನ ನೀಡುವುದು ಬಾಲ ಕಾರ್ಮಿಕ ಪದ್ಧತಿ ಎಂದು ಪರಿಗಣಿಸಲಾಗುತ್ತದೆ. ಇಂತಹ ನಿದರ್ಶನಗಳನ್ನು ನೀವು ನೋಡಿದಲ್ಲಿ ದಯವಿಟ್ಟು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ.

ಅಪಾಯಕಾರಿ ಅಲ್ಲದ ಕೆಲಸದ ಸ್ಥಳಗಳಲ್ಲಿ ಕಿಶೋರರು ಕೆಲಸ ಮಾಡಬಹುದು. ಇಂತಹ ಅಪಾಯಕಾರಿ ಅಲ್ಲದ ಕೆಲಸದ ಸ್ಥಳಗಳನ್ನು ಸರ್ಕಾರ ಸೂಚಿಸುತ್ತದೆ. ಕಿಶೋರರು ಕೆಳಗಿನ ಕೆಲಸಗಳಲ್ಲಿ ಕೂಡ ತೊಡಗಬಹುದು:

  • ಕೌಟುಂಬಿಕ ಉದ್ಯೋಗ: ಉದಾಹರಣೆಗೆ, ಆಭಾರಣಗಳನ್ನು ಮಾರಾಟ ಮಾಡುವ ನಿಮ್ಮ ಕೌಟುಂಬಿಕ ಉದ್ಯೋಗದಲ್ಲಿ ತೊಡಗುವುದು
  • ಬಾಲ ಕಲಾವಿದರು: ಉದಾಹರಣೆಗೆ, ಚಲನಚಿತ್ರಗಳಲ್ಲಿ ಅಥವಾ ಜಾಹಿರಾತುಗಳಲ್ಲಿ ನಟಿಸುವುದು

೧೪ರಿಂದ ೧೮ರ ನಡುವಿನ ಕಿಶೋರರು ಕೆಳಗಿನ ಉದ್ಯೋಗಗಳಲ್ಲಿ ತೊಡಗುವಂತಿಲ್ಲ:

  • ಗಣಿಗಳು ಅಥವಾ ದಹಿಸಬಲ್ಲ ವಸ್ತುಗಳು/ಸ್ಫೋಟಕಗಳನ್ನು ಉಪಯೋಗಿಸುವ ಸ್ಥಳಗಳು
  • ಕಾರ್ಖಾನೆಗಳ ಕಾಯಿದೆ, ೧೯೪೮ರ ಅಡಿಯಲ್ಲಿ ನೀಡಲಾದ ಅಪಾಯಕಾರಿ ಪ್ರಕ್ರಿಯೆಗಳನ್ನು ಉಪಯೋಗಿಸುವ ಕೈಗಾರಿಕೋದ್ಯಮಗಳು. ಉದಾಹರಣೆಗೆ, ಕಲ್ಲಿದ್ದಲು, ವಿದ್ಯುತ್ಶಕ್ತಿಯ ಉತ್ಪಾದನೆ, ಕಾಗದ, ರಾಸಾಯನಿಕ ಗೊಬ್ಬರ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು, ಕಲ್ನಾರಿನ, ಇತ್ಯಾದಿ.

ಅನೈರ್ಮಲ್ಯವಾದ ಶೌಚಾಲಯ ಕಟ್ಟುವುದು ಅಕ್ರಮವೇ?

ಕೊಳೆಯುವ ಮುನ್ನವೇ ಮಾನವ ತ್ಯಾಜ್ಯವನ್ನು ವ್ಯಕ್ತಿಗಳು ಕೈಯ್ಯಾರೆ ತೆಗೆಯುವಂತಹ ಅನೈರ್ಮಲ್ಯವಾದ ಶೌಚಾಲಯವನ್ನು ಯಾವುದೇ ವ್ಯಕ್ತಿ, ಪುರಸಭೆ, ಪಂಚಾಯತಿ, ಅಥವಾ ಸಂಸ್ಥೆ ಕಟ್ಟಿಸುವುದು ಅಕ್ರಮವಾಗಿದೆ.

ಸ್ಥಳೀಯ ಅಧಿಕಾರಿಗಳು ತಮ್ಮ ಕ್ಷೇತ್ರದಲ್ಲಿನ ಅನೈರ್ಮಲ್ಯವಾದ ಶೌಚಾಲಯಗಳ ಸಮೀಕ್ಷೆ ನಡೆಸಿ ಗುರುತಿಸಲಾದ ಎಲ್ಲ ಶೌಚಾಲಯಗಳ ಪಟ್ಟಿಯನ್ನು ಪ್ರಕಟಿಸಬೇಕು. ಶುಚಿಯಾದ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸುವುದು ಮತ್ತು ಅವುಗಳ ಕಾರ್ಯ ನಿರ್ವಹಣೆ, ಮತ್ತು ನೈರ್ಮಲ್ಯವನ್ನು ಕಾಪಾಡುವುದು ಸ್ಥಳೀಯ ಅಧಿಕಾರಿಗಳ ಕರ್ತವ್ಯವಾಗಿದೆ.

ಯಾರಾದರೂ ಮೊದಲ ಬಾರಿ ಅನೈರ್ಮಲ್ಯವಾದ ಶೌಚಾಲಯವನ್ನು ಕಟ್ಟಿಸಿದ್ದಲ್ಲಿ, ಅಥವಾ ಇಂತಹ ಶೌಚಾಲಯವನ್ನು ಕಟ್ಟಿಸಲು ಬೇರೆಯವರನ್ನು ತೊಡಗಿಸಿಕೊಂಡಿದ್ದಲ್ಲಿ/ ಉದ್ಯೋಗಕ್ಕಿಟ್ಟುಕೊಂಡಿದ್ದಲ್ಲಿ, ಅವರಿಗೆ ಗರಿಷ್ಟ ಒಂದು ವರ್ಷದ ಸೆರೆಮನೆ ವಾಸ ಮತ್ತು ೫೦೦೦೦ ರೂಪಾಯಿಗಳ ವರೆಗೆ ಜುಲ್ಮಾನೆಯ ದಂಡ ವಿಧಿಸಲಾಗುವುದು. ಎರಡನೆಯ ಬಾರಿ ಈ ತಪ್ಪು ಮಾಡಿದ್ದಲ್ಲಿ ಅವರಿಗೆ ಶಿಕ್ಷೆ- ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಮತ್ತು ೧ ಲಕ್ಷ ರೂಪಾಯಿಗಳ ವರೆಗಿನ ದಂಡ.

೧೪ರ ಒಳಗಿನ ಮಕ್ಕಳನ್ನು ಕೆಲಸಕ್ಕಿಟ್ಟುಕೊಳ್ಳುವುದು

೧೪ರ ಕೆಳಗಿನ ಮಕ್ಕಳನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ಕೆಲಸಕ್ಕಿಟ್ಟುಕೊಳ್ಳುವುದು, ಅಥವಾ ಅವರಿಗೆ ಕೆಲಸ ಮಾಡಲು ಅನುಮತಿ ಕೊಡುವುದು ಕಾನೂನು ಬಾಹಿರವಾಗಿದೆ. ಉದ್ಯೋಗದಾತರು, ತಂದೆ-ತಾಯಿಯರು, ಅಥವಾ ಮಗುವಿನ ಪೋಷಕರು ಮಗುವನ್ನು ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗುವ ಅನುಮತಿ ನೀಡಿದಲ್ಲಿ ಅವರಿಗೆ ದಂಡ ವಿಧಿಸಲಾಗುತ್ತದೆ.

ಆದಾಗ್ಯೂ, ಈ ನಿಯಮಕ್ಕೆ ಎರಡು ಅಪವಾದಗಳಿವೆ. ಮಕ್ಕಳು ಕೆಳಗಿನ ಉದ್ಯೋಗಗಳಲ್ಲಿ ತೊಡಗಲು ಸರ್ಕಾರ ಅನುಮತಿ ನೀಡಿದೆ:

  • ಬಾಲ ಕಲಾವಿದರಾಗಿ
  • ಕೌಟುಂಬಿಕ ಉದ್ಯೋಗದಲ್ಲಿ

೧೪ರ ಕೆಳಗಿನ ಮಕ್ಕಳು ಇನ್ನ್ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗಿದ ನಿದರ್ಶನ ನಿಮಗೆ ಗೊತ್ತಿದ್ದಲ್ಲಿ, ಕೂಡಲೇ ಅದರ ಬಗ್ಗೆ ದೂರು ನೀಡಿ.

ಅನೈರ್ಮಲ್ಯವಾದ ಶೌಚಾಲಯವನ್ನು ಪರಿವರ್ತಿಸುವುದು ಅಥವಾ ಕೆಡುವುದರ ಜವಾಬ್ದಾರಿ ಯಾರದ್ದು?

ಅನೈರ್ಮಲ್ಯವಾದ ಶೌಚಾಲಯವಿರುವ ಜಾಗದಲ್ಲಿ ವಾಸ ಮಾಡುತ್ತಿರುವ ವ್ಯಕ್ತಿಗಳ ಜವಾಬ್ದಾರಿ ಅದನ್ನು ಪರಿವರ್ತಿಸುವುದು ಅಥವಾ ನೆಲಸಮ ಮಾಡುವುದು. ಅನೈರ್ಮಲ್ಯವಾದ ಶೌಚಾಲಯವಿರುವ ಜಾಗ/ಸ್ವತ್ತಿನ ಮಾಲೀಕರು ಒಬ್ಬರಿಗಿಂತ ಹೆಚ್ಚುಇದ್ದಲ್ಲಿ, ಅದನ್ನು ಪರಿವರ್ತಿಸುವುದು ಅಥವಾ ನೆಲಸಮಮಾಡುವ ಖರ್ಚನ್ನು ಎಲ್ಲ ಮಾಲೀಕರು ಸಮನಾಗಿ ಹಂಚಿಕೊಳ್ಳಬೇಕಾಗುತ್ತದೆ.

ರಾಜ್ಯ ಸರ್ಕಾರವು ಪರಿವರ್ತನೆಯ ಪ್ರಕ್ರಿಯೆಯಲ್ಲಿ ಶೌಚಾಲಯವಿರುವ ಜಾಗದಲ್ಲಿ ವಾಸ ಮಾಡುತ್ತಿರುವವರ ಸಹಾಯ ಮಾಡಬಹುದು. ಆದರೆ ಸರ್ಕಾರ ಸಹಾಯ ಮಾಡುತ್ತಿಲ್ಲ ಎಂಬ ಕಾರಣವನ್ನು ನೆಪಮಾಡಿಕೊಂಡು ಇಂತಹ ಶೌಚಾಲಯಗಳನ್ನು ೯ ತಿಂಗಳಿಗಿಂತ ಹೆಚ್ಚಿನವರೆಗೆ ಉಪಯೋಗಿಸಲು ಕಾನೂನಿನಡಿ ಅನುಮತಿ ಇಲ್ಲ. ಒಂದು ವೇಳೆ ೯ ತಿಂಗಳುಗಳ ಒಳಗೆ ಇಂತಹ ಅನೈರ್ಮಲ್ಯವಾದ ಶೌಚಾಲಯವನ್ನು ಅಲ್ಲಿ ವಾಸಿಸುವರು ಪರಿವರ್ತಿಸದಿದ್ದರೆ/ನೆಲಸಮ ಮಾಡದಿದ್ದರೆ, ೨೧ ದಿನಗಳ ಸೂಚನೆಯನ್ನು ಕೊಟ್ಟು ಸ್ಥಳೀಯ ಅಧಿಕಾರಿಗಳು ಈ ಕಾರ್ಯವನ್ನು ತಮ್ಮ ಕಯ್ಯಾರೆ ಮಾಡಬೇಕಾಗುತ್ತದೆ. ಹೀಗೆ ಮಾಡಿದ ನಂತರ ಬಂಡ ಖರ್ಚನ್ನು ಅಲ್ಲಿ ವಾಸಿಸುವರಿಂದ ವಸೂಲಿ ಮಾಡಬಹುದು.

ಮೊದಲ ಬಾರಿ ಕಾನೂನನ್ನು ಉಲ್ಲಂಘಿಸಿದವರಿಗೆ ಗರಿಷ್ಟ ಒಂದು ವರ್ಷದ ಸೆರೆಮನೆ ವಾಸ ಮತ್ತು ಗರಿಷ್ಟ ೫೦೦೦೦ ರೂಪಾಯಿಗಳಷ್ಟು ಜುಲ್ಮಾನೆಯ ದಂಡ ವಿಧಿಸಲಾಗುತ್ತದೆ. ಎರಡನೆಯ ಬಾರಿ ತಪ್ಪು ಮಾಡಿದವರಿಗೆ ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಮತ್ತು ಗರಿಷ್ಟ ೧೦೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುತ್ತದೆ.

ಮಗುವಿನ ವಯಸ್ಸು ನಿರ್ಧರಿಸುವುದು

ನೀವು ಉದ್ಯೋಗದಾತರಾಗಿದ್ದು, ಮಗುವಿನ ವಯಸ್ಸು ೧೪ರ ಮೇಲಿದೆಯೋ ಅಥವಾ ಕೆಳಗಿದೆಯೋ ಎಂಬುದು ನಿಮಗೆ ಖಾತರಿ ಇಲ್ಲದಿದ್ದರೆ, ಕೆಳಗಿನ ೩ ದಾಖಲೆಗಳ ಆಧಾರದ ಮೇಲೆ ವೈದ್ಯಕೀಯ ಅಧಿಕಾರಿಗಳು ಮಗುವಿನ ವಯಸ್ಸನ್ನು ನಿಗದಿ ಪಡಿಸುತ್ತಾರೆ:

  • ಮಗು/ಕಿಶೋರನ ಆಧಾರ್ ಕಾರ್ಡ್
  • ಶಾಲೆಯಿಂದ ಪಡೆದ ಜನ್ಮ ಪ್ರಮಾಣಪತ್ರ ಅಥವಾ ಪರೀಕ್ಷಾ ಮಂಡಳಿಯಿಂದ ಪಡೆದ ಪ್ರಮಾಣಪತ್ರ
  • ಪಂಚಾಯತಿ, ಪುರಸಭೆ, ಅಥವಾ ನಗರ ಪಾಲಿಕೆ ನೀಡಿದ ಮಗುವಿನ ಜನ್ಮ ಪ್ರಮಾಣಪತ್ರ

ಈ ಮೂರು ದಾಖಲೆಗಳು ಇಲ್ಲದಿದ್ದಲ್ಲಿ, ವೈದ್ಯಕೀಯ ಅಧಿಕಾರಿಗಳು ಅಸ್ಥೀಭವನ ಪರೀಕ್ಷೆ ಅಥವಾ ಇನ್ಯಾವುದಾದರೂ ಇತ್ತೀಚಿನ ವಯಸ್ಸು ನಿರ್ಣಯಿಸುವ ಪರೀಕ್ಷೆಯನ್ನು ಮಾಡಿ ಮಗುವಿನ ವಯಸ್ಸನ್ನು ಕಂಡು ಹಿಡಿಯುತ್ತಾರೆ.

ತನಿಖಾಧಿಕಾರಿಗಳಿಗೆ ಮಗುವಿನ ವಯಸ್ಸನ್ನು ನಿರ್ಣಯ ಮಾಡುವುದಿದ್ದಲ್ಲಿ, ನಿಮ್ಮ ಹತ್ತಿರ. ಉದ್ಯೋಗದಾತರಾಗಿ, ಮಗುವಿನ ವಯಸ್ಸಿನ ಪ್ರಮಾಣಪತ್ರ ಇರಬೇಕಾಗುತ್ತದೆ. ನೀವು ಮಗುವಿನ ವಯಸ್ಸಿನ ಪ್ರಮಾಣಪತ್ರ ಪಡೆದಿಲ್ಲ ಎಂದು ತನಿಖಾಧಿಕಾರಿಗಳಿಗೆ ತಿಳಿದು ಬಂದಲ್ಲಿ, ಕೂಡಲೇ ವೈದ್ಯಕೀಯ ಅಧಿಕಾರಿಗಳಿಂದ ಪಡೆಯಲು ನಿಮಗೆ ಸೂಚಿಸಲಾಗುತ್ತದೆ.

ಮಲ ಹೊರುವವರನ್ನು ಕೆಲಸಕ್ಕಿಟ್ಟುಕೊಳ್ಳುವುದು ಕಾನೂನಾತ್ಮಕವಾಗಿ ಮಾನ್ಯವೇ?

ಇಲ್ಲ. ಭಾರತದಲ್ಲಿ ವ್ಯಕ್ತಿಗಳನ್ನು ಮಲ ಹೊರುವವರನ್ನಾಗಿ ಕೆಲಸಕ್ಕಿಟ್ಟುಕೊಳ್ಳುವುದು ಅಕ್ರಮವಾಗಿದೆ. ಹಾಗು, ಯಾರಾದರೂ (ಪುರ ಸಭೆಗಳು ಮತ್ತು ಪಂಚಾಯತಿಗಳನ್ನು ಸೇರಿಸಿ) ಅಗತ್ಯವಾದ ರಕ್ಷಣಾತ್ಮಕ ಕವಚಗಳಿಲ್ಲದೆ ವ್ಯಕ್ತಿಗಳನ್ನು ಒಳಚರಂಡಿಗಳನ್ನು ಅಥವಾ ಸೆಪ್ಟಿಕ್ ಟ್ಯಾಂಕ್ ಗಳನ್ನೂ ಸ್ವಚ್ಛಗೊಳಿಸಲು ಕೆಲಸಕ್ಕಿಟ್ಟುಕೊಂಡರೆ, ಅದು ಕೂಡ ಕಾನೂನು ಬಾಹಿರವಾಗಿದೆ.

ಯಾರಾದರೂ ಹೀಗೆ ಮಾಡಿದರೆ ಕೆಳಗಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ:

ಜನರನ್ನು ಮಲ ಹೊರುವವರನ್ನಾಗಿ ಕೆಲಸಕ್ಕಿಟ್ಟುಕೊಳ್ಳುವುದು:

ಯಾರಾದರೂ ಮೊದಲ ಬಾರಿ ಜನರನ್ನು ಮಲ ಹೊರುವವರನ್ನಾಗಿ ಕೆಲಸಕ್ಕಿಟ್ಟುಕೊಂಡಲ್ಲಿ, ಅವರಿಗೆ ಗರಿಷ್ಟ ಒಂದು ವರ್ಷದ ಸೆರೆಮನೆ ವಾಸ ಮತ್ತು ಗರಿಷ್ಟ ೫೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುತ್ತದೆ. ಇನ್ನು, ಎರಡನೇ ಬಾರಿ ಇದೆ ತಪ್ಪನ್ನು ಮಾಡಿದ್ದಲ್ಲಿ, ಅವರಿಗೆ ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಮತ್ತು ಗರಿಷ್ಟ ೧೦೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುವುದು.

ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕನ್ನು ಅಪಾಯಕಾರಿಯಾಗಿ ಸ್ವಚ್ಛಮಾಡುವುದಕ್ಕಾಗಿ ಜನರನ್ನು ಕೆಲಸಕ್ಕಿಟ್ಟುಕೊಳ್ಳುವುದು:

ಯಾರಾದರೂ ಮೊದಲ ಬಾರಿ ಜನರನ್ನು ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕನ್ನು ಅಪಾಯಕಾರಿಯಾಗಿ ಸ್ವಚ್ಛಮಾಡುವುದಕ್ಕಾಗಿ ಕೆಲಸಕ್ಕಿಟ್ಟುಕೊಂಡಿದ್ದಲ್ಲಿ, ಅವರಿಗೆ ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಮತ್ತು ಗರಿಷ್ಟ ೨೦೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುತ್ತದೆ. ಇದೆ ಅಪರಾಧವನ್ನು ಎರಡನೆಯ ಬಾರಿ ಮಾಡಿದ್ದಲ್ಲಿ, ಗರಿಷ್ಟ ೫ ವರ್ಷದ ಸೆರೆಮನೆ ವಾಸ ಮತ್ತು ಗರಿಷ್ಟ ೫೦೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸಲಾಗುತ್ತದೆ.

ಒಂದು ಕಂಪನಿ/ಸಂಸ್ಥೆ ಜನರನ್ನು ಮಲ ಹೊರುವವರನ್ನಾಗಿ ಕೆಲಸಕ್ಕಿಟ್ಟುಕೊಳ್ಳುವುದು:

ಒಂದು ಕಂಪನಿ/ಸಂಸ್ಥೆ ಮಲ ಹೊರುವವರನ್ನು ಕೆಲಸಕ್ಕಿಟ್ಟುಕೊಂಡಂತ ತಪ್ಪು ಮಾಡಿದ್ದಲ್ಲಿ, ಅದನ್ನು ಮತ್ತು ಅದರ ಎಲ್ಲ ಉದ್ಯೋಗಿಗಳನ್ನು ತಪ್ಪಿತಸ್ಥರಾಗಿ ಘೋಷಿಸಲಾಗುತ್ತದೆ. ಇಂತಹ ಉದ್ಯೋಗಿಗಳು – ನಿರ್ದೇಶಕರು, ವ್ಯವಸ್ಥಾಪಕರು, ಕಾರ್ಯದರ್ಶಿಗಳು, ಅಥವಾ ಕಂಪನಿ/ಸಂಸ್ಥೆಯ ಇನ್ನಿತರ ಅಧಿಕಾರಿಗಳಾಗಿರಬಹುದು.

ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಜಾಲತಾಣಕ್ಕೆ ಭೇಟಿ ನೀಡಿ.

ಬಾಲ ಕಲಾವಿದರ ಪ್ರತಿ ಉದ್ಯೋಗದಾತರ ಕರ್ತವ್ಯಗಳು

ನೀವು ಬಾಲ ಕಲಾವಿದರಿಗೆ ಉದ್ಯೋಗ ನೀಡಿದ್ದಲ್ಲಿ, ಬಾಲ ಕಾರ್ಮಿಕ ಪದ್ಧತಿ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, ೧೯೮೬ರ ಅಡಿಯಲ್ಲಿನ ಫಾರಂ ಸೀ ಅನ್ನು ತುಂಬಿ ಅಧಿಕಾರಿಗಳಿಗೆ ನೀಡುವ ಕರ್ತವ್ಯ ನಿಮ್ಮದಾಗಿದೆ. ಈ ರೀತಿ ಫಾರಂ ಸೀ ಅನ್ನು ತುಂಬಿ ಕೆಳಗಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಾಗಿ ಉದ್ಯೋಗದಾತರು ಒಪ್ಪುತ್ತಾರೆ:

  • ಮಗುವಿನ ಶಿಕ್ಷಣಕ್ಕೆ ಧಕ್ಕೆ ಬರುವಂತಿಲ್ಲ
  • ಬಾಲ ಕಲಾವಿದರ ಕಾಳಜಿ ಹಾಗು ರಕ್ಷಣೆಯ ಹೊಣೆ, ಮತ್ತು ಅವರ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ
  • ಬಾಲ ಕಾರ್ಮಿಕ ಪದ್ಧತಿ ಕಾನೂನನ್ನು ಉಲ್ಲಂಘಿಸುವಂತಿಲ್ಲ
  • ಮಗುವಿನ ಮೇಲೆ ಯಾವ ರೀತಿಯ ಲೈಂಗಿಕ ಶೋಷಣೆಯಾಗದಂತೆ ಉದ್ಯೋಗದಾತರು ನೋಡಿಕೊಳ್ಳಬೇಕು

ಅನುಮತಿಗೆ ಅರ್ಜಿ ಯಾವ ಜಿಲ್ಲೆಯಲ್ಲಿ ಉದ್ಯೋಗ ನಡೆಯಲಿದೆಯೋ, ಆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಗುವಿನ ಉದ್ಯೋಗದ ಒಪ್ಪಿಗೆಯ ಪರವಾನಗಿ ನಿಮಗೆ ಕೊಡಬೇಕು. ಮಗುವಿನ ತಂದೆ-ತಾಯಿಯರು ಅಥವಾ ಪೋಷಕರು ಕೂಡ ಮಗುವಿನ ಉದ್ಯೋಗದ ಒಪ್ಪಿಗೆ ನಿಮಗೆ ನೀಡಬೇಕು. ಈ ಪರವಾನಗಿಯಲ್ಲಿ ಕೆಳಗಿನ ಶರತ್ತುಗಳಿರುತ್ತವೆ:

  • ಮಗುವಿನ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಸೌಲಭ್ಯಗಳು
  • ಮಗುವಿಗೆ ಪೌಷ್ಟಿಕ ಆಹಾರ ಒದಗಿಸುವುದು
  • ಮಗುವಿಗೆ ವಾಸಿಸಲು ಸ್ವಚ್ಛ ಹಾಗು ಸುರಕ್ಷಿತ ಆಶ್ರಯ
  • ಮಕ್ಕಳ ರಕ್ಷಣೆ, ಶಿಕ್ಷಣದ ಹಕ್ಕು, ಮತ್ತು ಲೈಂಗಿಕ ಅಪರಾಧಗಳಿಂದ ರಕ್ಷಣೆಯ ಕಾನೂನುಗಳ ಅನುಸರಣೆ

ಕೆಲಸದ ಸಮಯ: ಉದ್ಯೋಗದಾತರು ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

  • ಮಗುವಿನಿಂದ ದಿನಕ್ಕೆ ೫ ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ
  • ಮಗುವನ್ನು ವಿಶ್ರಾಂತಿಯಿಲ್ಲದೆ ಸತತ ೩ ಗಂಟೆಗಳಿಗಿಂತ ಹೆಚ್ಚಿನ ಕಾಲ ಕೆಲಸ ಮಾಡಿಸುವಂತಿಲ್ಲ
  • ಮಗುವನ್ನು ಸತತವಾಗಿ ೨೭ ದಿನಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ

ಮಲ ಹೊರುವವರ ಪುನರ್ವಸತಿ ಹೇಗೆ ಮಾಡಬಹುದು?

ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ, ಪುರಸಭೆ ಅಥವಾ ಪಂಚಾಯತಿಯ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಮಲ ಹೊರುವ ಪದ್ಧತಿ ಆಚರಣೆಯಲ್ಲಿದೆ ಎಂದು ಅನುಮಾನ ಬಂದಲ್ಲಿ, ಸಮೀಕ್ಷೆ ನಡೆಸಿ, ಮಲ ಹೊರುವವರ ಪಟ್ಟಿಯನ್ನು ತಯಾರಿಸಬೇಕು. ಈ ಪಟ್ಟಿಯಲ್ಲಿರುವವರ ಪುನರ್ವಸತಿಯ ಜವಾಬ್ದಾರಿ ಸಂಬಂಧಪಟ್ಟ ಪುರಸಭೆ ಅಥವಾ ಪಂಚಾಯತಿಯದ್ದಾಗಿದೆ. ಕಾನೂನುಬದ್ಧವಾಗಿ ಮಲ ಹೊರುವವರ ಪುನರ್ವಸತಿ ಮಾಡಿಸುವುದು ಆ ಜಿಲ್ಲೆಯ ಜಿಲ್ಲಾಧಿಕಾರಿಗಳ ಕರ್ತವ್ಯವಾಗಿದೆ. ಜಿಲ್ಲಾಧಿಕಾರಿಗಳು ಅಥವಾ ರಾಜ್ಯ ಸರ್ಕಾರವು ಕೆಲ ಜವಾಬ್ದಾರಿಗಳನ್ನು ಪುರಸಭೆಯ ಕೆಳಮಟ್ಟದ ಅಧಿಕಾರಿಗಳಿಗೆ ನಿಯೋಜಿಸಬಹುದು. ಪುನರ್ವಸತಿಯ ಪ್ರಕ್ರಿಯೆ ಕೆಳಕಂಡಂತಿದೆ:

  • ತಕ್ಷಣದ ಸಹಾಯ: ೧ ತಿಂಗಳೊಳಗೆ ಭಾವಚಿತ್ರವಿರುವ ಗುರುತಿನ ಚೀಟಿ ಮತ್ತು ಹಣ ಕೊಡುವುದು.
  • ಮಕ್ಕಳ ಶಿಕ್ಷಣ: ಅವರ ಮಕ್ಕಳಿಗೆ ಸರ್ಕಾರಿ ವಿದ್ಯಾರ್ಥಿವೇತನ ಕೊಡಿಸುವುದು
  • ಆಸ್ತಿ: ಜಮೀನನ್ನು ಒದಗಿಸಿ, ಆ ಜಮೀನಿನ ಮೇಲೆ ಮನೆ ಕಟ್ಟಿಸುವುದಕ್ಕಾಗಿ, ಅಥವಾ ಈಗಾಗಲೇ ಕಟ್ಟಿದ ಮನೆಯನ್ನು ಕೊಳ್ಳುವುದಕ್ಕೆ ದುಡ್ಡು ಕೊಡಲು ಸರ್ಕಾರ ಯೋಜನೆಗಳನ್ನು ಬಿಡುಗಡೆ ಮಾಡಬೇಕು
  • ಇನ್ನಿತರ ಉದ್ಯೋಗಗಳಿಗೆ ತರಬೇತಿ ನೀಡುವುದು: ಇನ್ನಿತರ ಕೌಶಲ್ಯಗಳ ತರಬೇತಿಯನ್ನು ಸಂಬಂಧಪಟ್ಟ ವ್ಯಕ್ತಿ ಅಥವಾ ಅವರ ಪರಿವಾರದ ಇನ್ನೋರ್ವ ವಯಸ್ಕ ಸದಸ್ಯರಿಗೆ ನೀಡುವುದು
  • ಸಾಲ: ಮಲ ಹೊರುವವರು ಅಥವಾ ಅವರ ಕುಟುಂಬದ ವಯಸ್ಕ ಸದಸ್ಯರು ಇನ್ನೋರ್ವ ಉದ್ಯೋಗ ಕ್ಷೇತ್ರಕ್ಕೆ ಕಾಲಿಡಲು ಸಾಹಾಯವಾಗುವಂತೆ ಸಹಾಯಧನ ಅಥವಾ ಕಡಿಮೆ ಬಡ್ಡಿಯ ಸಾಲಗಳನ್ನು ಒದಗಿಸುವಂತಹ ಯೋಜನೆಗಳನ್ನು ಸರ್ಕಾರ ಹೊರತರಬೇಕು
  • ಇನ್ನಿತರ ಸಹಾಯ: ಬೇರೆ ಯಾವ ರೀತಿಯ ಕಾನೂನಾತ್ಮಕ ಅಥವಾ ಇನ್ನಿತರ ಸಹಾಯವನ್ನೂ ಮಾಡಲು ಸರ್ಕಾರ ಮುಂದೆ ಬರಬಹುದು
  • ಸರ್ಕಾರಿ ಯೋಜನೆಗಳು: “ಮಲ ಹೊರುವವರ ಪುನರ್ವಸತಿಗಾಗಿ ಸ್ವಯಂ ಉದ್ಯೋಗ ಯೋಜನೆ” ಎಂಬ ಯೋಜನೆಯನ್ನು ಕೇಂದ್ರ ಸರ್ಕಾರಸ್ಥಾಪಿಸಿದೆ. ಹಾಗು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ರಾಜ್ಯ ಮಟ್ಟದ ಸಂಪರ್ಕ ಸಂಸ್ಥೆಗಳ ಮೂಲಕ ಅನೇಕ ಸಾಲ ಯೋಜನೆಗಳನ್ನು ಹೊರತಂದಿದೆ.

 

ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಶಾಲೆಗಳ ಪಾತ್ರ

ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಶಾಲೆಗಳದ್ದು ಮಹತ್ತರ ಪಾತ್ರವಿದೆ. ಮಕ್ಕಳ ಶಿಕ್ಷಣದ ಹಕ್ಕು ಅವರು ಬಾಲ ಕಲಾವಿದರಾಗಿ, ಅಥವಾ ಕೌಟುಂಬಿಕ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಅವರಿಗೆ ಅನ್ವಯಿಸುತ್ತದೆ.

ಮಗು ಕೌಟುಂಬಿಕ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದು, ಸತತವಾಗಿ ೩೦ ದಿನಗಳ ಕಾಲ ಶಾಲೆಗೆ ಬರಲಿಲ್ಲವಾದಲ್ಲಿ, ಆ ಶಾಲೆಯ ಪ್ರಾಂಶುಪಾಲರು ಮಗುವಿನ ಅನುಪಸ್ಥಿತಿಯ ಬಗ್ಗೆ ತನಿಖಾಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ.

ಇನ್ನು, ಯಾವುದೇ ಮಗು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ ವಿಷಯ ಶಾಲೆಯ ಸದಸ್ಯರಿಗೆ ಗೊತ್ತಿದ್ದಲ್ಲಿ, ಅದರ ವರದಿ ನೀಡುವುದು ಅವರ ಜವಾಬ್ದಾರಿಯಾಗಿದೆ.